20 ವರ್ಷಗಳ ಬಳಿಕ ಹೊಸ ಅವತಾರದಲ್ಲಿ  ಕಾಣಿಸಿಕೊಳ್ಳಲ್ಲಿರುವ ‘ಬಾಬಾ’ ಸಿನಿಮಾ 

Bengaluru : ಕಾಂತಾರ(Kantara) ಸಿನಿಮಾ ವೀಕ್ಷಿಸಿದ ತಮಿಳು ಖ್ಯಾತ ನಟ ರಜನಿಕಾಂತ್(Rajnikanth) ಅವರು ಕಾಂತಾರ ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ(baba cinema re-release) ಅವರನ್ನು ತನ್ನ ‌ಮನೆಗೆ ಕರೆಸಿ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿದರು.

ಜೊತೆಗೆ ತಮ್ಮ ಸಿನಿಮಾದ ಬಗ್ಗೆ  ಚರ್ಚೆ ಸಹ ನಡೆಸಿದರು. ಕಾಂತಾರ ಚಿತ್ರ ನೋಡಿ ಪ್ರೇರಿತರಾದ ರಜಿನಿಕಾಂತ್ ಅವರು ಇದೀಗ ಇಪ್ಪತ್ತು ವರ್ಷದ ಹಳೆಯ ಸಿನಿಮಾವಾದ ‘ಬಾಬಾ’(baba cinema re-release) ಚಿತ್ರವನ್ನು ಮರು ಬಿಡುಗಡೆ ಮಾಡಲು ಚಿಂತಿಸಿದ್ದಾರೆ. ಕಾಂತಾರ ಸಿನಿಮಾ ಮನುಷ್ಯ ಶಕ್ತಿಗೆ ಮೀರಿದ ಹಾಗೂ ಆದರ್ಶಮಯ ವ್ಯಕ್ತಿತ್ವದ ನಾಯಕನ ಕತೆಯನ್ನು ಒಳಗೊಂಡಿರುವ ಸಿನಿಮಾ ಆಗಿದ್ದು,

ಇದನ್ನೂ ಓದಿ : https://vijayatimes.com/priyank-questions-bjp-govt/

ಈ ಬಗ್ಗೆ ರಿಷಬ್ ಶೆಟ್ಟಿ(Rishab shetty) ಅವರಿಂದ ಕೇಳಿ ತಿಳಿದ ರಜಿನಿಕಾಂತ್ ಅವರು ಅದೇ ಸಮಯದಲ್ಲಿ ತಮ್ಮ ಬಾಬಾ ಸಿನಿಮಾದ ಬಗ್ಗೆ ಚರ್ಚಿಸಿದರು.

2002 ರಲ್ಲಿ ಬಿಡುಗಡೆಯಾದ ಈ ಸಿನಿಮಾವು ಬಹಳ ಹಳೆಯ ಸಿನಿಮಾವಾಗಿದೆ. ಇದೇ ಸಿನಿಮಾವನ್ನು ಇನ್ನಷ್ಟು ಅಪ್ ಗ್ರೇಡ್ ಮಾಡಿ, ಇದರ ಜೊತೆಗೆ  ಕೆಲವು ದೃಶ್ಯವನ್ನು ಸೇರಿಸಿ ಇದೀಗ ಮರು ಬಿಡುಗಡೆ ಮಾಡುವ ಪ್ರಯತ್ನದಲ್ಲಿದ್ದಾರೆ.

https://youtu.be/5cyV0anFkVw

ಒಟ್ಟಾರೆಯಾಗಿ  ಬಾಬಾ ಸಿನಿಮಾಕ್ಕೆ ಹೊಸತನ ತುಂಬಿ ರಜಿನಿಕಾಂತ್ ಅವರ ಹುಟ್ಟುಹಬ್ಬದ ದಿನವಾದ ಡಿಸೆಂಬರ್ 12 ರಂದು  ತಮಿಳುನಾಡು(Tamilnadu) ಸೇರಿದಂತೆ ಹಲವು ರಾಜ್ಯದಲ್ಲಿ ಬಾಬಾ ಸಿನಿಮಾ ಮರು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಬಾರಿಯಾದರೂ ಈ ಸಿನಿಮಾ ರಜನಿಕಾಂತ್ ರವರ ಕೈ ಹಿಡಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Exit mobile version