Bengaluru : ಕಳೆದ 48 ಗಂಟೆಯಲ್ಲಿ ಕಾಂಗ್ರೆಸ್ (BJP against CM and DCM) ಪಕ್ಷದ ಮತಾಂಧ ಜಿಹಾದಿ ಬ್ರದರ್ಸ್ಗಳು ನಿರಂತರವಾಗಿ ಹಿಂದೂಗಳನ್ನು ಟಾರ್ಗೆಟ್ (Target) ಮಾಡಿ ಹತ್ಯೆ
ಮಾಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ಗೆ (Love Jihad) ಒಪ್ಪದ ಹಿಂದೂ ಯುವತಿಯ ಹತ್ಯೆ, ಒಡೆಯರ್ ಪರವಾಗಿ ಪ್ರಚಾರ ಮಾಡುತ್ತಿದ್ದ ಬಿಜೆಪಿ (BJP) ಕಾರ್ಯಕರ್ತನ ಮೇಲೆ ಕಾರು ಹರಿಸಿ ಹತ್ಯೆ,
ಹಿಂದೂಗಳ (Hindu) ಕಾರು ತಡೆದು ಹಲ್ಲೆಯಂತಹ ಐದಾರು ಘಟನೆಗಳು ನಡೆದಿವೆ. ಮಜಾವಾದಿ ಸಿದ್ದರಾಮಯ್ಯ (Siddaramaiah) ಅವರು ಹಾಗೂ ಡಿಕೆ ಶಿವಕುಮಾರ್ (D K Shivakumar)
ಅವರ ಅತಿಯಾದ ಓಲೈಕೆಯ ಕಾರಣದಿಂದಲೇ ಮತಾಂಧ ಬ್ರದರ್ಸ್ಗಳು ಕಾನೂನು ಕೈಗೆತ್ತಿಕೊಂಡು ಹಿಂದೂಗಳನ್ನು ಹತ್ತಿಕ್ಕುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ (BJP) , ಕರ್ನಾಟಕವನ್ನು ಪಾ’ಕೈ’ಸ್ತಾನ (Pakistan) ಮಾಡಲು ಹೊರಟಿರುವ ಸಿದ್ದರಾಮಯ್ಯ ಸರ್ಕಾರವನ್ನು ಈ ಬಾರಿ ಮತದಾರರು ಖಂಡಿತವಾಗಿ
ತಿರಸ್ಕರಿಸಿ ಪಾಠ ಕಲಿಸಬೇಕಿದೆ ಎಂದು ಟೀಕಿಸಿದೆ. ಇನ್ನು ವಿಪಕ್ಷ ನಾಯಕ ಆರ್. ಅಶೋಕ್ (R. Ashok) , ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಮುಸ್ಲಿಂ ಯುವಕರು ಜೈ ಶ್ರೀರಾಮ್ (Jai Sri Ram)
ಘೋಷಣೆ ಕೂಗಿದ್ದಕ್ಕೆ ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದ ಘಟನೆಯಾಗಿ ಇನ್ನೂ 48 ಗಂಟೆಗಳೂ ಕಳೆದಿಲ್ಲ, ಅಷ್ಟರಲ್ಲೇ ಮತಾಂಧರ ಮತ್ತೊಂದು ಮಸಲತ್ತು ಬೆಳಕಿಗೆ ಬಂದಿದೆ. ಪ್ರೀತಿ ನಿರಾಕರಣೆ
ಮಾಡಿದ್ದಕ್ಕೆ ಹುಬ್ಬಳ್ಳಿ ಮಹಾನಗರ ಪಾಲಿಕೆ (Hubli Mahanagar Corporation) ಸದಸ್ಯರ ಮಗಳನ್ನು ಮುಸ್ಲಿಂ ಯುವಕ ಚಾಕುವಿನಿಂದ ಇರಿದು ಕೊಲೆ ಮಾಡಿರುವ ದಾರುಣ ರಾಜ್ಯದಲ್ಲಿ ಮತಾಂಧರು
ಯಾವ ಮಟ್ಟಕ್ಕೆ ಅಟ್ಟಹಾಸ ಮೆರೆಯುತ್ತಿದ್ದಾರೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ. ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ (Congress) ಸರ್ಕಾರದ ತುಷ್ಟೀಕರಣ, ಓಲೈಕೆ ರಾಜಕಾರಣದಿಂದ
ರಾಜ್ಯದಲ್ಲಿ (state) ಮತಾಂಧರಿಗೆ, ಮೂಲಭೂತವಾದಿಗಳಿಗೆ ರೆಕ್ಕೆ-ಪುಕ್ಕ ಬಂದಿದ್ದು ಕಾನೂನಿನ ಭಯವೇ ಇಲ್ಲದಂತಾಗಿದೆ. ಯಾವುದೇ ಮುಲಾಜಿಲ್ಲದೆ ಈ ಕೂಡಲೇ ಆ ರಾಕ್ಷಸನನ್ನು ಬಂಧಿಸಿ ಕಾನೂನಿನ
ವಶಕ್ಕೆ ಒಪ್ಪಿಸಬೇಕು. ಶಿಕ್ಷೆ ಆಗುವವರೆಗೂ ಬಿಡಬಾರದು. ಹೆಣ್ಣು ಮಕ್ಕಳಿಗೆ ಆ ಗ್ಯಾರೆಂಟಿ (BJP against CM and DCM) ಕೊಟ್ಟಿದ್ದೇವೆ, ಈ ಗ್ಯಾರೆಂಟಿ ಕೊಟ್ಟಿದ್ದೇವೆ ಎಂದು ಹಾದಿ ಬೀದಿಯಲ್ಲಿ ಭಜನೆ ಮಾಡುವ
ಸಿಎಂ ಹಾಗು ಡಿಸಿಎಂ ಅವರು ಮೊದಲು ಹೆಣ್ಣುಮಕ್ಕಳ ಬದುಕಿಗೆ ಗ್ಯಾರೆಂಟಿ ನೀಡಲಿ, ಹೆಣ್ಣು ಮಕ್ಕಳ ಸುರಕ್ಷತೆಗೆ ಗ್ಯಾರೆಂಟಿ ಕೊಡಲಿ ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿ: ಚೊಂಬು ನೀಡಿರುವ ಕೇಂದ್ರ ಸರ್ಕಾರಕ್ಕೆ ಕನ್ನಡಿಗರೂ ಚೊಂಬು ನೀಡಬೇಕು : ಕಾಂಗ್ರೆಸ್ ನಿಂದ ವ್ಯಂಗ್ಯಭರಿತ ಜಾಹೀರಾತು ಪ್ರಕಟ