Hyderabad: ರಾಹುಲ್ ಗಾಂಧಿಯವರೇ (Rahul Gandhi) ನಿಮಗೆ 50 ವರ್ಷ ದಾಟಿದೆ. ಹೀಗಾಗಿಯೇ (Asaduddin Owaisi vs Rahul Gandhi) ಏಕಾಂಗಿತ ಕಾಡುತ್ತಿದೆ. ಆದರೆ ಅದು ನಿಮ್ಮ
ನಿರ್ಧಾರ. ನಾವು ಯಾರ ಜೀವನದಲ್ಲಿಯೂ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ, ನಾವು ಯಾರಿಗೂ ತೊಂದರೆಯನ್ನೂ ನೀಡುವುದಿಲ್ಲ. ಆದರೆ ಯಾರಾದರೂ ನಮ್ಮನ್ನು ಚುಡಾಯಿಸಿದರೆ, ಅವರನ್ನು ನಾವು ಬಿಡುವುದಿಲ್ಲ.
ನೀವು ಕೂಡಾ ನಿಮ್ಮನ್ನು ಚುಡಾಯಿಸಿದವರನ್ನು ಬೀಡಬೇಡಿ ಎಂದು ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ (Asaduddin Owaisi)
ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.
ನವೆಂಬರ್ (November) 25 ರಂದು ತೆಲಂಗಾಣದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಬಿಆರ್ಎಸ್ ಬಿಜೆಪಿ ಮತ್ತು ಎಐಎಂಐಎಂ (AIMIM) ಮೂರು
ಪಕ್ಷಗಳು ಒಂದೇ ಎಂದು ಟೀಕಿಸಿದ ನಂತರ (Asaduddin Owaisi vs Rahul Gandhi) ಓವೈಸಿಯಿಂದ ಈ ಪ್ರತಿಕ್ರಿಯೆ ಬಂದಿದೆ.
“ಮೋದಿಜಿ ಕೆ ದೋ ದೋಸ್ತ್ ಹೈ ಯಾರ್ (Modiji ke do dost hai yaar), ಓವೈಸಿ ಔರ್ ಕೆಸಿಆರ್ (ಪ್ರಧಾನಿ ಮೋದಿಗೆ ಇಬ್ಬರು ಸ್ನೇಹಿತರಿದ್ದಾರೆ – ಓವೈಸಿ ಮತ್ತು ತೆಲಂಗಾಣ ಮುಖ್ಯಮಂತ್ರಿ
ಚಂದ್ರಶೇಖರ್ ರಾವ್). ಮೋದಿ ಪ್ರಧಾನಿಯಾಗಬೇಕೆಂದು ಕೆಸಿಆರ್ ಬಯಸಿದ್ದಾರೆ ಮತ್ತು ಕೆಸಿಆರ್ ಮುಖ್ಯಮಂತ್ರಿಯಾಗಬೇಕೆಂದು ಮೋದಿ ಬಯಸಿದ್ದಾರೆ.
ಆದರೆ ಕಾಂಗ್ರೆಸ್ (Congress) ಪಕ್ಷವು ಮೊದಲು ತೆಲಂಗಾಣದಲ್ಲಿ ಬಿಆರ್ಎಸ್ ಮತ್ತು ನಂತರ ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಸೋಲಿಸುವ ಗುರಿ ಹೊಂದಿದೆ. ಮುಂಬರುವ
ತೆಲಂಗಾಣ (Telangana) ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಚಂಡ ಬಹುಮತದೊಂದಿಗೆ ಗೆಲ್ಲಲಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದರು.
ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಗೆ ನವೆಂಬರ್ 30 ರಂದು ಮತದಾನ ನಡೆಯಲಿದೆ. ತೆಲಂಗಾಣ, ಛತ್ತೀಸ್ಗಢ (Chhattisgarh), ಮಿಜೋರಾಂ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ
ವಿಧಾನಸಭೆ ಚುನಾವಣೆಯ ಫಲಿತಾಂಶ ಡಿಸೆಂಬರ್ (December) 3 ರಂದು ಹೊರಬೀಳಲಿದೆ.
ಇದನ್ನು ಓದಿ: ನಿಮಗೆ 50 ವರ್ಷದಾಟಿದ್ದು ಏಕಾಂಗಿತನ ಕಾಡುತ್ತಿದೆ : ರಾಹುಲ್ ಗಾಂಧಿಗೆ ಅಸಾದುದ್ದೀನ್ ಓವೈಸಿ ಟಾಂಗ್