ಪತ್ನಿ ಮೇಲಿನ ಅನುಮಾನಕ್ಕೆ ತಂದೆಯಿಂದಲೇ ಮಗುವಿನ ಹತ್ಯೆ

ಬೆಳಗಾವಿ ಸೆ 20 : ತಂದೆಯೇ ತನ್ನ ಎರಡು ವರ್ಷದ ಸ್ವಂತ ಮಗುವನ್ನು ಕೊಳವೆ ಬಾವಿಗೆ ಹಾಕಿ ಕೊಂದ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರಿನಲ್ಲಿ ನಡೆದಿದೆ.

 ಸಿದ್ದಪ್ಪ ಹಸರೆ ಎಂಬ ಎಂಬಾತ ತನ್ನ ಹೆತ್ತ ಮಗುವನ್ನೇ ತೆರೆದ ಕೊಳವೆ ಬಾವಿಗೆ ಬಿಸಾಕಿ ನಂತರ ಅಪಹರಣವಾಗಿದೆ ಎಂದು ನಾಟಕವಾಡಿದ್ದ. ಈ ಸಂಬಂಧ ಪೊಲೀಸ್‌ ಠಾಣೆಗೂ ಕೂಡ ದೂರು ನೀಡಿದ್ದ.

ಅದರೆ ಮಗುವಿನ ಕಾಲಿಗೆ ಸ್ವತಃ ತಂದೆ ಸಿದ್ದಪ್ಪನೇ ಬಟ್ಟೆ ಕಟ್ಟಿ ಬೋರವೆಲ್‌ಗೆ ಬಿಸಾಕಿ ಯಾರಿಗೂ ಅನುಮಾನ ಬಾರದಂತೆ ಕುಟುಂಬಸ್ಥರು ಮಗುವಿನ ಶೋಧಕಾರ್ಯ ಮುಂದುವರೆಸಿದಾಗಲೂ ಇತನೂ ಕೂಡ ಮಗನನ್ನು ಹುಡುಕಾಡುವ ನಾಟಕವಾಡಿದ್ದ. ಆದರೆ ತನ್ನ ಮಗನೆ ಆ ಮುಗುವನ್ನು ಕೊಲೆ ಮಾಡಿದ್ದಾನೆ ಎಂದು ಮುಗವಿನ ಅಜ್ಜಿ ಗಂಭೀರ ಆರೋಪ ಮಾಡಿದ್ದ ಹಿನ್ನಲೆಯಲ್ಲಿ ಪೊಲೀಸರು ತನಿಖೆ ನಡೆಸಿದಾಗ ತಂದೆಯೇ ತನ್ನ ಮಗುವನ್ನು ಕೊಳವೆಬಾವಿಗೆ ಬಿಸಾಕಿದ್ದಾನೆ ಎಂದು ತಿಳಿದು ಬಂದಿದ್ದು, ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಕೊಳವೆ ಬಾವಿಯಲ್ಲಿ 9 ಮೀಟರ್ ಆಳದಲ್ಲಿ ಬಿದ್ದಿದ್ದ ಮಗವನ್ನು ಕಾರ್ಯಾಚರಣೆ ನಡೆಸಿ ಮಗುವನ್ನು ಮೇಲಕ್ಕೆತ್ತಿದ್ದರು ಆದರೆ ಮಗುವು ಕೊಳವೆ ಬಾವಿಯಲ್ಲೇ ಅಸುನೀಗಿತ್ತು.

 ಆರೋಪಿ ನ್ಯಾಯಾಂಗ ಬಂಧನಕ್ಕೆ : ಸಿದ್ದಪ್ಪ ತನ್ನ ಪತ್ನಿ ರಾಜಶ್ರೀ ಮೇಲಿನ ಅನುಮಾನಕ್ಕೆ ತನ್ನದೇ ಎರಡು ವರ್ಷದ ಮಗ ಶರತನನ್ನು ಕೊಲೆ ಮಾಡಿ ಕೊಳವೆ ಬಾವಿಯಲ್ಲಿ ಬಚ್ಚಿಟ್ಟಿದ್ದ. ಪೊಲೀಸ್ ತನಿಖೆ ಬಳಿಕ ತಾನೇ ಕೊಲೆ ಮಾಡಿರುವುದಾಗಿ ಸಿದ್ದಪ್ಪ ಒಪ್ಪಿಕೊಂಡಿದ್ದಾನೆ. ಆ ಹಿನ್ನೆಲೆಯಲ್ಲಿ ಆತನನ್ನ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಸಂಬಂಧ ರಾಯಬಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version