Bengaluru: ರಾಜ್ಯದಲ್ಲಿ ಜಾತಿ ಗಣತಿಯು (Caste Census) ಕಗ್ಗಂಟಾಗಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಈ ವಿಚಾರದಲ್ಲಿ ಮರು ಪರಿಶೀಲನೆಗೆ ಒತ್ತಡ ಮುಂದುವರಿದಿದ್ದು, ಈ ವಿಚಾರವಾಗಿ ಹೈಕಮಾಂಡ್ ಮೊರೆ ಹೋಗಲು ಕಾಂಗ್ರೆಸ್ನ (Congress) ಲಿಂಗಾಯತ ನಾಯಕರು ತೀರ್ಮಾನಿಸಿದ್ದಾರೆ. ಜಾತಿ ಜನಗಣತಿ ಮರು ಪರಿಶೀಲನೆಗೆ ಹೈಕಮಾಂಡ್ ಮೇಲೆ ಒತ್ತಡ ಹಾಕಲು ಪಕ್ಷದ ಲಿಂಗಾಯತ ನಾಯಕರು ನಿರ್ಧಾರ ಕೈಗೊಂಡಿದ್ದಾರೆ.
ಈ ವಿಚಾರದಲ್ಲಿ ಎರಡು ಬಾರಿ ಮುಖಾಮುಖಿಯಾದಾಗಲೂ ವೀರಶೈವ ಮಹಾಸಭಾ ಅಧ್ಯಕ್ಷರಿಗೆ ಸಿಎಂ ಯಾವುದೇ ಭರವಸೆ ನೀಡಿಲ್ಲ ಲಿಂಗಾಯತ ನಾಯಕರ ಮನವಿಗೆ ಸ್ಪಂದನೆ ಸಿಗುತ್ತಿಲ್ಲ ಎಂಬ ಬೇಸರ ಸಮುದಾಯದ ನಾಯಕರಲ್ಲಿದ್ದು, ವೀರಶೈವ ಮಹಾಸಭಾ ನಿರ್ಣಯದ ಬಳಿಕವೂ ಸಿಎಂ ಸಿದ್ದರಾಮಯ್ಯ (CM Siddaramaiah) ಜಾತಿಗಣತಿ ವಿಚಾರವಾಗಿ ಅವರಿಗೆ ಯಾವುದೇ ಉತ್ತರ ನೀಡಿಲ್ಲ.
ಈ ಹಿನ್ನೆಲೆಯಲ್ಲಿ ವೀರಶೈವ ಮಹಾಸಭಾ ನಿರ್ಣಯಗಳೊಂದಿಗೆ ದೆಹಲಿಗೆ (Dehli) ತೆರಳಲು ಸಿದ್ದವಾಗಿರುವ ಲಿಂಗಾಯತ ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ, ಇದು ಸಮುದಾಯದ ಮುಖಂಡರ ನಿರಾಸೆಗೆ ಕಾರಣವಾಗಿದ್ದು, ಹೈಕಮಾಂಡ್ #HighCommand ನಾಯಕರೇ ಜಾತಿಗಣತಿ ಬಗ್ಗೆ ಮರುಪರಿಶೀಲನೆಗೆ ಸರ್ಕಾರಕ್ಕೆ ಸೂಚಿಸುವಂತೆ ಒತ್ತಡ ಹಾಕುವುದು ಲಿಂಗಾಯತ ಮುಖಂಡರ ಯೋಜನೆಯಾಗಿದೆ.
ವೀರಶೈವ ಮಹಾಸಭಾ ಮತ್ತು ಒಕ್ಕಲಿಗರಿಂದ ಪ್ರಸ್ತುತ ಜಾತಿ ಗಣತಿ ವರದಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅಂತೂ ಬಹಿರಂಗವಾಗಿಯೇ ಹಲವು ಬಾರಿ ಜಾತಿಗಣತಿ ವರದಿ ಅವೈಜ್ಞಾನಿಕ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತಿ ಗಣತಿ ವರದಿಯನ್ನು ನಾವು ವಿರೋಧಿಸುತ್ತಿಲ್ಲ. ಆದರೆ ಈಗಿನ ವರದಿ ಅವೈಜ್ಞಾನಿಕವಾಗಿದೆ. ಅದನ್ನು ಸರ್ಕಾರ ಅಂಗೀಕರಿಸಬಾರದು ಎಂದು ಅವರು ಹಲವು ಬಾರಿ ಒತ್ತಾಯಿಸಿದ್ದಾರೆ.
ಈ ಎಲ್ಲಾ ವಿಚಾರಗಳ ನಡುವೆ ಜಾತಿ ಗಣತಿ ವರದಿ ಜಾರಿಗೆ ಒತ್ತಾಯಿಸಿ ಅಹಿಂದ ವರ್ಗ ಸಿಡಿದೆದ್ದಿದ್ದು, ಚಿತ್ರದುರ್ಗದಲ್ಲಿ (Chitradurga) ಬೃಹತ್ ಸಮಾವೇಶ ಮಾಡಲು ನಿರ್ಧರಿಸಿದ್ದು, ಜನವರಿ (January) 28ರಂದು ಸಮಾವೇಶಕ್ಕೆ ದಿನ ನಿಗದಿಪಡಿಸಲಾಗಿದೆ. ಈ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಧಿಕೃತ ಆಹ್ವಾನ ನೀಡಲಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಭವ್ಯಶ್ರೀ ಆರ್ ಜೆ