Bengaluru: ಎರಡು ದಿನಗಳ ಕಾಲ ನಡೆದಂತಹ ವಿರೋಧ ಪಕ್ಷದ ನಾಯಕರ ಸಭೆಗೆ ವಿವಿಧ ಪಕ್ಷಗಳ ಮುಖಂಡರನ್ನು ಸ್ವಾಗತಿಸಲು ಐಎಎಸ್ ಅಧಿಕಾರಿಗಳನ್ನು (BJP protest in Assembly) ಬಳಕೆ

ಮಾಡಲಾಗಿದೆ. ಸಾರ್ವಜನಿಕರ ಹಣ ದುರ್ಬಳಕೆ ಮಾಡಿದೆ ಮತ್ತು ಕಾಂಗ್ರೆಸ್ ಸರ್ಕಾರ ಶಿಷ್ಟಾಚಾರ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಸದನದಲ್ಲಿ ಪ್ರತಿಭಟನೆ ನಡೆಸಿದರು.
ಈ ಧರಣಿಯ ಹಿನ್ನೆಲೆ ಸದನವನ್ನು ೧೦ ನಿಮಿಷಗಳ ಕಾಲ (BJP protest in Assembly) ಮುಂದೂಡಲಾಯಿತು.
ಬಿಜೆಪಿ ಸದಸ್ಯರು ಬೆಂಗಳೂರಿನಲ್ಲಿ ನಡೆದ ವಿಪಕ್ಷ ಒಕ್ಕೂಟದ ಸಭೆಗೆ ಆಗಮಿಸಿದ್ದ ನಾಯಕರ ಆಗಮನಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಿದ್ದಾರೆ. ಇದು ಶಿಷ್ಟಾಚಾರದ ಉಲ್ಲಂಘನೆ
ಎಂದು ಆರೋಪಿಸಿ ಧರಣಿ ನಡೆಸಿದರು. ಈ ವಿಚಾರವನ್ನು ವಿಧಾನಸಭೆ ಆರಂಭವಾಗುತ್ತಿದ್ದಂತೆ ಪ್ರಸ್ತಾಪ ಮಂಡಿಸಿದ ಆರ್. ಅಶೋಕ್, ಅವರು ಯಾವ ಪ್ರೋಟೋಕಾಲ್ ಆಧಾರದಲ್ಲಿ ಅಧಿಕಾರಿಗಳನ್ನು
ಬಳಕೆ ಮಾಡಿದ್ದಾರೆ ಇದೊಂದು ಪಕ್ಷದ ಕಾರ್ಯಕ್ರಮ/ಸರ್ಕಾರಿ ಕಾರ್ಯಕ್ರಮ ಎಂದರು.
ಐಎಎಸ್ ಅಧಿಕಾರಿಗಳನ್ನು ರಾಜಕೀಯ ನಾಯಕರನ್ನು ಸ್ವಾಗತ ಮಾಡಲು, ಅವರನ್ನು ಊಟಕ್ಕೆ ಕರೆದುಕೊಂಡು ಹೋಗಲು ಬಳಸಿದ್ದಾರೆ. ಇದು ಕರ್ನಾಟಕ ಜನತೆಯ ತೆರಿಗೆ ಹಣ ಎಂದು
ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರ ನೀಡಿರುವ ಕಾನೂನು ಸಚಿವ ಎಚ್.ಕೆ ಪಾಟೀಲ್ ಅವರು ನಾವು ಶಿಷ್ಟಾಚಾರ ಉಲ್ಲಂಘನೆ ಮಾಡಿಲ್ಲ. ಅಶೋಕ್ ಅವರು ಹಿರಿಯ ನಾಯಕರು ಇವರು ಈಗೆ ಇಲ್ಲ,

ಸಲ್ಲದ ಆರೋಪ ಮಾಡುವುದು ಸರಿಯಿಲ್ಲ. ಬಂದ ನಾಯಕರಿಗೆ ಭದ್ರತೆ ಕೊಟ್ಟಿದ್ದೇವೆ ಅಷ್ಟೇ ಎಂದರು.
ಇದನ್ನು ಓದಿ: ಕರ್ನಾಟಕದಲ್ಲಿ ಬರಗಾಲ ಘೋಷಿಸಿ, ಪ್ರತಿ ಕ್ಷೇತ್ರಕ್ಕೆ 1 ಕೋಟಿ ರೂ.ನೀಡಿ, ಬಸವರಾಜ ಬೊಮ್ಮಾಯಿ ಆಗ್ರಹ
ಬೇರೆ ರಾಜ್ಯದ ಸಿ.ಎಂಗಳು ಬಂದಾಗ ಸ್ವಾಗತ ಕೋರುವುದು ಶಿಷ್ಟಾಚಾರ, ಬಿಜೆಪಿ ಅವರಿಗೆ 26 ಪಕ್ಷಗಳು ಸಭೆ ಮಾಡಿರೋದು ಸಹಿಸಲು ಆಗುತ್ತಿಲ್ಲ ಎಂದರು. ಇದೇ ವೇಳೆ ಮಧ್ಯಪ್ರವೇಶ ಮಾಡಿದ
ಮಾಜಿ ಸಚಿವ ಸುರೇಶ್ ಕುಮಾರ್ ಅವರು ಒಬ್ಬ ಪ್ರೋಟೋಕಾಲ್ ಅಧಿಕಾರಿ ಸ್ವಾಗತ ಮಾಡಲು ಹೋಗಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ತಪ್ಪು ಮಾಡಿದ್ದಾರೆ. ನಮ್ಮ ಅಧಿಕಾರಿಗಳನ್ನು ಪಕ್ಷದ ಕಾರ್ಯಕ್ರಮಕ್ಕೆ ಕಳಿಸಲ್ಲ ಎಂದು ಹೇಳಬೇಕಿತ್ತು. ಎದೆಗಾರಿಕೆ ತೋರಿಸಬೇಕಿತ್ತು. ಹಣ ಸರ್ಕಾರದ್ದು ಖರ್ಚು
ಆಗಿದೆಯೋ, ಪಕ್ಷದ್ದು ಖರ್ಚು ಆಗಿದೆಯೋ ಮುಂದೆ ಚರ್ಚೆ ಮಾಡೋಣ ಎಂದರು. ಆಡಳಿತ ಹಾಗೂ ವಿಪಕ್ಷಗಳ ನಡುವೆ ಐಎಎಸ್ ಅಧಿಕಾರಿಗಳ ಬಳಕೆ ವಿಚಾರವಾಗಿ ವಾಕ್ಸಮರ ನಡೆಯಿತು.
ನೊಟೀಸ್ ಕೊಡಿ, ಇಷ್ಟ ಬಂದಾಗ ಮಾತಾಡೋ ನಿಯಮವಿಲ್ಲ ಎಂದು ಬಿಜೆಪಿ ಸದಸ್ಯರ ಮೇಲೆ ಕೃಷ್ಣಬೈರೇಗೌಡ ಕಿಡಿಕಾರಿದರು.
ಇನ್ನು ಇದೇ ಸಂದರ್ಭದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆರೋಪಿಸಿ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು. ಬಿಜೆಪಿ ಸದಸ್ಯರು ಮುಖ್ಯಮಂತ್ರಿಗಳು ಅಧಿಕಾರಿಗಳ
ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಬಿಜೆಪಿಯಿಂದ ಈ ಧರಣಿ ಇಂದ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಯಿತು.
- ಭವ್ಯಶ್ರೀ ಆರ್.ಜೆ