Delhi: ಬಿಲ್ಕಿಸ್ ಬಾನೋ (Bilkis Bano) ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, 11 ಅಪರಾಧಿಗಳನ್ನು ಬಿಡುಗಡೆಗೊಳಿಸಿದ ಗುಜರಾತ್ ಸರ್ಕಾರದ ವಿನಾಯತಿ ಆದೇಶವನ್ನು ಸುಪ್ರೀಂ ಕೋರ್ಟ್ @Supreme Court ತಡೆಹಿಡಿದಿದೆ.
ಕೋರ್ಟ್ 11 ಅಪರಾಧಿಗಳನ್ನು ಬಿಡುಗಡೆ ಪ್ರಶ್ನಿಸಿ ಸಲ್ಲಿಸಿದ್ದ ಬಿಲ್ಕಿಸ್ ಬಾನೋ ಹಾಗೂ ಇತರರ ಅರ್ಜಿಯನ್ನು ಮಾನ್ಯ ಮಾಡಿದ್ದು, ಈ ವಿಚಾರಣೆ ವೇಳೆ ಗುಜರಾತ್ (Gujarat) ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ತನ್ನ ತೀರ್ಮಾನವನ್ನು ಸಮರ್ಥಿಸಿಕೊಂಡಿತ್ತು. ಮುಖ್ಯ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ (B V Nagarathna) ಮತ್ತು ಉಜ್ಜಲ್ ಭುಯಾನ್ ನೇತೃತ್ವದ ಪೀಠವು ತೀರ್ಪನ್ನು ನೀಡಿದೆ.
ಏನಿದು ಪ್ರಕರಣ?
ಬಿಲ್ಕಿಸ್ ಬಾನೋ ಮೇಲೆ 2002ರ ಗುಜರಾತ್ ಹಿಂಸಾಚಾರದ ವೇಳೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅಲ್ಲದೇ ಆಕೆಯ ಮೂರು ವರ್ಷದ ಮಗು ಸೇರಿ 7 ಮಂದಿಯನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ನಂತರ ಕೋರ್ಟ್ 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿತ್ತು. ಆದರೆ ಗುಜರಾತ್ ಸರ್ಕಾರ ಅವಧಿಗೂ ಮೊದಲೇ ಅಂದರೆ ಆಗಸ್ಟ್ 15, 2022ರಂದು ಅಪರಾಧಿಗಳನ್ನು ಜೈಲಿನಿಂದ (Jail) ಬಿಡುಗಡೆ ಮಾಡಿತ್ತು.
ವಯಸ್ಸಿನ ಕಾರಣ ಹಾಗೂ ಸೆರೆವಾಸದಲ್ಲಿನ ಸನ್ನಡತೆ ಆಧಾರದ ಮೇಲೆ ರಿಲೀಸ್ ಮಾಡಲಾಗಿದೆ ಎಂದು ಸರ್ಕಾರ ಹೇಳಿತ್ತು. ಇದನ್ನು ಪ್ರಶ್ನಿಸಿ ಸಿಪಿಐಎಂ (CPIM) ನಾಯಕಿ ಸುಭಾಶಿನಿ ಅಲಿ, ಪತ್ರಕರ್ತೆ ರೇವತಿ, ಸಂಸದ ಸ್ಥಾನದಿಂದ ಉಚ್ಛಾಟನೆಗೊಂಡಿರುವ ಟಿಂಎಂಸಿ ಮೆಹುವಾ ಮೊಯಿತ್ರಾ (Mahua Moitra), ಬಿಲ್ಕಿಸ್ ಬಾನೋ ಮೊದಲಾದವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅಪರಾಧಿಗಳ ಬಿಡುಗಡೆ ವೇಳೆ ಅವರಿಗೆ ಅದ್ಧೂರಿ ಸ್ವಾಗತವನ್ನು ನೀಡಲಾಗಿತ್ತು. ಅಪರಾಧಿಗಳ ಜೊತೆಗೆ ಬಿಜೆಪಿ (BJP) ಸಂಸದರು, ಶಾಸಕರು, ವೇದಿಕೆಯನ್ನು ಹಂಚಿಕೊಂಡಿದ್ದರು. ಈ ಸುದ್ದಿಯು ಎಲ್ಲೆಡೆ ಭಾರೀ ಸುದ್ದಿ ಮಾಡಿತ್ತು. ಇನ್ನು ಈ ಅಪರಾಧಿಗಳಲ್ಲಿ ಒಬ್ಬರಾದ ರಾಧೇಶ್ಯಾಮ್ ಶಾ ಅವರು ವಕೀಲಿ ವೃತ್ತಿಯನ್ನು ಪ್ರಾರಂಭಿಸಿದ್ದರು, ಇದನ್ನು ಸುಪ್ರೀಂ ಕೋರ್ಟ್ನ ಗಮನಕ್ಕೆ ತರಲಾಯಿತು.
ಗುಜರಾತ್ ಸರ್ಕಾರವು ಅಪರಾಧಿಗಳನ್ನು ಬಿಡುಗಡೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಮಹತ್ವದ ಆದೇಶದಲ್ಲಿ ಹೇಳಿದೆ. ಗುಜರಾತ್ ಸರ್ಕಾರದ ತೀರ್ಮಾನಕ್ಕೆ ನಾಗರಿಕ ಸಮಾಜ, ಸಾಮಾಜಿಕ ಕಾರ್ಯಕರ್ತರು ಮತ್ತು ವಿರೋಧ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ವಿನಾಯಿತಿ ಆದೇಶವು ಅರ್ಹತೆಯ ಕೊರತೆಯನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಪರಾಧಿಗಳನ್ನು ವಿಚಾರಣೆಗೆ ಒಳಪಡಿಸುವ ರಾಜ್ಯ ಮಾತ್ರವೇ ಬಿಡುಗಡೆ ಮಾಡಬಹುದು. ಈ ನಿರ್ಧಾರ ಮಹಾರಾಷ್ಟ್ರ ಸರ್ಕಾರಕ್ಕೆ ಬಿಟ್ಟದ್ದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಭವ್ಯಶ್ರೀ ಆರ್ ಜೆ