ಖ್ಯಾತ ಪತ್ರಕರ್ತೆ, ವಿಜಯ ಟೈಮ್ಸ್‌ನ ಮುಖ್ಯ ಸಂಪಾದಕರಾದ ವಿಜಯಲಕ್ಷ್ಮೀ ಶಿಬರೂರುರವರಿಗೆ ಬಿ.ಎಸ್.ಡಬ್ಲ್ಯೂ.ಟಿ ವರ್ಷದ ವ್ಯಕ್ತಿ ಪ್ರಶಸ್ತಿ

Mangalore: ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು (BSWT Person award – Vijayalakshmi Shibaruru) ಅವರಿಗೆ ಭಾರತ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಮಂಗಳೂರು ವತಿಯಿಂದ

ನೀಡಲಾಗುವ ವರ್ಷದ ವ್ಯಕ್ತಿ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದ್ದು, ಮಂಗಳೂರಿನಲ್ಲಿ ದಿನಾಂಕ ಡಿ. 30. 2023 ರಂದು 25000 ರೂ. ನಗದು, ಪ್ರಶಸ್ತಿ ಪತ್ರ, ಫಲಕ ಮತ್ತು ಸನ್ಮಾನಗಳನ್ನೂ ಒಳಗೊಳ್ಳಲಿದೆ.

ಇವರು ತಮ್ಮ ವೃತ್ತಿ ಜೀವನವನ್ನು ‘ಜನವಾಹಿನಿ ಪತ್ರಿಕೆ’ಯ ಸಂಪಾದಕರಾಗಿ ಆರಂಭಿಸಿದ್ದು, ತದ ನಂತರ ಆಕಾಶವಾಣಿಯ ರೇಡಿಯೋ ಪ್ರಸಾರಕರಾಗಿ ಸೇವೆ ಸಲ್ಲಿಸಿದರು. ಸಂಯುಕ್ತ ಕರ್ನಾಟಕ

(Samyukta Karnataka) ಸೇರಿಕೊಂಡು ಆ ಪತ್ರಿಕೆಯ ಹಿರಿಯ ವರದಿಗಾರ್ತಿಯಾಗಿ (BSWT Person award – Vijayalakshmi Shibaruru) ಕಾರ್ಯ ನಿರ್ವಹಿಸಿದ್ದಾರೆ.

ಆ ಬಳಿಕ ಹೈದರಾಬಾದ್ (Hyderabad) ನಲ್ಲಿ ಹಾಗೂ ಬೆಂಗಳೂರಿನಲ್ಲಿ ETV ಕನ್ನಡಕ್ಕೆ ಸೇರಿಕೊಂಡು ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. TV9 ಕನ್ನಡ ನ್ಯೂಸ್ (Kannada News)

ಮಾಧ್ಯಮದಲ್ಲಿಯೂ 4 ವರ್ಷಗಳ ಕಾಲ ಹಿರಿಯ ವರದಿಗಾರ್ತಿ ಕಮ್ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಏಷ್ಯಾನೆಟ್ (Asia Net) ಗ್ರೂಪ್ ನ ಸುವರ್ಣ ನ್ಯೂಸ್ (Suvarna News) 24×7

ಕನ್ನಡ ಮಾಧ್ಯಮ ವಾಹಿನಿಯಲ್ಲಿ ವಿಶೇಷ ತನಿಖಾ ವರದಿಗಾರ್ತಿಯಾಗಿ ಕಾರ್ಯ ನಿರ್ವಹಿಸಿದ್ದು, ನ್ಯೂಸ್ 18 (News 18) ಅಲ್ಲಿಯೂ ಕೂಡ ಕೆಲಸವನ್ನು ನಿರ್ವಹಿಸಿದ್ದಾರೆ.

ಈಗ ಇವರು ಪ್ರಸ್ತುತ ವಿಜಯಾ ಟೈಮ್ಸ್‌ನಲ್ಲಿ (Vijaya Times) ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಜನರ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಯ ಕುರಿತು ಹಲವಾರು ಸಾಕ್ಷ್ಯ ಚಿತ್ರವನ್ನು

ಮಾಡುತ್ತಿದ್ದಾರೆ. ಇನ್ನು ಇವರ ನೇತೃತ್ವದಲ್ಲಿ ಮೂಡಿ ಬರುವ ‘ಕವರ್ ಸ್ಟೋರಿ’ (Cover Story) ಕಾರ್ಯಕ್ರಮವು ಕನ್ನಡ ಸುದ್ದಿ ವಾಹಿನಿಗಳಲ್ಲಿ ಅತ್ಯಂತ ಜನಪ್ರಿಯ ಕಾರ್ಯ ಕ್ರಮವಾಗಿದೆ.

ಸಾರ್ವಜನಿಕರಲ್ಲಿ ಅನೇಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಬಾಲ ಕಾರ್ಮಿಕತೆ, ನಕಲಿ ಉತ್ಪನ್ನ, ಕಲಬೆರಕೆಯ ಆಹಾರ, ಮಹಿಳಾ ಹಕ್ಕುಗಳು, ಪರಿಸರ, ಶಿಕ್ಷಣ ಇತ್ಯಾದಿ

ಸಾಮಾಜಿಕ ಕುರಿತಂತ ಸಮಸ್ಯೆಗಳನ್ನು ಹಾಗು ಹಲವಾರು ಹಗರಣಗಳನ್ನು ಬಹಿರಂಗಗೊಳಿಸಿದ್ದಾರೆ.

ಶೀಘ್ರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಸ್ವಾರ್ಥತೆ ಹಾಗೂ ಪಾರದರ್ಶಕತೆಯಿಂದ ಕೂಡಿದ ನ್ಯಾಯಪೂರ್ಣವಾದ ಅವರ ನಿಸ್ಕಲ್ಮಷ ಜನಪ್ರಿಯ ಮಾಧ್ಯಮ ಸೇವೆಯನ್ನು ಗುರುತಿಸಿ ಬಿ.ಎಸ್.ಡಬ್ಲ್ಯೂ.ಟಿ

(BSWT) ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬಿ.ಎಸ್.ಡಬ್ಲ್ಯೂ.ಟಿ ಅಧ್ಯಕ್ಷರಾದ ಎನ್. ಅಮೀನ್ (N Ameen), ಪ್ರಧಾನ ಕಾರ್ಯದರ್ಶಿಯಾದ ಆಕೀಫ್ ಇಂಜಿನಿಯರ್ ಮತ್ತು ಉಪಾಧ್ಯಕ್ಷ ಅಶ್ರಫ್

(Ashraf) ಅವರು ಎಂ.ಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: ಖ್ಯಾತ ಪತ್ರಕರ್ತೆ, ವಿಜಯ ಟೈಮ್ಸ್‌ನ ಮುಖ್ಯ ಸಂಪಾದಕರಾದ ವಿಜಯಲಕ್ಷ್ಮೀ ಶಿಬರೂರುರವರಿಗೆ ಬಿ.ಎಸ್.ಡಬ್ಲ್ಯೂ.ಟಿ ವರ್ಷದ ವ್ಯಕ್ತಿ ಪ್ರಶಸ್ತಿ

Exit mobile version