ಅಪ್ಪ ‘ಚೆಕ್’, ಮಗ ‘RTGS’ ಮೂಲಕ ಲಂಚ ಪಡೆಯುತ್ತಾರೆ: ಸಿದ್ಧರಾಮಯ್ಯ

ಮೈಸೂರು, ಡಿ. 18: ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ. ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಅಪ್ಪ ಚೆಕ್ ಮೂಲಕ ಲಂಚ ಪಡೆದರೆ, ಮಗ ಆರ್‌ಟಿಜಿಎಸ್‌ ಮೂಲಕ ಲಂಚ ಪಡೆಯುತ್ತಾನೆ ಎಂದು ಆರೋಪಿಸಿದರು.

ಮೈಸೂರಿನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಸಿಎಂ ಆಗಿದ್ದಾಗ ಯಡಿಯೂರಪ್ಪ ಚೆಕ್ ಮೂಲಕ ಲಂಚ ತೆಗೆದುಕೊಂಡಿದ್ದರು. ಆದರೆ ಈಗ ವಿಜಯೇಂದ್ರ ಮೂಲಕ ಲಂಚ ಪಡೆದಿದ್ದು, 7.40 ಕೋಟಿ ರೂ. ವಿಜಯೇಂದ್ರನ ಅಕೌಂಟ್ ಗೆ RTGS ಮೂಲಕ ವರ್ಗಾವಣೆ ಆಗಿದೆ ಎಂದು ಆರೋಪಿಸಿದರು.

ಈ ವಿಚಾರವನ್ನು ಹೌಸ್ ನಲ್ಲಿ ಪ್ರಶ್ನೆ ಮಾಡಿದಾಗ “ನನ್ನ ಮಗ ಇಲ್ಲಿಲ್ಲ, ಆದ ಕಾರಣ ಅವನ ಹೆಸರು ಹೇಳಬೇಡಿ ಅಂದ್ರು”. ಅದಕ್ಕೆ ನಾನು ಯಡಿಯೂರಪ್ಪನ ಮಗ XYZ ಅಂತ ಹೇಳಿದೆ ಎಂದರು.

ಕಳೆದ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ಸೋಲು ನಮ್ಮ ಕಾಂಗ್ರೆಸ್ ಪಕ್ಷದ ಕೆಲವರ ಪಿತೂರಿಯಿಂದ ಆಗಿದೆ. ಈಗ ಮತ್ತೆ ಇದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಅಂತೀರಾ. ಮತ್ತೆ ಹಿಂದಿನಿಂದ ಚೂರಿ ಹಾಕಿದ್ರೆ ಏನು ಮಾಡೋದು ಅಂತ ಸಿದ್ದರಾಮಯ್ಯ ಪ್ರಶ್ನಿಸಿದರು.

Exit mobile version