ಶಕ್ತಿ ಯೋಜನೆಯನ್ನು ಕಷ್ಟದಿಂದಲೇ ಒಪ್ಪಿಕೊಂಡಿದ್ದೇವೆ: ಡಿಸಿಎಂ ಡಿಕೆ ಶಿವಕುಮಾರ್

Bengaluru: ಡಿಸಿಎಂ ಡಿಕೆ ಶಿವಕುಮಾರ್ (DKS speech abt shakti scheme) ಅವರು, ಶಕ್ತಿ ಯೋಜನೆಯನ್ನ ಕಷ್ಟದಲ್ಲೇ ಒಪ್ಪಿಕೊಂಡಿದ್ದೇವೆ ಎಂದು ಹೇಳುವ ಮೂಲಕ ಪ್ರಣಾಳಿಕೆಯಲ್ಲಿ ಘೋಷಣೆ

ಮಾಡಿದ್ದಕ್ಕೆ ನಾವು ಶಕ್ತಿ ಯೋಜನೆ ಮುಂದುವರೆಸೋ ಅನಿವಾರ್ಯ ಇದೆ ಎಂದು (DKS speech abt shakti scheme) ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.

ಇಂದು (ಅ.೭) ವಿಧಾನಸೌಧದ ಮುಂಭಾಗದಲ್ಲಿ ನಡೆದ 148 ಬಸ್​ಗಳ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರಿಗೆ ನಿಗಮದಲ್ಲಿ ಕಳೆದ 6 ವರ್ಷದಿಂದ ವೇತನ ಪರಿಷ್ಕರಣೆ ಆಗಿಲ್ಲ.

ಸದ್ಯ ಕೆ.ಎಸ್.ಆರ್.ಟಿ.ಸಿಯಲ್ಲಿ (KSRTC) ಕರ್ತವ್ಯದಲ್ಲಿ ಮೃತ ನೌಕರರಿಗೆ 1 ಕೋಟಿ ವಿಮೆ ನೀಡಲಾಗುತ್ತಿದೆ. ಇದನ್ನ ಇತರ ನಿಗಮಗಳಿಗೂ ವಿಸ್ತರಣೆ ಮಾಡುವ ಚಿಂತನೆ ಇದೆ ಎಂದರು.

ಪಲ್ಲಕ್ಕಿ ಬಸ್​ನಲ್ಲಿರುವ (Pallaki Bus) ಸೀಟ್​ನಲ್ಲಿ ನಾನು ಕುಳಿತು ಹಾಗೂ ಮಲಗಿ ನೋಡಿದೆ.. ಸರಿಯಾಗಿ ಬಸ್ ಸೀಟ್ 6 ಅಡಿ ಉದ್ದವಾಗಿದೆ. ನನ್ನ ಹೆಂಡತಿಗೂ ಪಲ್ಲಕ್ಕಿ ಬಸ್​ನಲ್ಲಿ ಮೈಸೂರಿಗೆ ಹೋಗುವಂತೆ

ತಿಳಿಸಿದ್ದೇನೆ ಎಂದರು.

ನಮ್ಮ ರಾಜ್ಯದ ಸಾರಿಗೆಯು ಇಡೀ ದೇಶದಲ್ಲೇ ಮಾದರಿಯಾಗಿದ್ದು, ಇತರ ರಾಜ್ಯಗಳ ಸಾರಿಗೆಗೂ ಈ ಸೇವೆಯನ್ನ ಅಳವಡಿಕೆ ಮಾಡುವ ಚಿಂತನೆ ಮಾಡುತ್ತಿದ್ದಾರೆ. ನೂತನ ಬಸ್​ಗೆ ಪಲ್ಲಕ್ಕಿ ಹೆಸರು ಕೊಟ್ಟ

ಸಚಿವರಿಗೆ ಪ್ರಶಸ್ತಿ ಕೊಡಬೇಕು. ಪಲ್ಲಕ್ಕಿ ಬಸ್ ಪ್ರತಿ ಮನೆಯರ ಮಹಾರಾಣಿಯನ್ನ ಕರೆದುಕೊಂಡು ಹೋಗಲಿದೆ ಎಂದರು.

ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ (Ramalingareddy) ಅವರು ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಇನ್ನೊಂದು ವರ್ಷದಲ್ಲಿ ಇಲಾಖೆಗೆ ಒಂದು ಸಾವಿರ ಬಸ್​ಗಳನ್ನು ಸೇರ್ಪಡೆ ಮಾಡಲಾಗುವುದು

ಎಂದರು. ನಾಲ್ಕೂ ನಿಗಮಗಳಲ್ಲಿ 24000 ಬಸ್​ಗಳು ಸಂಚಾರ ಮಾಡುತ್ತಿವೆ. ಪ್ರತಿವರ್ಷ ಶೇಕಡಾ 10 ರಷ್ಟು ಬಸ್​ಗಳು ಸ್ಕ್ರ್ಯಾಪ್ ಆಗುತ್ತಿವೆ. ಕಳೆದ 6 ವರ್ಷದಿಂದ ಹೊಸ ಬಸ್ ಖರೀದಿ ಮಾಡಿರಲಿಲ್ಲ.

ಸದ್ಯ 148 ಬಸ್​ಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಜನಸಂಖ್ಯೆಗೆ ಅನುಗುಣವಾಗಿ 12000 ಬಸ್​ಗಳ ಅಗತ್ಯವಿದ್ದು, ಜನಸಂಖ್ಯೆಗೆ ಅನುಗುಣವಾಗಿ ಬಸ್​ಗಳು ಇಲ್ಲ, ಕೊರತೆ ಇದೆ. ಬೆಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತ ಪ್ರದೇಶಗಳಲ್ಲಿ 2 ಕೋಟಿ

ಜನಸಂಖ್ಯೆ ಇದೆ ಎಂದರು.

ಇಂದು ವಿನೂತನ ಮಾದರಿಯ ನಾನ್ ಎಸಿ ಬಸ್​ಗಳಿಗೆ ಚಾಲನೆ ನೀಡಲಾಗಿದ್ದು, ಪ್ರಸ್ತುತ ನಾನ್ ಎಸಿ ಬಸ್​ಗಳಿಗೆ ಡಿಮ್ಯಾಂಡ್ ಇದೆ. ಒಟ್ಟು 100 ಹೊಸ ನಾನ್ ಎಸಿ ಬಸ್​ಗಳು ಕೆಎಸ್​ಆರ್​ಟಿಸಿಗೆ

ಸೇರ್ಪಡೆಯಾಗಲಿದೆ ಎಂದರು. ನಾಲ್ಕೂ ನಿಗಮಗಳಲ್ಲಿ ನೇಮಕಾತಿ ಆಗಿಲ್ಲ. ಬಾಕಿ ಇರುವ ನೇಮಕಾತಿಯೂ ಆಗಲಿದೆ ಎಂದು ತಿಳಿಸಿದರು.

ಇದನ್ನು ಓದಿ: ಸಿಲಿಕಾನ್ ಸಿಟಿಯಲ್ಲಿ ಮರಗಳ ಗಣತಿ ಮಾಡಲು ಮುಂದಾದ ಬಿಬಿಎಂಪಿ: 4.32 ಕೋಟಿ ರೂ. ವೆಚ್ಚ

Exit mobile version