Telangana: ಈಗಾಗಲೇ ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ ಗ್ಯಾರಂಟಿಗಳಲ್ಲೊಂದಾದ ಶಕ್ತಿ ಯೋಜನೆ ಸದ್ದು ಮಾಡುತ್ತಿರುವ ಬೆನ್ನಲ್ಲೇ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದ ಎರಡೇ ದಿನಕ್ಕೆ ಕಾಂಗ್ರೆಸ್ (Congress) ಸರ್ಕಾರ ತನ್ನ ಆರು ಚುನಾವಣಾ ಗ್ಯಾರಂಟಿಗಳ ಪೈಕಿ ಎರಡನ್ನು ಜಾರಿಗೊಳಿಸಲು ಮುಂದಾಗಿದೆ. ಇಂದಿನಿಂದ ‘ಮಹಾಲಕ್ಷಿ’ (Mahalakshmi) ಯೋಜನೆಯಡಿ ಟಿಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮತ್ತು ‘ರಾಜೀವ್ ಆರೋಗ್ಯ ಶ್ರೀ’ ಯೋಜನೆಯಡಿ 10 ಲಕ್ಷ ರೂಪಾಯಿ ವಿಮೆ ಯೋಜನೆ ಅನುಷ್ಠಾನಗೊಳ್ಳಲಿದೆ.

“ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ಇಂದು (ಡಿ.9) ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 2 ಗಂಟೆಯ ಬಳಿಕ ರಾಜ್ಯಾಧ್ಯಂತ ಮಹಿಳೆಯರು ಟಿಎಸ್ಆರ್ಟಿಸಿ (TSRTC) ಸಾಮಾನ್ಯ ಬಸ್ಗಳಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸಬಹುದು” ಎಂದು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಟಿಎಸ್ಆರ್ಟಿಸಿ ಎಂ.ಡಿ ವಿಸಿ ಸಜ್ಜನರ್ (M.D VC Sajjan), ತಿಳಿಸಿದ್ದಾರೆ.
“ಮಹಿಳೆಯರು, ವಿದ್ಯಾರ್ಥಿನಿಯರು, ತೃತೀಯ ಲಿಂಗಿಗಳು ಉಚಿತ ಪ್ರಯಾಣ ಮಾಡಬಹುದು. ಹೈದರಾಬಾದ್ (Hyderabad) ನಗರದಲ್ಲಿ ಸಾಮಾನ್ಯ ಬಸ್ಗಳು ಮತ್ತು ಮೆಟ್ರೋ ಸೇವಾ ಬಸ್ಗಳಲ್ಲಿ ಈ ಸೌಲಭ್ಯವಿದೆ. ರಾಜ್ಯದ ಇತರೆಡೆಗಳಲ್ಲಿ ಎಕ್ಸ್ಪ್ರೆಸ್ ಮತ್ತು ಗ್ರಾಮೀಣ ಸಾರಿಗೆ (ಪಲ್ಲೆ ವೆಲುಗು) ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು” ಎಂದು ಮಾಹಿತಿ ನೀಡಿದ್ದಾರೆ.

ತೆಲಂಗಾಣ (Telangana) ರಾಜ್ಯಾದ್ಯಂತ ಸರ್ಕಾರಿ ಬಸ್ಗಳ ಸಂಖ್ಯೆಯನ್ನೂ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದ್ದು, ಪ್ರಸ್ತುತ 7,200 ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ. ಇದರ ಪ್ರಮಾಣ ಶೇ.40ರಷ್ಟಿದೆ. ಇದನ್ನು ಶೇ.55ಕ್ಕೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಉಚಿತ ಪ್ರಯಾಣಕ್ಕೆ ಶೂನ್ಯ ವೆಚ್ಚದ ಟಿಕೆಟ್ ನೀಡಲಾಗುವುದು. ಮಹಿಳೆಯರು ತಮ್ಮ ಗುರುತಿನ ಚೀಟಿಗಳನ್ನು ತೋರಿಸಿ ಉಚಿತ ಟಿಕೆಟ್ (Ticket) ಪಡೆದು ಪ್ರಯಾಣಿಸಬಹುದು” ಎಂದು ಹೇಳಿದ್ದಾರೆ.
ವಾರ್ಷಿಕವಾಗಿ ರಾಜ್ಯ ಸರ್ಕಾರಕ್ಕೆ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಯಿಂದ 3 ಸಾವಿರ ಕೋಟಿ ರೂಪಾಯಿ ಆರ್ಥಿಕ ಹೊರೆಯಾಗಲಿದೆ ಎಂದು ತಿಳಿದು ಬಂದಿದೆ.
ಭವ್ಯಶ್ರೀ ಆರ್ ಜೆ