ಬೊಮ್ಮಾಯಿ ಸಚಿವ ಸಂಪುಟ ಸದ್ಯಕ್ಕೆ ವಿಸ್ತರಣೆ ಇಲ್ಲ

bommai

ಬೆಂಗಳೂರು ನ 12 : ಸಾಲು ಸಾಲು ಚುನಾವಣೆ ಹಾಗೂ ಡಿಸೆಂಬರ್ ನಲ್ಲಿ ಅಧಿವೇಶನ ಇರುವ ಕಾರಣ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಿರ್ಧಾರದಿಂದ ಸದ್ಯಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಹಿಂದೆ ಸರಿದಿದ್ದಾರೆ.

ಈ ಕುರಿತಂತೆ ಸುಳಿವು ನೀಡಿದ ಬೊಮ್ಮಾಯಿ ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಪ್ರಸ್ತಾವನೆ ಇಲ್ಲ. ಡಿಸೆಂಬರ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಇದೆ. ಅಧಿವೇಶನ ಅದೇ ತಿಂಗಳು ನಡೆಯುವುದರಿಂದ ಸಂಪುಟ ವಿಸ್ತರಣೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ವಿಧಾನ ಪರಿಷತ್ ಚುನಾವಣೆ ಅಧಿವೇಶನ ಮುಗಿದ ಬಳಿಕ ಜಿಪಂ ತಾಪಂ ಚುನಾವಣೆಗಳು ನಡೆಯಲಿವೆ ಅಲ್ಲದೇ ಬಿಬಿಎಂಪಿ ಚುನಾವಣೆ ಕೂಡ ನಡೆಸಬೇಕಿದೆ ಎನ್ನುವುದು ಕೂಡ ಸಂಪುಟ ವಿಸ್ತರಣೆಗೆ ತೊಡಕಾಗಿರುವ ಅಂಶಗಳಾಗಿವೆ ಎಂದು ಹೇಳಲಾಗಿದೆ

ಚುನಾವಣೆಗಳನ್ನು ಮುಂದಿಟ್ಟು ಕೊಂಡು ವಿಸ್ತರಣೆಗೆ ಕೈ ಹಾಕಿದರೆ ಅತ್ಮಪ್ತರಿಂದ ಪಕ್ಷಕ್ಕೆ ಸಾಕಷ್ಟು ಹಿನ್ನಡೆಯಾಗಲಿದೆ ಎಂಬ ಅಂಶವನ್ನೂ ಕೂಡ ಗಮನದಲ್ಲಿಟ್ಟುಕೊಳ್ಳಬೇಕಾಗಿರುವುದರಿಂದ ಸದ್ಯಕ್ಕೆ ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ.

Exit mobile version