ರಾಜ್ಯದಲ್ಲಿರುವ `ಮಂಗಳಮುಖಿ ಸರ್ಕಾರ’ಕ್ಕೆ ಮುಕ್ತಿ ನೀಡಬೇಕಿದೆ : ಸಿ.ಎಂ.ಇಬ್ರಾಹಿಂ!

JDS

ಸದ್ಯ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮಂಗಳಮುಖಿ(Transgender) ಸರ್ಕಾರಕ್ಕೆ ರಾಜ್ಯರ ಜನರೇ ಮುಕ್ತಿ ನೀಡಬೇಕಿದೆ.

ಗಂಡಸರಾದರೇ ಬಡಿದಾಡಲು ಗಂಡಸರನ್ನ ಕಳುಹಿಸಬಹುದು, ಹೆಂಗಸರಾದರೆ ಬಡಿದಾಡಲು ಹೆಂಗಸರನ್ನ ಕಳುಹಿಸಬಹುದು. ಆದರೆ ಈಗಿರುವ ಸರ್ಕಾರ ಗಂಡು ಅಲ್ಲ, ಹೆಣ್ಣು ಅಲ್ಲ. ಹೀಗಾಗಿ ಈ ಸರ್ಕಾರದ ವಿರುದ್ದ ಬಡಿದಾಡಲು ಸಾಧ್ಯವಿಲ್ಲ. ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನರೇ ಈ ಮಂಗಳಮುಖಿ ಸರ್ಕಾರಕ್ಕೆ ಮುಕ್ತಿ ಕಾಣಿಸಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ(JDS President) ಸಿ.ಎಂ.ಇಬ್ರಾಹಿಂ(CM Ibrahim) ವ್ಯಂಗ್ಯವಾಡಿದರು.

ಬೆಂಗಳೂರಿನಲ್ಲಿ(Bengaluru) ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರಕ್ಕೆ ಮಾನಮರ್ಯಾದೆ ಇಲ್ಲ. 40% ಕಮಿಷನ್ ಹಗರಣ, ಪಿಎಸ್‍ಐ ನೇಮಕಾತಿ ಹಗರಣ ಸೇರಿದಂತೆ ಸಾಲು ಸಾಲು ಹಗರಣಗಳು ಹೊರಬಂದರು ಸರ್ಕಾರಕ್ಕೆ ನಾಚಿಕೆಯಾಗುತ್ತಿಲ್ಲ. ಆದರೆ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಜನತಾದಳ ಸರ್ಕಾರ ರಚನೆಯಾಗುವ ಸೂಚನೆ ಇದೆ. ಈಗಾಗಲೇ ‘ಜನತಾ ಜಲಧಾರೆ’ ಯಾತ್ರೆ ಮೂಲಕ ರಾಜ್ಯಾಧ್ಯಂತ ಪ್ರವಾಸ ಮಾಡಿದಾಗ ರಾಜ್ಯದಲ್ಲಿ ಜೆಡಿಎಸ್ ಪರವಾದ ಅಲೆಯಿರುವುದು ಸ್ಪಷ್ಟವಾಗಿದೆ.

ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ವಿಧಾನಪರಿಷತ್ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿ ಉದಾತ್ತ ಮನೋಭಾವವನ್ನು ಹೊಂದಿರಬೇಕು. ಹೀಗಾಗಿ ನಮ್ಮ ಪಕ್ಷದ ಇತರ ನಾಯಕರಿಗೆ ಟಿಕೆಟ್ ನೀಡಿದ್ದೇವೆ. ಮುಂದೆ ವಿಧಾನಸಭೆ ಚುನಾವಣೆ ಸೇರಿದಂತೆ ಅನೇಕ ಅವಕಾಶ ಸಿಗುತ್ತವೆ. ಆದರೆ ರಾಜ್ಯದಲ್ಲಿ ಜೆಡಿಎಸ್ ಸರ್ಕಾರವನ್ನು ರಚನೆ ಮಾಡುವುದು ನನ್ನ ಮುಖ್ಯ ಉದ್ದೇಶ.

ಇನ್ನು ನಾನು ಕಾಂಗ್ರೆಸ್ ಬಿಟ್ಟ ನಂತರ ವಿಧಾನಪರಿಷತ್‍ಗೆ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ. ಈಗ ಕಾಂಗ್ರೆಸ್‍ಗೆ ನನ್ನ ಬೆಲೆ ಗೊತ್ತಾಗಿದೆ ಎಂದರು.

Exit mobile version