ಕುಂಕುಮ ಇಡೋರು ಬಾಂಬ್ ಹಾಕಲ್ಲ, ಬಾಂಬ್ ಹಾಕೋರೆಲ್ಲಾ ಟೋಪಿ ಹಾಕೋರು : ಸಿ.ಟಿ ರವಿ!

CT Ravi

ಕುಂಕುಮ ಇಟ್ಟುಕೊಂಡು ಶ್ರದ್ದೆಯಿಂದ ತಮ್ಮ ಧರ್ಮ ಪಾಲಿಸುತ್ತಾ ಬದುಕುತ್ತಿರುವ ಯಾವ ವ್ಯಕ್ತಿಯೂ ಬಾಂಬ್ ಹಾಕಲ್ಲ. ಬಾಂಬ್ ಹಾಕುವವರು ಯಾರು ಎಂದರೆ ಟೋಪಿ ಹಾಕಿದವರು ಎಂದು ಸನ್ನೆ ಮಾಡಿ ತೋರಿಸುವ ಮೂಲಕ ಬಾಂಬ್ ಹಾಕೋರೆಲ್ಲಾ ಟೋಪಿ ಹಾಕೋರು ಎಂದು ಬಿಜೆಪಿ(BJP) ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ(CT Ravi) ಹೇಳಿದ್ದಾರೆ.


ಬೆಂಗಳೂರು(Bengaluru) ಗ್ರಾಮಾಂತರ(Rural) ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಈ ದೇಶದಲ್ಲಿ ಬಾಂಬ್ ಹಾಕೋರಿಗೆ, ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುತ್ತಿದ್ದರು. ಈಗ ಆ ಕಾಲವಿಲ್ಲ. ಬಿರಿಯಾನಿ-ಗಿರಿಯಾನಿ ತಿನ್ನಿಸುವ ಕಾಲ ಮುಗಿದು ಹೋಗಿದೆ. ಬಂದೂಕಿನಿಂದ ದಾಳಿ ಮಾಡೋರಿಗೆ ನಮ್ಮ ಸೈನಿಕರು ಬಂದೂಕಿನಿಂದಲೇ ಉತ್ತರ ಕೊಡ್ತಾರೆ. ಬಾಂಬ್ ಹಾಕೋರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡ್ತೀವಿ.

ಕಲ್ಲು ಎಸೆಯವವರು ಈಗ ಬಾಲ ಬಿಚ್ಚಿದ್ರೆ ಅವರ ಮನೆ ಮುಂದೆ ಜೆಸಿಬಿ ಘರ್ಜಿಸುತ್ತೆ. ಈ ರೀತಿ ಮಾಡೋದು ಸರಿಯೋ? ತಪ್ಪೋ? ಎಂದು ಪ್ರಶ್ನಿಸಿದರು. ಇನ್ನು ಸಿದ್ದರಾಮಯ್ಯ ನಾನು ಹಿಂದೂ ಎಂದು ಹೇಳ್ತಾರೆ. ಆದರೆ ಕೇಸರಿ ಪೇಟಾ ಹಾಕಿದರೆ ಕಿತ್ತು ಎಸೆಯುತ್ತಾರೆ. ಕುಂಕುಮ ಇಟ್ಟವರ ಕಂಡರೆ ಭಯವಾಗುತ್ತೇ ಅಂತಾರೆ, ಹಾಗಾದ್ರೆ ತಮ್ಮ ತಾಯಂದಿರೆಲ್ಲಾ ಹಣೆಗೆ ಕುಂಕುಮ ಇಡ್ತಾರೋ ಇಲ್ವೊ? ಒಂದು ಸಮುದಾಯವನ್ನು ಒಲೈಸಲು ಇಷ್ಟೋಲ್ಲಾ ಮಾಡ್ತಾರೆ. ಆದರೆ ತಪ್ಪು ಮಾಡಿದವರನ್ನು ತಲೆ ಮೇಲೆ ಕೂರಿಸಿಕೊಳ್ಳುವ ಜಾಯಮಾನ ನಮ್ಮದಲ್ಲ.

ತಪ್ಪು ಮಾಡಿದ್ರೆ ಶಿಕ್ಷೆ ಆಗಲೇಬೇಕು. ಉಪ್ಪು ತಿಂದವನು ನೀರು ಕುಡಿಯಲೇಬೇಕು. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್‍ಮೂರ್ತಿ ಮನೆಗೆ ಬೆಂಕಿ ಇಟ್ಟವರ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವೇನು? ಎಂದು ಕಿಡಿಕಾರಿದರು.

Exit mobile version