“ಗುಳುಂ ನಾರಾಯಣ” ಎಂಬ ಫಲಕ ಹಿಡಿದು ಅಶ್ವಥ್ ನಾರಾಯಣ್ ರಾಜೀನಾಮೆಗೆ ಆಗ್ರಹ!

politics

ರಾಜ್ಯದಲ್ಲಿ ಪಿಎಸ್‍ಐ ನೇಮಕಾತಿ ಪರೀಕ್ಷೆ(PSI Recruitment Scam) ಅಕ್ರಮ(Illegal) ಇಡೀ ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದ್ದು, ಇಲ್ಲಿಯವರೆಗೂ ಕಂಡ ಹಗರಣಗಳಲ್ಲಿ ಪಿಎಸ್‍ಐ ಪರೀಕ್ಷೆ ಹಗರಣ ಪ್ರಮುಖವಾಗಿದೆ.

ಪಿಎಸ್‍ಐ ಪರೀಕ್ಷೆ ಅಕ್ರಮದ ಕಿಂಗ್‍ಪಿನ್ ಮಾಜಿ ಬಿಜೆಪಿ ಮಹಿಳಾ ಅಧ್ಯಕ್ಷೆ ದಿವ್ಯಾ ಹಾಗರಗಿಯನ್ನು(Divya Hagaragi) ಸಿಐಡಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ದಿವ್ಯಾ ಹಾಗರಗಿ ಬಂಧನವಾದರೆ ಮೋಸ ಹೋದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುತ್ತದೆ ಎಂದು ಭಾವಿಸಿದವರಿಗೆ ಈಗ ಬೇಸರದ ಛಾಯೇ ಆವರಿಸಿದೆ. ಹೌದು, ದಿವ್ಯಾ ಹಾಗರಗಿಯ ಬಂಧನದಿಂದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಲ್ಲ! ಪಿಎಸ್‍ಐ ನೇಮಕಾತಿ ಪರೀಕ್ಷೆಗಾಗಿ 2-3 ವರ್ಷಗಳ ತರಬೇತಿ ಪಡೆದು, ನಿರಂತರ ಶ್ರಮವಹಿಸಿ ವಿದ್ಯಾಭ್ಯಾಸ ಮಾಡಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಈ ಹಗರಣದಿಂದ ತಮ್ಮ ಕನಸ್ಸು ನುಚ್ಚುನೂರಾಗಿದೆ.

ವಿದ್ಯಾರ್ಥಿಗಳ ಪ್ರಾಮಾಣಿಕ ಶ್ರಮವನ್ನು ಭ್ರಷ್ಟ ಅಧಿಕಾರಿಗಳು ತಮ್ಮ ಅಕ್ರಮದ ಮೋಜಿಗಾಗಿ ಬಳಸಿಕೊಂಡಿರುವುದು ನಿಜಕ್ಕೂ ಅಕ್ಷಮ್ಯ! ಭ್ರಷ್ಟ ಅಧಿಕಾರಿಗಳು, ಸಚಿವರ ಸುಖದ ಸುಪ್ಪತ್ತಿಗೆಗೆ ಪ್ರಾಮಾಣಿಕ ವಿದ್ಯಾರ್ಥಿಗಳೇ ಬಲಿಪಶುಗಳಾಗಿರುವುದು ಇಡೀ ರಾಜ್ಯವನ್ನು ಕೆರಳಿಸಿದೆ. ಸದ್ಯ ವಿದ್ಯಾರ್ಥಿಗಳು ತಮಗೆ ನ್ಯಾಯ ಒದಗಿಸಿಕೊಡಿ ಎಂದು ಮನವಿ ಮಾಡಿದರೆ, ಅತ್ತ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಇದೊಂದು ಭ್ರಷ್ಟ ಸರ್ಕಾರ, 40% ಕಮಿಷನ್ ಸರ್ಕಾರ ಎಂದು ಆರೋಪಿಸುತ್ತಿದೆ.

ಈ ನಡುವೆ ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ್ ನಾರಾಯಣ್ ಅವರ ಕಛೇರಿ ಮುಂಭಾಗ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಧರಣಿ ನಡೆಸಿದ್ದಾರೆ. “ಗುಳಂ ನಾರಾಯಣ” ಎಂಬ ನಾಮಫಲಕ ಹಿಡಿದು ಪಿಎಸ್‍ಐ ಅಕ್ರಮಕ್ಕೆ ನಿಮ್ಮಂತ ಸಚಿವರೇ ಕಾರಣ, ನೀವು ಭ್ರಷ್ಟ ಸಚಿವರು ಎಂದು ಕೂಗಿ ರಾಜೀನಾಮೆ ನೀಡಲು ಆಗ್ರಹಿಸಿದ್ದಾರೆ.

Exit mobile version