ಅಂತರ್ಜಾತಿ ವಿವಾಹ ಕಲಹ ; ನಾವು ಕೊಲೆಗಾರರ ​​ಪರ ನಿಲ್ಲುವುದಿಲ್ಲ : ಅಸಾದುದ್ದೀನ್ ಓವೈಸಿ!

Asaduddin owaisi

ಹೈದರಾಬಾದ್: ತೆಲಂಗಾಣದ(Telangana) ಸರೂರ್‌ನಗರದಲ್ಲಿ ನಡೆದ ಮರ್ಯಾದೆಹತ್ಯೆ ಘಟನೆಯನ್ನು ಶುಕ್ರವಾರ ಖಂಡಿಸಿರುವ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi), ಸಂವಿಧಾನ(Constitution) ಮತ್ತು ಇಸ್ಲಾಂ ಪ್ರಕಾರ ಇದೊಂದು ಅಪರಾಧ ಕೃತ್ಯ ಎಂದು ಹೇಳಿದ್ದಾರೆ.

ತೆಲಂಗಾಣದ ಹೈದರಾಬಾದ್‌ನಲ್ಲಿ(Hyderabad) ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರೂರ್‌ನಗರದಲ್ಲಿ ನಡೆದ ಘಟನೆಯನ್ನು ನಾವು ಖಂಡಿಸುತ್ತೇವೆ! ಮಹಿಳೆ ಇಷ್ಟಪಟ್ಟು ಮದುವೆಯಾಗಲು ನಿರ್ಧರಿಸಿದ್ದಾಳೆ, ಆಕೆಯ ಸಹೋದರನಿಗೆ ಪತಿಯನ್ನು ಕೊಲ್ಲುವ ಹಕ್ಕು ಇಲ್ಲ, ಇದು ಅಪರಾಧ ಕೃತ್ಯವಾಗಿದೆ. ಸಂವಿಧಾನ ಮತ್ತು ಇಸ್ಲಾಂ ಪ್ರಕಾರ ಕೆಟ್ಟ ಅಪರಾಧ. ನಿನ್ನೆಯಿಂದ ಈ ಘಟನೆಗೆ ಮತ್ತೊಂದು ರಂಗು ನೀಡಲಾಗುತ್ತಿದೆ. ಇಲ್ಲಿನ ಪೊಲೀಸರು ಆರೋಪಿಯನ್ನು ತಕ್ಷಣ ಬಂಧಿಸಿಲ್ಲವೇ? ಅವನನ್ನು ಬಂಧಿಸಿದ್ದಾರೆ!

ನಾವು ಹಂತಕರ ಜೊತೆ ನಿಲ್ಲುವುದಿಲ್ಲ. ಅವರಿಗೆ ಸಾಥ್ ನೀಡುವ ಕೆಲಸ ಎಂದಿಗೂ ಮಾಡುವುದಿಲ್ಲ. ಜಹಾಂಗೀರ್‌ಪುರಿ ಮತ್ತು ಖಾರ್ಗೋನ್‌ನಲ್ಲಿ ನಡೆದ ಕೋಮುಗಲಭೆ ಘಟನೆಗಳ ಕುರಿತು ಮಾತನಾಡಿ, “ಯಾವುದೇ ಧಾರ್ಮಿಕ ಮೆರವಣಿಗೆಯನ್ನು ಹೊರತೆಗೆದರೂ, ಮಸೀದಿಯ ಮೇಲೆ ಹೈ ರೆಸಲ್ಯೂಶನ್ ಸಿಸಿಟಿವಿ ಹಾಕಬೇಕು ಮತ್ತು ಮೆರವಣಿಗೆ ಚಲಿಸುವಾಗ ಅತೀ ಮುಖ್ಯವಾಗಿ ಇರಬೇಕು ಎಂದು ನಾನು ಹೇಳಲು ಬಯಸುತ್ತೇನೆ. ಯಾರು ಕಲ್ಲು ಎಸೆಯುತ್ತಿದ್ದಾರೆಂದು ಜಗತ್ತಿಗೆ ತಿಳಿಯುವಂತೆ ಫೇಸ್‌ಬುಕ್‌ನಲ್ಲಿ ಲೈವ್ ಟೆಲಿಕಾಸ್ಟ್ ಮಾಡಿ.

ಗುರುವಾರ ಮುಂಜಾನೆ, ಹೈದರಾಬಾದ್‌ನ ಸರೂರ್‌ನಗರ ಪೊಲೀಸರು ಬಿಲ್ಲಿಪುರಂ ನಾಗರಾಜು ಹತ್ಯೆಯಲ್ಲಿ ಭಾಗಿಯಾದ ಆಶ್ರಿನ್ ಸುಲ್ತಾನಾ ಅಲಿಯಾಸ್ ಪಲ್ಲವಿಯ ಇಬ್ಬರು ಸಂಬಂಧಿಕರನ್ನು ಬಂಧಿಸಿದ್ದಾರೆ. ಬಿಲ್ಲಿಪುರಂ ನಾಗರಾಜು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆಶ್ರಿನ್ ಸುಲ್ತಾನಾ ಅಲಿಯಾಸ್ ಪಲ್ಲವಿ ಸಂಬಂಧಿಕರಿಬ್ಬರನ್ನು ಹೈದರಾಬಾದ್‌ನ ಸರೂರ್‌ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಆಶ್ರಿನ್ ಸುಲ್ತಾನ ಮತ್ತು ಮೊಹಮ್ಮದ್ ಮಸೂದ್ ಅಹ್ಮದ್ ಅವರ ಸಹೋದರ ಸೈಯದ್ ಮೊಬಿನ್ ಅಹ್ಮದ್ ಎಂದು ಗುರುತಿಸಲಾಗಿದೆ. ಆರೋಪಿಗಳಿಬ್ಬರನ್ನೂ ಗುರುವಾರ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕಾಗಿ ಗೌರವಾನ್ವಿತ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದು ಸರೂರನಗರ ಪೊಲೀಸರು ತಿಳಿಸಿದ್ದಾರೆ.

Exit mobile version