Kolara : ಲೋಕಸಭಾ ಚುನಾವಣೆಯ ಪ್ರಚಾರಕಾರ್ಯ (Lok Sabha election campaign) ನಿಮಿತ್ತ ರಾಜ್ಯಕ್ಕೆ (CM DCM raga speech stumbling) ಆಗಮಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್
ಗಾಂಧಿ (Rahul Gandhi) ಅವರು ಆಡಿರುವ ಮಾತು ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆಗ್ರಾಸವಾಗಿದೆ. ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಾಲೂರಿನಲ್ಲಿ ನಡೆದ ಸಮಾವೇಶದಲ್ಲಿ
ರಾಹುಲ್ ಗಾಂಧಿ ಸಿಎಂ ಡಿಕೆ ಶಿವಕುಮಾರ್ (DK Shivakimar) , ಪ್ರೆಸಿಡೆಂಟ್ ಸಿದ್ದರಾಮಯ್ಯ (Siddaramaya) ಹೇಳುತ್ತಾ, ಭಾಷಣ ಆರಂಭಿಸಿರುವುದು ಮಾತಿನ ಎಡವಟ್ಟೋ ಅಥವಾ ಮುಖ್ಯಮಂತ್ರಿ
(CM) ಸ್ಥಾನದ ಬದಲಾವಣೆಯ ಮುನ್ಸೂಚನೆಯೋ (CM DCM raga speech stumbling) ಎಂಬ ಚರ್ಚೆ ಶುರುವಾಗಿದೆ.
ರಾಹುಲ್ ಗಾಂಧಿ (Rahul Gandhi ) ಭಾಷಣದ ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರೆಂದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು
ಮುಖ್ಯಮಂತ್ರಿ ಎಂದು ಸಂಬೋಧಿಸಿದ್ದಾರೆ. ಮುದ್ರಿತ ಪ್ರತಿಯನ್ನು ನೋಡಿಕೊಂಡು ರಾಹುಲ್ ಭಾಷಣ ಮಾಡುತ್ತಾ ರಾಹುಲ್ ಗಾಂಧಿ ಹೀಗೆ ಹೇಳಿದ್ದಾರೆ. ಭಾಷಣ ಸಿದ್ಧಪಡಿಸುವವರೇ ಮಿಸ್ಟೇಕ್ ಮಾಡಿದ್ರೋ?
ಅಥವಾ ಬೈ ಮಿಸ್ಟೇಕ್ ಆಗಿ ರಾಹುಲ್ ಗಾಂಧಿ (Rahul Gandhi) ಹೀಗೆ ಹೇಳಿದರೋ ಎಂಬ ಚರ್ಚೆ ಎದ್ದಿದೆ. ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿಯ ಬದಲಾವಣೆಯಾಗುತ್ತದೆ
ಎಂಬ ಚರ್ಚೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದೆ. ಬಿಜೆಪಿ (BJP) ಶಾಸಕ ಬಸವನಗೌಡ ಯತ್ನಾಳ್ ಇತ್ತೀಚೆಗೆಷ್ಟೇ, ಲೋಕಸಭಾ ಚುನಾವಣೆ ಮುಗಿದ 15 ದಿನದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ
ಆಗುವ ಪ್ಲಾನ್ ಮಾಡಿದ್ದಾರೆ ಎಂದು ಹೇಳಿದ್ದರು.
ಸಕ್ಕರೆ ನಾಡಲ್ಲಿ (Mandya) ರಾಗಾ ಪ್ರಚಾರ : ನಿನ್ನೆ ರಾಜ್ಯಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಅವರು, ಕೋಲಾರದ (Kolara) ಮಾಲೂರು (Maluru) ಹಾಗೂ ಮಂಡ್ಯದಲ್ಲಿ (Mandya) ನಡೆದ
ಸಮಾವೇಶಗಳಲ್ಲಿ ಭಾಗಿಯಾಗಿದ್ದರು. ಕೇಂದ್ರದಲ್ಲಿ ಕಾಂಗ್ರೆಸ್ (Congress) ಪಕ್ಷ ಅಧಿಕಾರಕ್ಕೆ ಬಂದರೆ, ದೇಶದ ಪ್ರತಿ ಮಹಿಳೆಗೂ 1ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ದ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರಧಾನಿ ಮೋದಿ ಸುಳ್ಳಿನ ಸರದಾರ ಎಂದು ಟೀಕಿಸಿದೆ. ಇನ್ನು ಬೆಂಗಳೂರು
ಗ್ರಾಮಾಂತರ (Bangalore countryside) ಕ್ಷೇತ್ರವನ್ನು ಬಿಟ್ಟು ಮಂಡ್ಯಗೆ ಬಂದಿರುವ ಕುಮಾರಸ್ವಾಮಿ ಅವರನ್ನು ಮಂಡ್ಯದ ಮತದಾರರು ಸೋಲಿಸಬೇಕೆಂದು ಕರೆ ನೀಡಿದರು. ಎಐಸಿಸಿ ಅಧ್ಯಕ್ಷ
ಮಲ್ಲಿಕಾರ್ಜುನ್ ಖರ್ಗೆ ಅವರು ಏಕವಚನದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನು ಓದಿ: ದೇವೇಗೌಡರ ಈ ಮಾತಿಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ – ದೊಡ್ಡಗೌಡರ ವಿರುದ್ದ ಸಿದ್ದು ವಾಗ್ದಾಳಿ