ಡಿಕೆಶಿ ಪರ ಮಾತನಾಡಲು ಕಾಂಗ್ರೆಸ್ ಪಕ್ಷದಲ್ಲಿ ಒಂದು ನರಪಿಳ್ಳೆಯೂ ಇಲ್ಲವೇ ? : ಬಿಜೆಪಿ

bjp

ತಾನು ಕನಕಪುರದ(Kanakapura) ಬಂಡೆ, ಟ್ರಬಲ್ ಶೂಟರ್ ಇತ್ಯಾದಿ ಬಿರುದಾಂಕಿತರಾದ ಡಿ.ಕೆ.ಶಿವಕುಮಾರ್ ಅವರೀಗ ಟ್ರಬಲ್ಗೆ ಸಿಲುಕಿದ್ದಾರೆ. ಜೆಡಿಎಸ್(JDS) ತ್ಯಜಿಸಿ ಓಡಿ ಬಂದ ಸಾಮಾನ್ಯ ಶಾಸಕನ ಬಾಯಿ ಮುಚ್ಚಿಸಲಾರದಷ್ಟು ಡಿಕೆಶಿ(DKS) ಅಸಹಾಯಕರಾಗಿದ್ದೇಕೆ? ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಪರ ಮಾತನಾಡಲು ಕಾಂಗ್ರೆಸ್ ಪಕ್ಷದಲ್ಲಿ(Congress Party) ಒಂದು ನರಪಿಳ್ಳೆಯೂ ಇಲ್ಲವೇ? ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.


“ಅಸಹಾಯಕ ಡಿಕೆಶಿ” ಎಂಬ ಹ್ಯಾಷ್‌ಟ್ಯಾಗ್‌(Hashtag) ಬಳಸಿ ಸರಣಿ ಟ್ವೀಟ್‌(Tweet) ಮಾಡಿರುವ ರಾಜ್ಯ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ(KPCC President) ಎಂದರೆ ಕಾಂಗ್ರೆಸ್ ಹೈಕಮಾಂಡಿನ ನೇರ ಪ್ರತಿನಿಧಿ ಎಂಬುದು ಕಾಂಗ್ರೆಸ್ ವ್ಯವಸ್ಥೆ. ಆದರೆ ಜಮೀರ್ ಅವರಂತ ಶಾಸಕರೇ ಕೆಪಿಸಿಸಿ ಅಧ್ಯಕ್ಷರನ್ನು ಕಾಡುವುದನ್ನು ನೋಡಿದರೆ ಸಿದ್ದರಾಮಯ್ಯ ಬಣ ಮೇಲುಗೈ ಸಾಧಿಸುತ್ತಿರುವ ಲಕ್ಷಣ ಕಾಣುತ್ತಿದೆ. ಅಂದರೆ ಡಿಕೆಶಿ ಬೆವರಿನ ಶ್ರಮ ವ್ಯರ್ಥವೇ? ಎಂದು ಲೇವಡಿ ಮಾಡಿದೆ. ಜಮೀರ್ ಹೇಳಿಕೆ ಸಿದ್ದರಾಮಯ್ಯ ಅವರ ಟೂಲ್ ಕಿಟ್ ರಾಜಕಾರಣ ಒಂದು ಭಾಗ.

ಇದು ಗೊತ್ತಿದ್ದು, ಡಿ.ಕೆ.ಶಿವಕುಮಾರ್ ಮೌನಕ್ಕೆ ಶರಣಾಗಬೇಕಾಗಿದೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಪರ ಮಾತನಾಡಲು ಕಾಂಗ್ರೆಸ್ ಪಕ್ಷದಲ್ಲಿ ಒಂದು ನರಪಿಳ್ಳೆಯೂ ಇಲ್ಲವೇ? ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು ಎಂದು ಡಿಕೆಶಿ ಎಚ್ಚರಿಕೆ ನೀಡಿದ ಬಳಿಕವೂ ಜಮೀರ್ ಅಹ್ಮದ್ ಖಾನ್(Zameer Ahmed Khan) ಕಿಂಚಿತ್ ಹೆದರಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಶಿವಕುಮಾರ್ ಅವರ ಸ್ಟ್ರೈಕ್ ರೇಟ್ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂಬುದಕ್ಕೆ ಈ ವಿದ್ಯಮಾನವೇ ಸಾಕ್ಷಿ. ಕೆಪಿಸಿಸಿ ಅಧ್ಯಕ್ಷರ ಆಜ್ಞೆಗೆ ಕವಡೆ ಕಿಮ್ಮತ್ತಿಲ್ಲವೇ? ಎಂದು ಪ್ರಶ್ನಿಸಿದೆ.

ಈ ಮೂಲಕ ಕಾಂಗ್ರೆಸ್‌ ಪಕ್ಷದೊಳಗೆ ಮುಖ್ಯಮಂತ್ರಿ ಹುದ್ದೆಗಾಗಿ ನಡೆಯುತ್ತಿರುವ ಫೈಟ್‌ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಸಿದ್ದು-ಡಿಕೆಶಿ ನಡುವೆ ತೀವ್ರ ಅಸಮಾಧಾನ ಮೂಡಿದೆ ಎಂಬುದು ಮೇಲ್ನೋಟಕ್ಕೆ ಪದೇ ಪದೇ ಸಾಬೀತಾಗುತ್ತಿದೆ.

Exit mobile version