ನವದೆಹಲಿ: ಈ ಹಿಂದೆ ಕೋವಿಡ್ ಲಸಿಕೆಗಾಗಿ ಜನರು ನೀಡಿರುವ ಅವರ ವೈಯಕ್ತಿಕ ಮಾಹಿತಿಗಳು ಇದೀಗ ಕೊವೀನ್ ಆ್ಯಪ್ (Cowin app data leakage) ಮೂಲಕ ಸೋರಿಕೆಯಾಗಿದೆ.
ದೇಶದಲ್ಲಿ ಸಾರ್ವಜನಿಕರ ವೈಯಕ್ತಿಕ ಡೇಟಾ ಸುರಕ್ಷಿತವಾಗಿಲ್ಲ, ಈ ಬಗ್ಗೆ ಸರ್ಕಾರ ಎಷ್ಟೆ ಮುಚ್ಚಿಟ್ಟರೂ ಅದರ ಬಗ್ಗೆ ದತ್ತಾಂಶಗಳಿಂದ ಸಾಬೀತಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
(Mallikarjun Kharge) ಹೇಳಿದ್ದಾರೆ.

ಈ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ (Tweet) ಮಾಡಿ ವಾಗ್ದಾಳಿ ನಡೆಸಿರುವ ಅವರು ಮಾಹಿತಿಯನ್ನು ಕೇಂದ್ರ ಸರ್ಕಾರ ಎಷ್ಟೇ ಮುಚ್ಚಿಟ್ಟರೂ 3 ಅಂಶಗಳು ಸ್ಪಷ್ಟವಾಗಿವೆ.
ಇದನ್ನು ಓದಿ: ಜನಾರ್ದನ ರೆಡ್ಡಿ ದಂಪತಿಗೆ ಶಾಕ್ ಕೊಟ್ಟ ನ್ಯಾಯಾಲಯ : ಆಸ್ತಿ ಜಪ್ತಿಗೆ ಸಿಬಿಐ ವಿಶೇಷ ಕೋರ್ಟ್ ಆದೇಶ
ಸಾರ್ವಜನಿಕರ ವೈಯಕ್ತಿಕ ದತ್ತಾಂಶ ದೇಶದಲ್ಲಿ ಸುರಕ್ಷಿತವಾಗಿಲ್ಲ, ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಇದಕ್ಕಾಗಿಯೇ ಸುಪ್ರೀಂ ಕೋರ್ಟ್ (Supreme Court ) ಘೋಷಿಸಿತ್ತು.
ಇದನ್ನು ಮೋದಿ (Narendra Modi) ಸರ್ಕಾರ 2017 ರಲ್ಲಿ ಹೇಗೆ ಬಲವಾಗಿ ವಿರೋಧಿಸಿತು ಎಂದು ವಾಗ್ದಾಳಿ ನಡೆಸಿದ್ದಾರೆ.

ನಮ್ಮ ದೇಶದಲ್ಲಿ ಡೇಟಾ ಸೋರಿಕೆಗಳು ಮತ್ತು ಸೈಬರ್ ದಾಳಿಗಳು (Cyber Attack) ನಿರಂತರವಾಗಿ ಹೆಚ್ಚುತ್ತಿವೆ. 2018ರಲ್ಲಿ ನಡೆದ ಆಧಾರ್ ಡೇಟಾ ವಿಶ್ವದ ಅತಿದೊಡ್ಡ ಉಲ್ಲಂಘನೆಯಾಗಿರಬಹುದು
ಅಥವಾ AIIMS ಮೇಲೆ ನವೆಂಬರ್ 2022ರಲ್ಲಿ ನಡೆದ ಸೈಬರ್ ದಾಳಿಯಾಗಿರಬಹುದು.
ಆಧಾರ್ ಡೇಟಾವನ್ನು (Aadhar Data) 13 ಅಡಿ ಎತ್ತರ ಮತ್ತು 5 ಅಡಿ ದಪ್ಪದ ಗೋಡೆಗಳಲ್ಲಿ ರಕ್ಷಿಸಲಾಗಿದೆ ಎಂದು ಸೆಪ್ಟೆಂಬರ್ 2018 ರಲ್ಲಿ ಮೋದಿ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.
ಅದಾದ ನಂತರವೂ ನಮ್ಮ ದೇಶದಲ್ಲಿ ಸೈಬರ್ ದಾಳಿಗಳು ಹಲವು (Cowin app data leakage) ಪಟ್ಟು ಹೆಚ್ಚಿವೆ.

2018 ರಲ್ಲಿ ಒಟ್ಟು 2.08 ಲಕ್ಷ, 2019 ರಲ್ಲಿ ಒಟ್ಟು 3.94 ಲಕ್ಷ, 2020 ರಲ್ಲಿ ಒಟ್ಟು 11.58 ಲಕ್ಷ, 2021 ರಲ್ಲಿ ಒಟ್ಟು 14.02 ಲಕ್ಷ, 2022 ರಲ್ಲಿ ಒಟ್ಟು 13.91 ಲಕ್ಷ ಸೈಬರ್ ದಾಳಿಗಳು ಇಲ್ಲಿಯವರೆಗೆ ವರದಿಯಾಗಿವೆ.
ಒಟ್ಟಾರೆ ಮೋದಿ ಸರ್ಕಾರಕ್ಕೆ 140 ಕೋಟಿ ಜನರ ಖಾಸಗಿತನದ ಮೂಲಭೂತ ಹಕ್ಕಿನ ಬಗ್ಗೆ ಕಾಳಜಿ ಇಲ್ಲ,ಮತ್ತು ರಾಷ್ಟ್ರೀಯ ಭದ್ರತೆಯ ಬಗ್ಗೆ ಕೂಡ ಕಾಳಜಿ ಇಲ್ಲ ಎಂದು ಖರ್ಗೆ ಟ್ವಿಟರ್ನಲ್ಲಿ ಕಿಡಿ ಕಾರಿದ್ದಾರೆ.
ರಶ್ಮಿತಾ ಅನೀಶ್