ಯುವ ಕ್ರಿಕೆಟಿಗ ಹೃದಯಾಘಾತಕ್ಕೆ ಬಲಿ

ನವದೆಹಲಿ ಅ 16 : ಸೌರಾಷ್ಟ್ರದ ಬ್ಯಾಟ್ಸ್ಮನ್, ಭಾರತದ ಅಂಡರ್ -19 ತಂಡದ ಮಾಜಿ ನಾಯಕ ಮತ್ತು 2019-20 ರ ಋತುವಿನಲ್ಲಿ ರಣಜಿ ಟ್ರೋಫಿ ವಿಜೇತ ತಂಡದ ಸದಸ್ಯ ಅವಿ ಬರೋಟ್(29) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮನೆಯಲ್ಲಿ ಅಸ್ವಸ್ಥಗೊಂಡ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಅವರು ನಿಧನರಾಗಿದ್ದಾರೆ.ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಪತ್ನಿಗೆ ಪತಿಯ ಅಗಲಿಕೆ ನಿಜಕ್ಕೂ ಆಘಾತ ತಂದಿದೆ.ಅವಿಯ ತಂದೆ 42 ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಈಗ ಅವಿ ಬರೋಟ್ ನಿಧನ ಹಿನ್ನಲೆಯಲ್ಲಿ  ಅವರ ತಾಯಿ ಮತ್ತು ನಾಲ್ಕು ತಿಂಗಳ ಗರ್ಭಿಣಿ ಪತ್ನಿಗೆ ದಿಕ್ಕೆ ತೋಚದಂತಾಗಿದೆ.

ಈ ಬಗ್ಗೆ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(SCA) ಅಧ್ಯಕ್ಷ ಜಯದೇವ್ ಶಾ ಹೇಳಿಕೆ ನೀಡಿದ್ದು, ಈ ದುರಂತವನ್ನು ಒಪ್ಪಿಕೊಳ್ಳಲು ನನಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಯುವ ಕ್ರಿಕೆಟಿಗ ಕಳೆದ ವಾರವಷ್ಟೇ ಸ್ಥಳೀಯ ಟೂರ್ನಿಯಲ್ಲಿ ಸ್ಪರ್ಧಿಸುತ್ತಿದ್ದರು.ಅವರು ಬಲಗೈ ಬ್ಯಾಟ್ಸ್ಮನ್ ಆಗಿದ್ದರು, ಅವರು ಆಫ್-ಬ್ರೇಕ್‌ಗಳನ್ನು ಕೂಡ ಬೌಲರ್ ಕೂಡ ಆಗಿದ್ದರು . ನಾನು ಇನ್ನೂ ಆಘಾತ ಸ್ಥಿತಿಯಲ್ಲಿದ್ದೇನೆ.ಅವನಿಗೆ ಕೇವಲ 29 ವರ್ಷ ಮತ್ತು ಕಳೆದ ವಾರ ರಾಜ್ಯಮಟ್ಟದ ಜೀವನ್ ಟ್ರೋಫಿ ಟೂರ್ನಮೆಂಟ್ ಇತ್ತು, ಅವರು ಅದರಲ್ಲಿ ಬಂದು ಆಡಿದರು. ಎಂದು ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ

Exit mobile version