Udupi: ಜಿಲ್ಲೆಯ ಕಾರ್ಕಳ (Karkala) ತಾಲೂಕಿನಲ್ಲಿರುವ ಪರಶುರಾಮ ಥೀಮ್ ಪಾಕ್೯ (Parashurama Statue Missing – Bailur) ಕಾಮಗಾರಿ ಶುರುವಾದಾಗಿನಿಂದಲೂ ಒಂದಲ್ಲ ಒಂದು
ರೀತಿ ಸಡ್ಡು ಮಾಡುತ್ತಿದ್ದು, ಬುಧವಾರವಷ್ಟೇ ಹೈಕೋರ್ಟ್ (Highcourt) ಈ ಪ್ರಕರಣಕ್ಕೆ ಸಂಬಧಪಟ್ಟಂತೆ ಸಲ್ಲಿಸದ್ದ ಅರ್ಜಿಯನ್ನು ವಜಾಗೊಳಿಸಿದ್ದ ಬೆನ್ನಲ್ಲೇ ಪರಶುರಾಮ ನಾಪತ್ತೆಯಾಗಿದೆ.
ಬೈಲೂರಿನ ಬೆಟ್ಟದ ಮೇಲೆ (ಅ.12) ನಿಂತಿದ್ದ ಪರಶುರಾಮನ ಮೂರ್ತಿಯು ಕಾಣುತ್ತಿಲ್ಲ, ಕೊಡಲಿಯೂ ಕಾಣುತ್ತಿಲ್ಲ, ಬಿಲ್ಲು ಸಹ ಕಾಣುತ್ತಿಲ್ಲ ಹಾಗಾದ್ರೆ ರಾತ್ರೋ ರಾತ್ರಿ ಈ ಪರಶುರಾಮನ ಕಳ್ಳತನ
ಮಾಡಲಾಯಿತಾ? ಅಥವಾ ಅಲ್ಲಿಂದ ಆ ಮೂರ್ತಿಯನ್ನೇ ತೆರವು ಮಾಡಲಾಯಿತಾ? ಮತ್ತೆ ಹೇಗೆ ನಾಪತ್ತೆಯಾಗಲು ಸಾಧ್ಯ ಎಂದು ಇದಕ್ಕೆಲ್ಲ ಉತ್ತರ ಸಿಗಬೇಕಾಗಿದೆ.
ಇದು ಸಂಪೂರ್ಣ ನಕಲಿ ಎಂದು ಈಗ ನೂರಕ್ಕೆ ನೂರರಷ್ಟು ಸತ್ಯ ಕಾಣುತ್ತಿದ್ದು, ಜನರನ್ನು ನಂಬಿಸಿ, ಧಾರ್ಮಿಕವಾಗಿ ಎಲ್ಲರನ್ನು ವಂಚನೆಗೊಳಿಸಲಾಗಿದೆ. ಇದು ಕಾರ್ಕಳ ಶಾಸಕರ ದ್ರೋಹದ
ಕಥೆಯಾಗಿದ್ದು, ನಕಲಿ ಪರಶುರಾಮನ ಪ್ರತಿಮೆಯನ್ನ ಸ್ಥಾಪನೆ ಮಾಡಿ ಇದು ಕಂಚಿನ ಮೂರ್ತಿ ಎಂದು ಹೇಳಿ ಸಾರ್ವಜನಿಕರಿಗೆ ವಂಚನೆ ಮಾಡಲಾಗಿದ್ದು, ಕಂಚಿನ ಪ್ರತಿಮೆಯನ್ನು ಸ್ಥಾಪಿಸುವವರೆಗೂ
ಧರಣಿಯನ್ನು ಮತ್ತು ಪ್ರತಿಭಟನೆಯನ್ನು ಮಾಡಲಾಗುತ್ತದೆ ಎಂದು (Parashurama Statue Missing – Bailur) ಅಲ್ಲಿಯ ಗ್ರಾಮಸ್ಥರು ತಿಳಿಸಿದ್ದಾರೆ.
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟನೆ
ಉಡುಪಿ (Udupi) ಮತ್ತು ಕಾರ್ಕಳದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಬೈಲೂರಿನ ಉಮಿಕಲ್ ಬೆಟ್ಟದ ಮೇಲೆ ಸುಮಾರು 15 ಕೋಟಿ ವೆಚ್ಚದಲ್ಲಿ 33 ಅಡಿಯ ಪರಶುರಾಮನ ಕಂಚಿನ
ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು. ಜನವರಿ 28, 2023 ರಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಯವರು (Basavaraj Bommai) ಉದ್ಘಾಟಿಸಿದ್ದರು.
ಈ ಪರಶುರಾಮ ಪ್ರತಿಮೆ ರಾಜ್ಯ ಮತ್ತು ರಾಷ್ಟ್ರದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸಿದ್ದು, ಥೀಮ್ ಪಾರ್ಕ್ನಲ್ಲಿ ಭಜನಾ ಮಂದಿರ, ಮ್ಯೂಸಿಯಂ (Museum), ತೆರೆದ
ಆಂಫಿಥಿಯೇಟರ್, ಪರಶುರಾಮನ ಜೀವನವನ್ನು ಚಿತ್ರಿಸುವ ರೇಖಾಚಿತ್ರಗಳು, ಆಡಿಯೊ ವಿಶುವಲ್ ಗ್ಯಾಲರಿ (Visual Gallery) ಮತ್ತು ರೆಸ್ಟೋರೆಂಟ್ ಕೂಡ ಇದೆ.
ಪರಶುರಾಮ ಮೂರ್ತಿ ನಕಲಿ ಎಂದು ವಿಜಯಟೈಮ್ಸ್ ವರದಿ
ಇನ್ನು ಈ ಪರಶುರಾಮ ಮೂರ್ತಿ ಅಸಲಿಯಲ್ಲ. ಅಧಿಕಾರಿಗಳು ಹಾಗೂ ಶಾಸಕರು ಸೇರಿ ಚುನಾವಣಾ ಗಿಮಿಕ್ ಮಾಡಲು ನಕಲಿ ಮೂರ್ತಿ ನೆಟ್ಟಿದ್ದಾರೆ ಅಂತ ವಿಜಯಟೈಮ್ಸ್ನ (Vijayatimes)
ಕವರ್ಸ್ಟೋರಿ ತಂಡ ದಾಖಲೆ ಸಮೇತ ವರದಿ ಪ್ರಸಾರ ಮಾಡಿತ್ತು. ಈ ವರದಿಯು ಸಾರ್ವಜನಿಕರಲ್ಲಿ ಭಾರೀ ಸಂಚಲನವುಂಟು ಮಾಡಿತ್ತು. ಇನ್ನು ಮೂರ್ತಿಯ ಪರಿಶುದ್ಧತೆಯ ಪರೀಕ್ಷೆ ನಡೆಯಬೇಕು
ಎಂದು ಸಾರ್ವಜನಿಕರು ಒತ್ತಾಯ ಮಾಡಿ ಉಪವಾಸ ಸತ್ಯಾಗ್ರಹವನ್ನೂ ಪ್ರಾರಂಭಿಸಿದ್ದರು. ಈ ಬಗ್ಗೆ ಜಿಲ್ಲಾಡಳಿತ ತೇಪೆ ಹಾಕುವ ಉತ್ತರ ನೀಡುತ್ತಾ ಬಂದಿತ್ತು.
ಅರ್ಧ ನಕಲಿ, ಅರ್ಧ ಅಸಲಿ
ವಿಜಯಟೈಮ್ಸ್ ಈ ಬಗ್ಗೆ ನಿರಂತರವಾಗಿ ವರದಿ ಪ್ರಸಾರ ಮಾಡುತ್ತಲೇ ಬಂದಿತ್ತು. ಈ ವರದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು ಪರಶುರಾಮ ಥೀಮ್ ಪಾರ್ಕ್ಗೆ
ಭೇಟಿ ಕೊಟ್ಟು ಮೂರ್ತಿಯ ಅಸಲಿಯತ್ತು ಕುರಿತು ಪರಿಶೀಲನೆ ನಡೆಸಿದ ಅವರು ಈ ರೀತಿ ಅರ್ಧ ನಕಲಿ, ಅರ್ಧ ಅಸಲಿ ಅಂತ ಪ್ರಶ್ನೆ ಮೂಡುವ ರೀತಿಯಲ್ಲಿ ಹೇಳಿಕೆ ಕೊಟ್ಟು ಜನರನ್ನು ಮೂರ್ಖರನ್ನಾಗಿಸಿದ್ದರು.
ಇದನ್ನು ಓದಿ : 10 ಗ್ರಾಂ ಚಿನ್ನ, ಉಚಿತ ಇಂಟರ್ನೆಟ್: ತೆಲಂಗಾಣದಲ್ಲಿ ಕಾಂಗ್ರೆಸ್ನಿಂದ ಉಚಿತ ಗ್ಯಾರಂಟಿಗಳ ಮಹಾಪೂರ..!
- ಭವ್ಯಶ್ರೀ ಆರ್.ಜೆ