ತಂದೆಯನ್ನು ಮನೆಯಿಂದ ಹೊರಹಾಕಿದ ಮಗ, ಮಗನನ್ನೇ ಹೊರದಬ್ಬುವಂತೆ ಕೋರ್ಟ್‌ ಆದೇಶ !

highcourt

ಚಿಕ್ಕಬಳ್ಳಾಪುರ ಜ 25 :  ಮಗನೊಬ್ಬ ತಂದೆಯನ್ನು ಹೊರಹಾಕಿದ್ದಕ್ಕೆ ತೀವ್ರ ಆಕ್ರೋಶಗೊಂಡ ಕೋರ್ಟ್ ಮಗನನ್ನೇ ಆ ಮನೆಯಿಂದ ಹೊರ ಹಾಕುವಂತೆ ಪೊಲೀಸರಿಗೆ ಸೂಚನೆ ನೀಡಿದೆ.  

ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಅಂಜನಿ ಬಡಾವಣೆಯಲ್ಲಿ ನಡೆದಿದೆ. ನಿವೃತ್ತ ಪ್ರಾಧ್ಯಾಪಕ ಮುನಿಸ್ವಾಮಿಯವರು ಬಡಾವಣೆಯಲ್ಲಿ ಮನೆಯನ್ನು ಸ್ವಂತಕ್ಕೆ ಖರೀದಿಸಿ ಅಲ್ಲಿ ಮಗ ಮತ್ತು ಸೊಸೆಯ ಜೊತೆಗೆ ವಾಸಿಸುತ್ತಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಅವರ ಮಗ ಸುಭಾಷ್ ಮತ್ತು ಸೊಸೆ ಮಂಜುಳಾ ಅವರ ಜೊತೆಗೆ ಜಗಳ ಮಾಡಿ ಮುನಿಸ್ವಾಮಿಯವರನ್ನು ಮನೆಯಿಂದ ಹೊರಹಾಕಿದ್ದರು.

ಅನಂತರ ಮುನಿಸ್ವಾಮಿ ನಗರದ ಎಸಿ ಕೋರ್ಟ್ ಮತ್ತು ಹೈಕೋರ್ಟ್ ಗೆ ತೆರಳಿ ದೂರಿನ ಅರ್ಜಿಯನ್ನು ಸಲ್ಲಿಸಿದ್ದರು ಸೋಮವಾರ ವಿಚಾರಣೆ ನಡೆಸಿದ ಹೈಕೋರ್ಟ್ ಅಕ್ರಮವಾಗಿ ಮನೆಯನ್ನು ಪ್ರವೇಶಿಸಿದ್ದ ಮಗ ಮತ್ತು ಸೊಸೆ ಇಬ್ಬರನ್ನು ಮನೆಯಿಂದ ಹೊರಹಾಕಿ ಮುನಿಸ್ವಾಮಿಯವರಿಗೆ ಮನೆಯನ್ನು ಕಲ್ಪಿಸುವಂತೆ ಪೊಲೀಸರಿಗೆ ಆದೇಶವನ್ನು ಹೋರಡಿಸಿತು.

ಹೈಕೋರ್ಟ್ ಹೊರಡಿಸಿದ ಆದೇಶದಂತೆ ಚಿಂತಾಮಣಿ ಪೊಲೀಸರು ಮುನಿಸ್ವಾಮಿ ಅವರ ಮನೆಯಿಂದ ಅವರ ಮಗ ಮತ್ತು ಸೊಸೆಯನ್ನು ಹೊರಗೆ ಹಾಕಿ ಪುನಃ ಮುನಿಸ್ವಾಮಿಗೆ ಆ ಮನೆಯಲ್ಲಿ ವಾಸಿಸಲು ಅವಕಾಶವನ್ನು ನೀಡಿದ್ದಾರೆ.

Exit mobile version