ಜಾತಿ ಪದ್ದತಿ ನಿರ್ಮೂಲನೆ ಮಾಡಲು ತಮಿಳುನಾಡು ಸರ್ಕಾರದಿಂದ ವಿನೂತನ ಹೆಜ್ಜೆ

ಜಾತಿ ಪದ್ದತಿ ನಿರ್ಮೂಲನೆ ಮಾಡಲು ತಮಿಳುನಾಡು ಸರ್ಕಾರ  ವಿನೂತನ ಹೆಜ್ಜೆ ಇಟ್ಟಿದ್ದು,ಜಾತಿ ನಿರ್ಮೂಲನೆ ಮೂಲಕ ಮಾದರಿಯಾಗುವ ಗ್ರಾಮಕ್ಕೆ 10 ಲಕ್ಷ ಬಹುಮಾನ ನೀಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಘೋಷಿಸಿದ್ದಾರೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡಿನ ಮುಖ್ಯಮಂತ್ರಿ ಅಂತ್ಯಕ್ರಿಯೆ ವೇಳೆ ಜಾತಿ ಆಧಾರದಲ್ಲಿ ನಡೆಯುತ್ತಿರುವ ತಾರತಮ್ಯ ತಡೆಗಟ್ಟಲು ಈ ಬಹುಮಾನ ಘೋಷಿಸಲಾಗಿದೆ. ಸರ್ವಜನಾಂಗಕ್ಕೂ ಒಂದೇ ಸ್ಮಶಾನ ಸ್ಥಾಪನೆಯಾಗಬೇಕು ಎಂದು ಅವರು ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ.

ಸ್ಟಾಲಿನ್ ಅವರ ಈ ಹೇಳಿಕೆಗೆ ವಿರೋಧ ಪಕ್ಷಗಳಿಂದಲೂ ಮೆಚ್ಚುಗೆ ವ್ಯೆಕ್ತವಾಗಿದೆ. ಇದೊಂದೆ ಕೆಲಸ ಮಾತ್ರವಲ್ಲದೆ ಹಲವು ಇಂತಹ ಜನಪರ ಕೆಲಸಗಳಿಂದಲೂ ಸ್ಟಾಲಿನ್ ಜನಪ್ರಿಯತೆನ್ನು ಗಳಿಸಿದ್ದಾರೆ.

ಮೇ ತಿಂಗಳಿನಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅವರು ಶಾಲಾ ಬ್ಯಾಗ್​ಗಳ ಮೇಲಿನ ಭಾವಚಿತ್ರಗಳನ್ನು ಬದಲಿಸದಂತೆ ಶಿಕ್ಷಣ ಸಚಿವ ಅನ್​ಬಿಲ್ ಮಹೇಶ್ ಪೊಯ್ಯಮೊಳಿ ಅವರಿಗೆ ಸೂಚನೆ ನೀಡಿದ್ದರು. ಚುನಾವಣೆಗೂ ಮೊದಲು ಮಕ್ಕಳಿಗೆ ಉಚಿತವಾಗಿ ವಿತರಿಸಲು ಸಿದ್ಧವಾಗಿರುವ 65 ಲಕ್ಷ ಶಾಲಾ ಬ್ಯಾಗ್​ಗಳ ಮೇಲೆ ಎಐಡಿಎಂಕೆ ನಾಯಕಿ ಜೆ.ಜಯಲಲಿತಾ ಮತ್ತು ಹಿಂದಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಭಾವಚಿತ್ರಗಳು ಮುದ್ರಣವಾಗಿತ್ತು. ಬ್ಯಾಗ್​ಗಳ ಮೇಲೆ ಚಿತ್ರ ತೆಗೆಯುವುದು ಬೇಡ ಭಾವಚಿತ್ರ ಬದಲಿಸಲು ಬಳಸಬೇಕು ಎಂದುಕೊಂಡಿದ್ದ ಹಣವನ್ನು ವಿದ್ಯಾರ್ಥಿಗಳ ಅಭ್ಯುದಯಕ್ಕೆ ಬಳಸಲು ವಿನಿಯೋಗಿಸಿ ಎಂದು ಹೇಳಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.

Exit mobile version