ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ

ಬೆಂಗಳೂರು, ಡಿ. 05:  ಮರಾಠಾ ಅಭಿವೃದ್ಧಿ ನಿಗಮ ವಿರೋಧಿಸಿ ಕರ್ನಾಟಕ ಬಂದ್‌ಗೆಕರೆ ನೀಡಿರುವ ಹಿನ್ನಲೆ ನಗರದಲ್ಲಿ ಇಂದು ಪ್ರತಿಭಟನೆ ನಡೆಯುತ್ತಿದೆ.

 ಈ ನಡುವೆ ಹೊಸೂರು ರಸ್ತೆಯ ಹಳೆ ಚಂದಾಪುರ ಬಳಿ ಬಿಎಂಟಿಸಿ ಬಸ್‌ ಮೇಲೆ ಕಲ್ಲು ತೂರಾಟ ನಡೆದಿದೆ. ಡಿಪೋ ನಂಬರ್‌ 32ಕ್ಕೆ ಸೇರಿದ ಬಸ್‌ ಇದಾಗಿದ್ದು, ರೂಟ್‌ ನಂಬರ್‌ 600 ಬಸ್‌ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗಿದೆ. ಬಸ್‌ನ ಹಿಂಬದಿಯ ಗಾಜು ಹಾಗೂ ಸೈಡ್‌ ಮಿರರ್‌ ಪುಡಿಪುಡಿಯಾಗಿದೆ ಎಂಧು ತಿಳಿದು ಬಂದಿದೆ. ಇತ್ತ ನಗರದ ಪೈ ಲೇಔಟ್‌ನಲ್ಲೂ ಬಿಎಂಟಿಸಿ ಬಸ್‌ ಮೇಲೆ ಕಲ್ಲು ತೂರಾಟ ನಡೆದಿದೆ. ಕೆ. ಆರ್‌ ಪುರಂ ನಲ್ಲೂ ಬಸ್‌ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ತಿಳಿದು ಬಂದಿದೆ.

Exit mobile version