ಕೊರೊನಾ ಹಿನ್ನಲೆ ಗಣರಾಜ್ಯೋತ್ಸವ ಫಲಪುಪ್ಪ ಪ್ರದರ್ಶನ ರದ್ದು

ಬೆಂಗಳೂರು ಜ 3 : ಕೊರೊನಾ ಹಿನ್ನಲೆಯಲ್ಲಿ ಲಾಲ್‌ಬಾಗ್‌ನಲ್ಲಿ ನಡೆಯಬೇಕಿದ್ದ ಫಲಪುಪ್ಪ ಪ್ರದರ್ಶನ ರದ್ದಾಗಲಿದೆ  ಈ ಬಾರಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಸಲು ಲಾಲ್‍ಬಾಗ್‍ನಲ್ಲಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ವರನಟ ಡಾ. ರಾಜ್‍ಕುಮಾರ್,  ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ಗಾಜಿನ ಮನೆಯಲ್ಲಿ ಅವರದೇ ಹೂವಿನ ಪ್ರತಿಕೃತಿಗಳನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಅದ್ಧೂರಿಯಾಗಿ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಏಕೆಂದರೆ ಕಳೆದ ಮೂರು ಬಾರಿಯಿಂದ ಪ್ರದರ್ಶನ ನಡೆಸಿರಲಿಲ್ಲ. ಈ ಬಾರಿಯಾದರೂ ಅದ್ಧೂರಿಯಾಗಿ ಮಾಡಿ, ನಷ್ಟವಾಗಿರುವ ಹಣ ತುಂಬಿಸಿಕೊಳ್ಳುವ ಯೋಜನೆಯೂ ಇತ್ತು. ಜತೆಗೆ ಈ ಬಾರಿ 10 ರಿಂದ 12 ದಿನಗಳ ಕಾಲ ಪ್ರದರ್ಶನ ನಡೆಸುವ ಬಗೆಗೂ ಚರ್ಚೆ ನಡೆಸಲಾಗಿತ್ತು

 ಇಡೀ ದಿನ ಜನ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಬರುತ್ತಾರೆ. ಅಷ್ಟು ಜನಸಂದಣಿ ತಡೆಯುವುದು ಕಷ್ಟ. ಒಂದು ವೇಳೆ 500 ಜನರನ್ನು ಬಿಟ್ಟರೆ ಅವರು ಪ್ರದರ್ಶನ ಮತ್ತು ಉದ್ಯಾನ ನೋಡಲು ಕನಿಷ್ಠವೆಂದರೂ 2-3 ಗಂಟೆ ಸಮಯ ತೆಗೆದುಕೊಳ್ಳುತ್ತಾರೆ. ಅಲ್ಲದೆ, ಹಾಗೆ ಬಂದವರು ಕೆಲವರು ಸಂಜೆಯವರೆಗೂ ಉದ್ಯಾನದಲ್ಲೇ ಇರುತ್ತಾರೆ. ಹೀಗಿರುವಾಗ, ನಾವು ಕೋಟಿಗಟ್ಟಲೆ ಹಣ ಖರ್ಚು ಮಾಡಿ ಕಡಿಮೆ ಜನರನ್ನು ಬಿಟ್ಟರೆ ನಮಗೆ ತೀವ್ರ ಪ್ರಮಾಣದಲ್ಲಿ ನಷ್ಟವಾಗುತ್ತದೆ. ಈಗಾಗಲೇ 2019ರಲ್ಲಿ ನಡೆಸಿದ ಪ್ರದರ್ಶನಗಳಿಂದಲೇ 40 ಲಕ್ಷ ರೂ.ಗೂ ಅಧಿಕ ಪ್ರಮಾಣದಲ್ಲಿ ನಷ್ಟ ಮಾಡಿಕೊಂಡಿದ್ದೇವೆ. ಈ ಬಾರಿ ಪ್ರದರ್ಶನ ಮಾಡಿ ಜನ ಬಾರದಿದ್ದರೆ ದೊಡ್ಡ ಮಟ್ಟದಲ್ಲಿ ನಷ್ಟವಾಗುತ್ತದೆ. ಹೀಗಾಗಿ, ಪ್ರದರ್ಶನ ಮಾಡದಿರಲು ತೀರ್ಮಾನಿಸಲಾಗಿದೆ ಎಂದು ಮೈಸೂರು ಉದ್ಯಾನ ಕಲಾಸಂಘದ ನಿರ್ದೇಶಕ ಎಂ. ಕುಪ್ಪುಸ್ವಾಮಿ  ತಿಳಿಸಿದರು.

Exit mobile version