ಬೆಂಗಳೂರು, ಜ. 19: ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನೀಡಲಾಗುವ ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಮತ್ತು ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿ ಹಾಗೂ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ವರ್ಷದ ವ್ಯಕ್ತಿ ಪ್ರಶಸ್ತಿಗೆ ವಿಪ್ರೊ ಸಂಸ್ಥೆ ಅಧ್ಯಕ್ಷ ಅಜೀಂ ಪ್ರೇಮ್ ಜಿ ಅವರನ್ನು ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿಗೆ ನಾರಾಯಣ ಹೃದಯಾಲಯದ ಡಾ.ದೇವಿಪ್ರಸಾದ್ ಶೆಟ್ಟಿ ಮತ್ತು ಚಿತ್ರನಟ ಕಿಚ್ಚ ಸುದೀಪ್ ಅವರನ್ನು ಆಯ್ಕೆ ಮಾಡಲಾಗಿದೆ.
ಉಳಿದಂತೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಎಸ್. ದೇವನಾಥ್, ಕೆ. ಶೇಷಚಂದ್ರಿಕ, ಪಿ.ರಾಮಕೃಷ್ಣ ಉಪಾಧ್ಯ, ಜಿ.ಎಸ್.ನಾರಾಯಣರಾವ್(ಜೆಸುನಾ), ಎಚ್.ಬಿ.ದಿನೇಶ್, ಡಾ.ಸಿ.ಎಸ್.ದ್ವಾರಕಾನಾಥ್, ಮುಂಜಾನೆ ಸತ್ಯ, ಗೇಬ್ರಿಯಲ್ ವಾಝ್, ಸಾಗ್ಲೆರೆ ರಾಮಸ್ವಾಮಿ, ಶ್ರೀಮತತಿ ಶಾಂತಲಾ ಧರ್ಮರಾಜ್, ಉದಯ ಮರಕಿಣಿ, ಎಸ್.ಕೆ. ಶ್ಯಾಂಸುಂದರ್, ಎಂ.ಸಿ. ಪಾಟೀಲ್, ಆರ್.ಶ್ರೀಧರ್ (ಉದಯ ಟಿವಿ), ಇಂದ್ರಜಿತ್ ಲಂಕೇಶ್, ವೈ.ಜಿ. ಜಗದೀಶ್, ಕೆ.ಎಂ.ಮನು ಅಯ್ಯಪ್ಪ, ಎಸ್.ಲಕ್ಷ್ಮಿನಾರಾಯಣ, ಪರಮೇಶ್ವರ್ ಗುಂಡ್ಕಲ್, ರಾಘವೇಂದ್ರ ಹುಣಸೂರು, ಕೆ.ಆದಿನಾಯಣಮೂರ್ತಿ, ವಿಶ್ವನಾಥ್ ಸುವರ್ಣ, ಸುಧಾಕರ ಕೆ.ದರ್ಬೆ, ಡಾ.ಎಂ.ಎಸ್.ಮಣಿ, ಆರ್.ಎಚ್.ನಟರಾಜ್ ಸೇರಿದಂತೆ 25 ಜನ ಹಿರಿಯ ಪತ್ರಕರ್ತರನ್ನು ಕಾರ್ಯಕಾರಿ ಸಮಿತಿಯಲ್ಲಿ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರಧಾನ ಸಮಾರಂಭ ಇದೇ ತಿಂಗಳ ಮೂರನೇ ವಾರದಲ್ಲಿ ನಡೆಯಲಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಿದ್ದಾರೆ ಎಂದು ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಕೆ.ಸದಾಶಿವ ಶೆಣೈ ಹೇಳಿದ್ದಾರೆ.