Bengaluru: ಶನಿವಾರ ಮುಂಜಾನೆ ರಾಜಧಾನಿ ಬೆಂಗಳೂರಿನಲ್ಲಿ (fire incident in agarabatti factory) ಅಗರಬತ್ತಿ ಕಾರ್ಖಾನೆಗೆ ಬೆಂಕಿ ಬಿದ್ದಿದ್ದು, ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ
ಗೋದಾಮು ಬೆಂಕಿ ದುರಂತ ಮಾಸುವ ಮುನ್ನವೇ ನಗರದ ಜೋಗುಪಾಳ್ಯದಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ವ್ಯಕ್ತಿಯೊಬ್ಬರಿಗೆ ಗಾಯಗಳಾಗಿದೆ. 8 ಬೈಕ್ಗಳು ಸುಟ್ಟು ಕರಕಲಾಗಿವೆ.
ಜೋಗುಪಾಳ್ಯದ (Jogupalya) ಪೈಪ್ ಲೈನ್ ರಸ್ತೆಯಲ್ಲಿನ ಅಗರಬತ್ತಿ ಕಾರ್ಖಾನೆಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ಕಿನ್ನಾಲೆಗೆಗೆ 8 ಬೈಕ್ಗಳು ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ರವಿಕುಮಾರ್
(Ravikumar) ಎಂಬುವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 5 ವರ್ಷಗಳಿಂದ ಗುಡಿಕೈಗಾರಿಕೆ ರೀತಿ ಮನೆಯಲ್ಲೇ ಅಗರಬತ್ತಿ ಸಣ್ಣ ಕಾರ್ಖಾನೆ ನಡೆಲಾಗುತ್ತಿತ್ತು.
ಮನೆಯ ಕೆಳ ಮಹಡಿಯಲ್ಲಿ ಅಗರಬತ್ತಿ ತಯಾರಿಕೆಗೆ ಬೇಕಾಗಿದ್ದ ದ್ರವ ದೂರಪದ (fire incident in agarabatti factory) ರಾಸಾಯನಿಕಗಳನ್ನು ಶೇಕರಿಸಿ ಇಡಲಾಗಿತ್ತು.
ಈ ಪ್ರದೇಶದಕ್ಕೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಿಂದಾಗಿ ರಾಸಾಯನಿಕಗಳು ತುಂಬಿದ್ದ ದೊಡ್ಡ ಕ್ಯಾನ್ಗಳು ಸಿಡಿದಿವೆ. ಆ ಸಂದರ್ಭದಲ್ಲಿ ಮನೆ, ಪಕ್ಕದ ಕಟ್ಟಡ ಹಾಗೂ ರಸ್ತೆಗೂ ಬೆಂಕಿ ಆವರಿಸಿದ್ದು,
ಈ ಸಂದರ್ಭದಲ್ಲಿ ಮನೆ ಮುಂದೆ ನಿಲ್ಲಿಸಿದ್ದ 8 ಬೈಕ್ಗಳು (Bike) ಸುಟ್ಟು ಭಸ್ಮವಾಗಿವೆ. ಮನೆಯಲ್ಲಿದ್ದ ರವಿ ಕುಮಾರ್ ಅವರಿಗೆ ತೀವ್ರಗಾಯಗಳಾಗಿದ್ದು, ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ.
ಸ್ಥಳಕ್ಕೆ ಆಗಮಿಸಿದ 3 ಅಗ್ನಿಶಾಮಕ ವಾಹನಗಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಈ ಘಟನೆಗೆ ಕಾರಣ ಏನು ಎಂಬುದನ್ನು ಅಗ್ನಿ ಶಾಮಕ ಸಿಬ್ಬಂದಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿದ್ಯುತ್ ಶಾಕ್
ಸರ್ಕ್ಯೂಟ್ (Shock Circuit) ಆಗಿ ಬೆಂಕಿ ಹತ್ತಿಕೊಂಡಿರವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇನ್ನು ಈ ಕಾರ್ಖಾನೆ ಪರವಾನಗಿ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಇದನ್ನು ಓದಿ: ಪರಶುರಾಮ ನಾಪತ್ತೆ: ಉಡುಪಿಯ ಬೈಲೂರಿನ ಬೆಟ್ಟದ ಥೀಮ್ ಪಾರ್ಕಿನ ಪರಶುರಾಮ ರಾತ್ರೋ ರಾತ್ರಿ ನಾಪತ್ತೆ
- ಭವ್ಯಶ್ರೀ ಆರ್.ಜೆ