New Delhi : ಇಸ್ರೇಲ್-ಹಮಾಸ್ (Israel-Hamas) ಸಂಘರ್ಷದಲ್ಲಿ ತಕ್ಷಣದ ಮಾನವೀಯ ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆಯಲ್ಲಿನ ನಿರ್ಣಯದ ಮೇಲಿನ ಮತದಾನದಿಂದ ಭಾರತ ದೂರ ಉಳಿದಿರುವ ಕ್ರಮವನ್ನು ಟೀಕಿಸಿ, ಕೇಂದ್ರ ಸರ್ಕಾರದ ವಿರುದ್ದ ಟೀಕಾಪ್ರಹಾರ ನಡೆಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ (Priyanka Vadra) ಅವರಿಗೆ ಬಿಜೆಪಿ ಭರ್ಜರಿ ಟಾಂಗ್ ನೀಡಿದೆ.
ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಮಾನವೀಯ ಕದನ ವಿರಾಮಕ್ಕೆ ಕರೆ ನೀಡುವ ನಿರ್ಣಯಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಗೈರುಹಾಜರಾದ ಬಗ್ಗೆ ನನಗೆ ಆಘಾತ ಮತ್ತು ನಾಚಿಕೆಯಾಗಿದೆ ಎಂದು ಕಾಂಗ್ರೆಸ್ (Congress) ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಬಿಜೆಪಿ (BJP) ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದರು.
ಪ್ರಿಯಾಂಕಾ ವಾದ್ರಾ (Priyanka Vadra) ಅವರ ಟೀಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ (BJP) , “ನಾಚಿಕೆ ಮತ್ತು ಆಘಾತಕ್ಕೊಳಗಾದವರಿಗೆ (ಪ್ರಿಯಾಂಕಾ ವಾದ್ರಾ ಅವರಿಗೆ) ಭಾರತವು ಎಂದಿಗೂ ಭಯೋತ್ಪಾದನೆಯ ಪರವಾಗಿರುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಭಾರತದ ಮತದ ವಿವರಣೆಯಲ್ಲಿ ಇದನ್ನು ನಿರ್ದಿಷ್ಟವಾಗಿ ವಿವರಿಸಲಾಗಿದೆ. ಇಸ್ರೇಲ್-ಪ್ಯಾಲೆಸ್ತೀನ್ ವಿಚಾರದಲ್ಲಿ ನಮ್ಮ ನಿಲುವು ದೃಢ ಮತ್ತು ಸ್ಥಿರವಾಗಿದೆ ಎಂದು ಹೇಳಿದೆ.
ಇದೇ ವೇಳೆ ಪ್ರಿಯಾಂಕಾ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ (Mukhtar Abbas Naqvi) ಅವರು, ಪ್ರಿಯಾಂಕಾ ಜೀ, ನಿಮ್ಮ ಎಕ್ಸ್ ಖಾತೆಯಿಂದ ಹೊರಹಾಕಲ್ಪಟ್ಟ ವಿಷಯಗಳ ಬಗ್ಗೆ ನೀವು ಮೊದಲು ತಿಳಿದುಕೊಳ್ಳಬೇಕು. ಈ ಪರಿಸ್ಥಿತಿಯ ಬಗ್ಗೆ ಕಾಂಗ್ರೆಸ್ನ ಹಿಂದಿನ ನಿಲುವುಗಳ ಬಗ್ಗೆ ತಿಳಿದಿಲ್ಲದ ಜನರು ನಿಮಗೆ ಸಲಹೆ ನೀಡುತ್ತಿದ್ದಾರೆ. ಕೆಟ್ಟದೆಂದರೆ ನಿಮ್ಮನ್ನು ರಾಹುಲ್ಗಿಂತ ‘ಉತ್ತಮ’ವಾಗಿ ಕಾಣುವ ಪ್ರಯತ್ನದಲ್ಲಿ ಅವರು ನಿಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಯುಎನ್ಜಿಎ (UNGA) ನಿರ್ಣಯದ ಮೇಲೆ ಮತದಾನದಿಂದ ದೂರವುಳಿಯುವ ಕುರಿತು, ಯುಎನ್ ಭಾರತದ ರಾಯಭಾರಿ ಯೋಜನಾ ಪಟೇಲ್ (Yojan Patil) ವಿವರಣೆ ಸುದಿರ್ಘ ನೀಡಿದ್ದು, ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಮಾತುಕತೆಯ ಮೂಲಕ ಪರಿಹರಿಸಬೇಕಾದ ಜಗತ್ತಿನಲ್ಲಿ, ಈ ಮಹಾನ್ ಸಂಸ್ಥೆಯು ಹಿಂಸಾಚಾರದ ಕಡೆಗೆ ಹೆಚ್ಚು ಕಾಳಜಿ ವಹಿಸಬೇಕು. ರಾಜಕೀಯ ಉದ್ದೇಶಗಳನ್ನು ಸಾಧಿಸಲು ಹಿಂಸೆಯು ವಿವೇಚನಾರಹಿತವಾಗಿ ಹಾನಿ ಮಾಡುತ್ತದೆ. ಇದು ಯಾವುದೇ ಪರಿಹಾರಗಳಿಗೆ ದಾರಿ ಮಾಡಿಕೊಡುವುದಿಲ್ಲ. ಇಸ್ರೇಲ್ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಆಘಾತಕಾರಿಯಾಗಿದ್ದು, ಭಯೋತ್ಪಾದನೆ ಒಂದು ಮಾರಣಾಂತಿಕವಾಗಿದೆ ಮತ್ತು ಯಾವುದೇ ಗಡಿ, ರಾಷ್ಟ್ರೀಯತೆ ಅಥವಾ ಜನಾಂಗವನ್ನು ತಿಳಿದಿಲ್ಲ. ನಾವು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಒಂದಾಗೋಣ ಮತ್ತು ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ವಿಧಾನವನ್ನು ಅಳವಡಿಸಿಕೊಳ್ಳೋಣ ಎಂದು ಹೇಳಿದ್ದಾರೆ.