ಅಪರಾಧಗಳಿಗೂ ಇದೆಯೇ ಜಾತಿಯ ಶ್ರೀರಕ್ಷೆ!

ಹಲವಾರು ಸಲ ಅಪರಾಧಿ ಅಥವಾ ಅಪರಾಧಿ ಕೃತ್ಯಕ್ಕೆ ಒಳಗಾದವರ ಜಾತಿ, ವರ್ಚಸ್ಸಿನ ಆಧಾರದ ಮೇಲೆ ಆತನ ಕೃತ್ಯ, ಅದರ ಗಂಭೀರತೆ, ಅದರಿಂದಾದ ಹಾನಿ ಇವೆಲ್ಲವನ್ನೂ ಮರೆಮಾಚುವ ಪ್ರಯತ್ನ ಬಹಳ ವ್ಯವಸ್ಥಿತವಾಗಿಯೇ ನಡೆಯುತ್ತದೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ನಾವೆಲ್ಲರೂ ಈ ಪದ್ದತಿಗೆ ಒಗ್ಗಿಕೊಂಡಿದ್ದೇವೆ. ಇದಕ್ಕೆ ಸಮಾಜದಲ್ಲಿ ಹಲವು ಉದಾಹರಣೆಗಳೂ ಪ್ರಸ್ತುತವಾಗಿವೆ.

ದೆಹಲಿಯಲ್ಲಿ‌ ಬ್ರಾಹ್ಮಣ ಯುವತಿ ನಿರ್ಭಯಾ ಮೇಲೆ ಬಲಾತ್ಕಾರವಾದಾಗ ದೇಶಾದ್ಯಂತ ಬೀದಿಗಳಲ್ಲಿ ದೀಪ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಹೈದರಾಬಾದ್‌ನ ರೆಡ್ಡಿ ಸಮುದಾಯದ ಯುವತಿ ದಿಶಾಳನ್ನು ರೇಪ್ ಮಾಡಿ ಕೊಂದ ಎರಡೇ ದಿನಗಳಲ್ಲಿ ಪಾಪಿಗಳ ಎನ್ ಕೌಂಟರ್ ಆಯಿತು. ಇಡೀ ದೇಶವೇ ಆನಂದಿಸಿತು.

ಆದರೆ ಹತ್ರಾಸ್ ಪ್ರಕರಣದಲ್ಲಿ ದಲಿತ ಬಾಲಕಿಯನ್ನು ರೇಪ್ & ಮರ್ಡರ್ ನಡೆದಾಗ ಮೇಲ್ಜಾತಿಯ ಅಪರಾಧಿಗಳನ್ನು ರಕ್ಷಿಸಲು ಉತ್ತರಪ್ರದೇಶದ ಸರ್ಕಾರವೇ ಮುಂದಾಗಿ ಮಧ್ಯರಾತ್ರಿಯಲ್ಲಿ ಆ ಯುವತಿಯನ್ನು ಶವಸಂಸ್ಕಾರ ಮಾಡದೇ ಪೊಲಿಸರೇ ಸುಟ್ಟು ಹಾಕಿದರು.

ಉನ್ನಾವ್‌ ಪ್ರಕರಣದಲ್ಲಿ ದಲಿತ ಯುವತಿಯನ್ನು ಬಿಜೆಪಿ ಸಶಾಸಕನೇ ಅತ್ಯಾಚಾರಗೈದಿದ್ದಾನೆಂದು ದೂರು ದಾಕಖಲಾಗಿದ್ದರೂ ಆತನನ್ನು ಅರೆಸ್ಟ್ ಮಾಡಲಿಲ್ಲ. ಬದಲಾಗಿ ದಲಿತ ಯುವತಿಯ ತಂದೆಯನ್ನು ಜೈಲಿನಲ್ಲಿ, ಚಚಿಕ್ಕಪ್ಪನನ್ನು ಅಪಗಘಾತ ಮಾಡಿಸಿ ಕೊಲ್ಲಲಾಯಿತು.

ಪ್ರಸ್ತುತ ದೆಹಲಿಯಲ್ಲಿ 9 ವರ್ಷದ ದಲಿತ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ನಡೆದಿದ್ದರೂ ಯಾವುದೇ ದೊಡ್ಡ ಮಟ್ಟದ ಪ್ರತಿಭಟನೆಗಳಿಲ್ಲ, ಬೀದಿಗಳಲ್ಲಿ ಮೋಂಬತ್ತಿ ಹಚ್ಚಚುವವರೂ ಯಾರೂ ಇಲ್ಲ. ಜಾತಿಗಳೇ ಸುಳ್ಳು, ಜಾತಿವಾದವೇ ಇಲ್ಲ ಎಂದು ಹೇಳಿಕೊಳ್ಳುವ ಜನರೂ, ತಮ್ಮ ದೇಶದ ಹೆಣ್ಣುಮಗಳೊಬ್ಬಳ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದೇ ಇರುವುದು ವಿಪರ್ಯಾಸವೇ ಸರಿ.

Exit mobile version