ಹೊಸ ದಿಲ್ಲಿ : ಭಾರತದ(India) ತೀವ್ರ ವಿರೋಧದ ನಡುವೆಯೂ ಚೀನಾದ(China) ಗುಪ್ತಚರ ಹಡಗೊಂದು ಶ್ರೀಲಂಕಾದ(Srilanka) ಹಂಬನ್ತೋಟ ಬಂದರಿಗೆ ಬಂದು ತಲುಪಿದೆ. ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

- ಯುಯಾಂಗ್ ವಾಂಗ್ 5 ಎಂಬ ಹಡಗಿನಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪರೀಕ್ಷೆಗೆ ಒಳಪಡಿಸುವ ಸಂವೇದಕಗಳಿವೆ. ಭಾರತದ ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಲ್ಲಿ, ಭಾರತ ತನ್ನ ಕ್ಷಿಪಣಿಗಳನ್ನು ಪರೀಕ್ಷಿಸುತ್ತಿದೆ. ಹೀಗಾಗಿ ಚೀನಾದ ಹಡಗು ಇದೇ ವ್ಯಾಪ್ತಿಯಲ್ಲಿ ಇರುವುದು ಭಾರತದ ಕಳವಳಕ್ಕೆ ಕಾರಣವಾಗಿದೆ.
- ಚೀನಾ ಯುಯಾಂಗ್ ವಾಂಗ್ 5 ಹಡಗಿನಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ವ್ಯಾಪ್ತಿ ಮತ್ತು ನಿಖರತೆಯನ್ನು ಅಳೆಯುವ ಸಾಧ್ಯತೆ ಇರುತ್ತದೆ.
- ಯುವಾಂಗ್ ವಾಂಗ್ 5 ಗುಪ್ತಚರ ಹಡಗು ಹಿಂದೂ ಮಹಾಸಾಗರದಲ್ಲಿ ಜಲಾಂತರ್ಗಾಮಿ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಸಾಗರ ಸಮೀಕ್ಷೆಗಳನ್ನು ಸಹ ನಡೆಸಬಹುದು. ಈ ರೀತಿಯ ಸಮೀಕ್ಷೆಗಳು ಭಾರತದ ಭದ್ರತೆಗೆ ಸವಾಲೊಡ್ಡುತ್ತವೆ.

- ಯುವಾಂಗ್ ವಾಂಗ್ 5 ಗುಪ್ತಚರ ಹಡಗು ತನ್ನ ಸ್ವಯಂಚಾಲಿತ ಗುರುತಿನ ವ್ಯವಸ್ಥೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಶ್ರೀಲಂಕಾ ಹೇಳಿದ್ದರು, ರಹಸ್ಯವಾಗಿ ವೈಜ್ಞಾನಿಕ ಸಂಶೋಧನೆಯನ್ನು ನಡೆಸುವ ಸಾಧ್ಯತೆ ಇದೆ. ಚೀನಾದ ಕಂಪನಿಯೊಂದು ಹಂಬಂಟೋಟಾ ಬಂದರಿನ ಉಸ್ತುವಾರಿ ವಹಿಸಿಕೊಂಡಿದ್ದು, ಭಾರತದ ಕಳವಳಕ್ಕೆ ಕಾರಣವಾಗಿದೆ.
- ಶ್ರೀಲಂಕಾ 99 ವರ್ಷಗಳ ಕಾಲ ಚೀನಾದ ಮರ್ಚೆಂಟ್ ಪೋರ್ಟ್ ಹೋಲ್ಡಿಂಗ್ಸ್ ಕಂಪನಿಗೆ ಹಂಬಂಟೋಟಾ ಬಂದರಿನ ಗುತ್ತಿಗೆ ನೀಡಿದೆ. ಈ ಬಂದರನ್ನು ಬಳಸಿಕೊಂಡು, ಚೀನಾದ ಗುಪ್ತಚರ ಹಡಗುಗಳು ಈ ಬಂದರಿಗೆ ಬರುವುದರಿಂದ ಭಾರತ ಕರಾವಳಿ ಭದ್ರತೆಗೆ ಬಹುದೊಡ್ಡ ಸಮಸ್ಯೆಯಾಗಲಿವೆ. ಇಲ್ಲಿಂದ ಸುಲಭವಾಗಿ ಭಾರತದ ನೌಕಾಪಡೆಯ ಚಟುವಟಿಕೆಗಳನ್ನು ಗುರುತಿಸಬಹುದಾಗಿದೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ಚೀನಾ ಹಡಗಿರುವುದು ಭಾರತದ ಕಳವಳಕ್ಕೆ ಮುಖ್ಯಕಾರಣವಾಗಿದೆ.