ಬಿಗ್ ಪ್ರೊಡ್ಯುಸರ್, ಏನೇನು ಸ್ಕ್ರಿಪ್ಟ್ ರೆಡಿ ಇದೀಯೋ ನೋಡೋಣ ಎಂದು ಮುನಿರತ್ನಗೆ ಡಿಕೆ ಸುರೇಶ್ ತಿರುಗೇಟು

Bengaluru: ಬಿಜೆಪಿ (BJP) ಶಾಸಕ ಮುನಿರತ್ನ (DK Suresh vs Munirathna) ಅವರು ಅನುದಾನ ಸಿಕ್ಕಿಲ್ಲ ಎಂದು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಸಂಸದ ಡಿಕೆ ಸುರೇಶ್ ಅವರು,

‘ದೊಡ್ಡ ಸಿನಿಮಾನಿರ್ಮಾಪಕರು. ಏನೇನೆಲ್ಲಾ ಸ್ಕ್ರಿಪ್ಟ್ ರೆಡಿ ಮಾಡಿದ್ದಾರೋ’ ನೋಡೋಣ ಎಂದು ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ (Bengaluru) ಬುಧವಾರ ಮಾತನಾಡಿದ ಅವರು,

ಈ ಕುರಿತಾಗಿ ತಿರುಗೇಟು ನೀಡಿದ್ದಾರೆ.

ವಿಧಾನಸೌಧದ (Vishanasoudha) ಗಾಂಧಿ ಪ್ರತಿಮೆಯ ಮುಂದೆ ಅನುದಾನವನ್ನು ತಡೆ ಹಿಡಿಯಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವ ಮುನಿರತ್ನ ಅವರಿಗೆ ತಿರುಗೇಟು ನೀಡಿರುವ

ಸಂಸದ ಡಿಕೆ ಸುರೇಶ್ (D.K Suresh), ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ಅವಕಾಶ ಇದೆ ಆದರೆ ಸಂಬಂಧಪಟ್ಟ (DK Suresh vs Munirathna) ಇಲಾಖೆಯಲ್ಲಿ ಮುನಿರತ್ನ ಕೇಳಬೇಕು ಎಂದರು.

ನನ್ನ ಕಾಲಿಗೆ ಅವರು ಅನುದಾನಕ್ಕಾಗಿ ಬೀಳುವ ಅವಶ್ಯಕತೆ ಇಲ್ಲ. ಸಂಪೂರ್ಣವಾಗಿ ಅಭಿವೃದ್ಧಿ ವಿಚಾರದಲ್ಲಿ ನಾನು ಎಲ್ಲರಿಗೂ ಸಹಕಾರ ಕೊಡುತ್ತೇನೆ. ವಾರ್ಡ್ ಒಂದರಲ್ಲಿ ಅಕ್ರಮ ನಡೆದಿದೆ ಅಂತ ಬಿಬಿಎಂಪಿ

ಕಮಿಷನರ್ ಗೆ (BBMP Commissioner) ಪತ್ರದ ಮೂಲಕ ದೂರು ಬರೆದಿದ್ದರು. ಸಾರ್ವಜನಿಕರು ಕೂಡ ಸಾಕಷ್ಟು ದೂರು ನೀಡಿದ್ದು, ಈ ನಿಟ್ಟಿನಲ್ಲಿ ಅನುದಾನ ತಡೆ ಹಿಡಿಯಲಾಗಿದೆ ಎಂದು ಹೇಳಿದರು.

ಅವರು ಇನ್ನೂ ಡ್ರಾಮಾ ನಡೆಸಲಿ, ಏನೇನು ಮಾತಾಡ್ತಾರೆ ನೋಡೋಣ.ಅವರು ದೊಡ್ಡ ಪ್ರೊಡ್ಯುಸರ್ (Producer) ಇನ್ನೂ ಏನೇನೋ ಸ್ಕ್ರಿಪ್ಟ್ (Script) ರೆಡಿ ಮಾಡಿದ್ದಾರೋ ನೋಡೋಣ.

ಅನುದಾನ ಕಡಿತ ವಿಚಾರವಾಗಿ ನನ್ನ ಹತ್ರ ಯಾವತ್ತೂ ಕೂಡ ಚರ್ಚೆ ಮಾಡಿಲ್ಲ ಎಂದರು.

ನಿನ್ನೆ ಸಂಜೆ ನನಗೆ ಪತ್ರ ಬರೆದಿದ್ದಾರೆ, ಆ ಪತ್ರಕ್ಕೆ ಉತ್ತರ ಕೊಡುತ್ತೇನೆ. ಆರೋಪದ ತನಿಖೆಯನ್ನು ಇಡಿ ಅಥವಾ ಸಿಬಿಐ (CBI) ತನಿಖೆಗೆ ವಹಿಸಿ ಎಂದು ಮನವಿ ಮಾಡಿದ್ದಾರೆ. ಪ್ರಜಾಪ್ರತಿನಿಧಿಯಂತೆ

ಪ್ರಜೆಗಳಿಗೂ ಅಧಿಕಾರ ಇದೆ. ಇಡಿ, ಸಿಬಿಐ ತನಿಖೆಗೂ ಮುನ್ನವೇ ಸರ್ಕಾರ ತನಿಖೆ ಮಾಡಲಿ. ಮತ್ತು ನನ್ನ ಗುರಿ ಅಭಿವೃದ್ಧಿ ಎಂದರು.

ಅಕ್ರಮ ನಡೆದಿದೆ ಅಂತ ಶಾಸಕರೇ ಪತ್ರ ಬರೆದ ಮೇಲೆ ತನಿಖೆ ನಡೆಸುವುದರಲ್ಲಿ ತಪ್ಪಿಲ್ಲ. ಯಾವ ರಾಜಕಾಲುವೆ ಮುಚ್ಚೋದಕ್ಕೆ ದುಡ್ಡು ಹಾಕಿಕೊಂಡಿದ್ರೋ ನನಗೆ ಗೊತ್ತಿಲ್ಲ. ಶಾಸಕರು ಎಲ್ಲೆಲ್ಲಿಗೆ ದುಡ್ಡು

ಹಾಕಿಕೊಂಡಿದ್ರೋ ಗೊತ್ತಿಲ್ಲ ಎಂದರು.

ಇದನ್ನು ಓದಿ: ಅಮೇರಿಕಾದಲ್ಲಿ ಭಾರತ- ಕೆನಡಾ ವಿದೇಶಾಂಗ ಸಚಿವರ ಗುಪ್ತ ಸಭೆ..!

Exit mobile version