Chikkaballapur: ಲೋಕಸಭಾ ಚುನಾವಣೆ ಹಿನ್ನೆಲೆ ಎಲ್ಲ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ (Kar CM taunts modi slogan) ತೊಡಗಿದ್ದು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ (Congress
candidate in Chikkaballapur) ರಕ್ಷಾ ರಾಮಯ್ಯ (Raksha Ramaiah) ಅವರ ಪರವಾಗಿ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ (CM Siddaramaiah) , ನಮ್ಮ ಪಕ್ಷದಲ್ಲಿಯೆ ಇದ್ದು ನಮಗೆ
ಬೆನ್ನು ತೋರಿಸಿ ಹೋದ ಸುಧಾಕರ್ ಆರೋಗ್ಯ ಸಚಿವರಾಗಿದ್ದಾಗ (Sudhakar was the Health Minister) ರಾಜ್ಯದಲ್ಲಿ ಬಹಳಷ್ಟು ಭ್ರಷ್ಟಾಚಾರ ಎಸಗಿದ್ದಾರೆ. ಅವರಂತಹ ಭ್ರಷ್ಟರು
ಸಂಸತ್ಗೆ ಹೋದರೆ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗುತ್ತದೆ ಹೊರತು ಕಡಿಮೆ ಆಗೋದಿಲ್ಲ. ಕೋವಿಡ್ ಭ್ರಷ್ಟಾಚಾರದ (covid corruption) ತನಿಖೆಗೆ ಈಗಾಗಲೇ ಆಯೋಗ ರಚಿಸಿದ್ದೇವೆ.
ಮಾಹಿತಿ ಪ್ರಕಾರ ಎಲ್ಲಾ ದಾಖಲೆಗಳು ಅವರ ವಿರುದ್ಧವೇ ಇದೆ. ಹಾಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ಸುಧಾಕರ್ ನೂರಕ್ಕೆ ನೂರು ಜೈಲಿಗೆ ಹೋಗುವುದು ಖಚಿತ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕೋವಿಡ್ ನಲ್ಲೂ ಭ್ರಷ್ಟಾಚಾರ ನಡೆಸಿ ಜನರನ್ನು ಸಂಕಷ್ಟಕ್ಕೆ ದೂಡಿದ ಇಂತಹ ಭ್ರಷ್ಟ ಅಧಿಕಾರಿಗಳ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ (Modi) ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಪ್ರಚಾರ ನಡೆಸಿದ್ದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ (BJP) ಹೀನಾಯವಾಗಿ ಸೋಲು ಅನುಭವಿಸಿದೆ. ಈಗ ಲೋಕಸಭೆ ಚುನಾವಣೆಯಲ್ಲೂ (Lok Sabha
elections) ಅದೇ ಗತಿ ಆಗುತ್ತದೆ ನಮ್ಮಂತೆ ನುಡಿದಂತೆ ನಡೆಯುವುದು ಬೇಡ. ಸುಮ್ಮನೆ ಅಚ್ಚೇ ದಿನ್ (Kar CM taunts modi slogan) ಆಯೇಗಾ ಎನ್ನುವುದಲ್ಲ .
ಇದುವರೆಗೂ ಅಚ್ಛೇ ಬರಲಿಲ್ಲ ಎಂದು ಟೀಕಿಸಿದ್ದಾರೆ.
ಈಗಾಗಲೇ ತನಿಖೆ ಆರಂಭಿಸಿದ್ದೇವೆ ಕೊರೋನಾ ಕರ್ಮಕಾಂಡ ಬಯಲಿಗೆಳೆಯುತ್ತೇವೆ.ಜನರ ಕಷ್ಟದ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಸಿದವರಿಗೆ ತಕ್ಕ ಕಾನೂನಿನ ಶಿಕ್ಷೆ ನೀಡುತ್ತೇವೆ. ಪ್ರಕರಣದ ತನಿಖೆ
ನಡೆಯುತ್ತಿದೆ. ತನಿಖೆ ಮುಗಿದ ಮೇಲೆ ತಪ್ಪಿತಸ್ಥರಿಗೆ ಯಾವ ಶಿಕ್ಷೆ ಆಗುತ್ತದೆ ಎಂದು ನಿಮಗೆ ತಿಳಿಯುತ್ತದೆ ಅಲ್ಲಿ ತನಕ ತಾಳ್ಮೆಯಿಂದ ಕಾದುನೋಡಿ. ಈ ಹಿಂದೆ ಸುಧಾಕರ್ ಬಿಜೆಪಿ ಸರ್ಕಾರದಲ್ಲಿ
(BJP Government) ಮಂತ್ರಿಯಾಗಿ ಹಣ ಲೂಟಿ ಹೊಡೆದಿದ್ದಾರೆ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ಸೋಲಿಸಿ ಕಾಂಗ್ರೆಸ್ ನಾಯಕರನ್ನು ಗೆಲ್ಲಿಸಿದ್ದೀರಿ.ಈಗ ರಾಜಕೀಯ ಲಾಭಿ
ನಡೆಸಿ ಎನ್ ಡಿಎ ಟಿಕೆಟ್ ಪಡೆದಿದ್ದಾರೆ ಈಗಲೂ ಅವರಿಗೆ ಸೋಲು ಗ್ಯಾರಂಟಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ: ಗೌರಿ ಮೀಡಿಯಾ ಟ್ರಸ್ಟ್ಗೆ 15 ಲಕ್ಷ, ನ್ಯೂಸ್ ಪ್ಲಸ್ಗೆ 18 ಲಕ್ಷ ; ಬರಗಾಲದಲ್ಲೂ ಕಾಂಗ್ರೆಸ್ ಸರ್ಕಾರದಿಂದ ದುಂದುವೆಚ್ಚ..?!