ಮುಖ್ಯಮಂತ್ರಿ 20 ದಿನ ವಿಶ್ರಾಂತಿ ತೆಗೆದುಕೊಳ್ಳಲಿ – ಕುಮಾರಸ್ವಾಮಿ

ಬೆಂಗಳೂರು ಡಿ 29 : ಮಂಡಿ ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿಗಳು 20 ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ಬೆಳಗಾವಿ ಅಧಿವೇಶನದ ವೇಳೆ ಸಿಎಂ ಬೊಮ್ಮಾಯಿ ಅವರು ಮಂಡಿ ನೋವಿಗೆ ನಾಟಿ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿದ್ದು, ಸಿಎಂ 20 ದಿನ ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಅವರು ವಿಶ್ರಾಂತಿ ತೆಗೆದುಕೊಂಡರೆ ಆಡಳಿತ ಚುರುಕಾಗುತ್ತೆ. ಜೊತೆಗೆ ಕಾಲು ನೋವಿನಿಂದ ಗುಣಮುಖರಾಗಬಹುದು. ಮನೆಯಲ್ಲೇ ವಿಶ್ರಾಂತಿ ತೆಗೆದುಕೊಳ್ಳಲಿ ಮನೆಯಿಂದಲೇ ಅವರು ಕಚೇರಿ ಕೆಲಸ ಮಾಡಲಿ ಎಂದರು.

ಇನ್ನು ಸಿಎಂ ವಿಶ್ರಾಂತಿ ವೇಳೆಯಲ್ಲಿ ಎಲ್ಲೂ ಹೊರಗಡೆ ಓಡಾಡಬಾರದು. ಸಾರ್ವಜನಿಕರು ಅವರನ್ನ ಕಾರ್ಯಕ್ರಮಕ್ಕೆ ಕರೆಯಬಾರದು. ಯಾರೂ ೨೦ ದಿವಸ ನೋಡಲು ಹೋಗಬಾರದು. ಹೇಗೂ ಒಮಿಕ್ರಾನ್ ಇದೆ. ೨೦ ದಿನ ವಿಶ್ರಾಂತಿ ತೆಗೆದುಕೊಂಡರೆ ಒಳ್ಳೆಯದು ಎಂದು ಅವರು ಬಸವರಾಜ್ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ್ದಾರೆ.

Exit mobile version