Bengaluru: ಐಐಎಸ್ಸಿ (IISC) ವಿಜ್ಞಾನಿಗಳು 2017ರಲ್ಲಿ ಮರಗಳ ಗಣತಿ ಮಾಡಿದ್ರು. ಆ ಸಮಯದಲ್ಲಿ 100% ಗೆ 3% ರಷ್ಟು ಹಸಿರು (Tree Census from BBMP) ಇರುವ ಬಗ್ಗೆ ಮರಗಣತಿಯಲ್ಲಿ
ಮಾಹಿತಿ ಸಿಕ್ಕಿತ್ತು. ಆದಾದ ಬಳಿಕ ಹೈ ಕೋರ್ಟ್ (High Court) ಮತ್ತೊಮ್ಮೆ ಮರಗಣತಿ ಮಾಡಲು ಸೂಚಿಸಿತ್ತು. ಆದರೆ ಬಿಬಿಎಂಪಿ ನಾಲ್ಕು ವರ್ಷದಿಂದ ಕಾಲಾಹರಣ ಮಾಡಿ ಈ ವರ್ಷ ಮರಗಣತಿ ಮಾಡಲು
ಮುಂದಾಗಿದ್ದು, ಟೆಂಡರ್ ಕರೆಯಲು ಮುಂದಾಗಿದೆ.
ದಿನದಿಂದ ದಿನಕ್ಕೆ ಬೆಂಗಳೂರು (Bengaluru) ನಗರ ಕಾಂಕ್ರೀಟ್ ಕಾಡಾಗಿ ಮಾರ್ಪಾಡಾಗುತ್ತಿದ್ದು, ಮರಗಿಡಗಳ ಸಂಖ್ಯೆನೇ ಕಡಿಮೆಯಾಗಿ ಹೋಗಿದೆ. ಹಾಗಾಗಿ ಹೈಕೋರ್ಟ್ ಮರಗಣತಿ ಮಾಡಲು
ಹೇಳಿದ್ದು, ನಾಲ್ಕು ವರ್ಷದ ಬಳಿಕ ಬಿಬಿಎಂಪಿ (BBMP) ಮರಗಣತಿ ಮಾಡಲು ಸಜ್ಜಾಗಿದೆ. 4.32 ಕೋಟಿ ರೂ ಮರಗಳ ಗಣತಿಗಾಗಿ ಮೀಸಲಿಟ್ಟಿದ್ದು, ಬಿಬಿಎಂಪಿ ಅರಣ್ಯ ವಿಭಾಗವು ಗಣತಿ ಕಾರ್ಯಕ್ಕಾಗಿ
ಚದರ ಕಿಮೀ ಆಧಾರದಲ್ಲಿ 8 ವಲಯಗಳನ್ನಾಗಿ ವಿಂಗಡಿಸಿರುವ ಪ್ರತಿ ವಲಯಕ್ಕೆ 48.80 ರೂ. ನಿಗದಿ ಪಡಿಸಿದೆ.
ಗಣತಿ ಕಾರ್ಯವನ್ನು 6 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದ್ದು, ಸದ್ಯದಲ್ಲೇ ಟೆಂಡರ್ (Tender) ಆಹ್ವಾನಿಸಲಾಗುವುದು. ಈ ಗಣತಿಯಲ್ಲಿ ಮರಗಳ ಗಾತ್ರ, ಬಣ್ಣ, ಜಾತಿ, ವಯಸ್ಸುಗಳ
ಆಧಾರದ ಮೇಲೆ ನಡೆಯಲಿದ್ದು, ಜನರ ಆಧಾರದ ಮೇಲೆ ಒಟ್ಟು ಎಷ್ಟು ಮರಗಳಿವೆ ಎನ್ನುವುದರ ಆಧಾರದ ಮೇಲೆ ಈ ಮರಗಣತಿ ನಡೆಯಲಿದೆ ಅಂತ ಬಿಬಿಎಂಪಿ ಅರಣ್ಯ ಅಧಿಕಾರಿಗಳು ವಿಜಯಟೈಮ್ಸ್ಗೆ
(Vijaya Times) ಮಾಹಿತಿ ನೀಡಿದ್ದಾರೆ.
ಒಂದು ಲಕ್ಷವೆಚ್ಚದಲ್ಲಿ ನಾಲ್ಕು ತಿಂಗಳುಗಳ ಕಾಲ 2017 ರಲ್ಲಿ ಐಐಎಸ್ಸಿ (IISC) ತಜ್ಞ ಟಿವಿ ರಾಮಾಚಂದ್ರ ಅವರ ನೇತ್ವದಲ್ಲಿ ಮರಗಣತಿ ಮಾಡಲಾಗಿತ್ತು. ಆಗ 14 ಲಕ್ಷದ 68 ಸಾವಿರದಷ್ಡು ಮರಗಳು
ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಬೆಂಗಳೂರು ಜನರ ಪಾಪುಲೇಷನ್ 95 ಲಕ್ಷದಷ್ಟು ಇತ್ತು. ಪ್ರತಿ ಏಳು ಮನುಷ್ಯನಿಗೆ ಒಂದು (Tree Census from BBMP) ಮರ ಇರುವುದು ತಿಳಿದುಬಂದಿತ್ತು.
ಒಂದು ಮರವು 10 ಮರಗಳಂತೆ ಒಂದು ಮಗುವಿಗೆ ಸಮವಾಗಿರುತ್ತೆ. ಆದ್ರೆ ಇತ್ತೀಚಿಗೆ ಮರಗಳನ್ನ ಕಡಿಯುತ್ತಿರುವುದರಿಂದ ಆ್ಯಕ್ಸಿಜನ್ ಗೆ (Oxygen) ಕೊರತೆ ಉಂಟಾಗುತ್ತಿದೆ. ಅಲ್ಲದೇ 50 ವರ್ಷ
ಮೇಲ್ಪಟ್ಟವರು ಆ್ಯಕ್ಸಿಜನ್ ಸಿಲಿಂಡರ್ ಬಳಕೆ ಮಾಡುತ್ತಿರುವುದು ಕಂಡುಬರುತ್ತಿದ್ದು, ನೀರಿನ ಸಮಸ್ಯೆಯು ಉಂಟಾಗುತ್ತಿದೆ.
ಕಾಮಾಗಾರಿಗಳನ್ನ ಮಾಡುವಾಗ ಮಿನಿ ಫಾರೆಸ್ಟ್ ಗಳನ್ನ (Mini Forest) ಮಾಡುವುದರ ಮೂಲಕ ಹಸಿರೀಕರಣ ಮಾಡಬಹುದಾಗಿದೆ. ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟವು ಕುಸಿಯುತ್ತಿದ್ದು,
ಮರಗಳು ಇಲ್ಲದಿದ್ದರೆ ಅವನತಿಗೆ ಕಾರಣವಾಗಬಹುದಾಗಿದ್ದು, ಇದು ವಾಸ ಮಾಡಲು ಯೋಗ್ಯವಲ್ಲದ ಜಾಗವಾಗಿ ಮಾರ್ಪಾಡುತ್ತಿದೆ. ಆದ್ದರಿಂದ ಬಿಬಿಎಂಪಿ ಅಧಿಕಾರಿಗಳು ಮರಗಳನ್ನು ನೆಡುವಾಗ
ವೈಜ್ಞಾನಿಕವಾಗಿ ಮಾಡಬೇಕು ಅಂತ ಐಐಎಸ್ಸಿ ತಜ್ಞ ಟಿವಿ ರಾಮಚಂದ್ರ (T V Ramachandra) ಅವರು ಸಲಹೆ ನೀಡಿದ್ದಾರೆ.
ಇದನ್ನು ಓದಿ: ಒಪ್ಪೋದಿಂದ ಹೊಸ ಪೋಲ್ಡಿಂಗ್ ಡಿಸ್ ಪ್ಲೇ ಇರುವ ಮೊಬೈಲ್ ಬಿಡುಗಡೆ: ಅ.12ಕ್ಕೆ ಸ್ಮಾರ್ಟ್ ಫೋನ್ ಬಿಡುಗಡೆ
- ಭವ್ಯಶ್ರೀ ಆರ್.ಜೆ