Uttar Pradesh: ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ (Vishnu Shankar Jain) ಅವರು, ಜ್ಞಾನವಾಪಿ (Gyanvapi Masjid Controversy) ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ
ಪುರಾತತ್ವ ಇಲಾಖೆ ವರದಿಯನ್ನು ಅಧ್ಯಯನ ಮಾಡಿ ನಮ್ಮ ಮುಂದಿನ ಕಾನೂನು ಹೋರಾಟದ ರೂಪುರೇಷೆ ರೂಪಿಸುವುದಾಗಿ ಹೇಳಿದ್ದಾರೆ.
ವಕೀಲರಾದ ಜೈನ್ ಅವರು, ಜ್ಞಾನವಾಪಿ ಹಾಗೂ ಕಾಶಿ ವಿಶ್ವನಾಥ ದೇಗುಲ (Kashi Vishwanath Temple) ಪ್ರಕರಣದಲ್ಲಿ ಹಿಂದೂ ಪರ ವಾದಿಸುತ್ತಿದ್ದು, ಮೊದಲು ವರದಿ ನಮ್ಮ ಕೈ ಸೇರಲಿ ಎಂದು
ಹೇಳಿದ್ದಾರೆ. ಈ ಕುರಿತಾಗಿ ಎಎನ್ಐ (ANI) ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ವಿಷ್ಣು ಶಂಕರ್ ಜೈನ್ ಈಗಾಗಲೇ ವಾರಣಾಸಿ ನ್ಯಾಯಾಲಯದ ತೀರ್ಪು ಹೊರಬಿದ್ದಿದ್ದು, ಪ್ರಕರಣದ ಪರ ವಿರೋಧ
ವಾದಿಸುತ್ತಿರುವ ಎರಡೂ (Gyanvapi Masjid Controversy) ಕಡೆಯವರೂ ಒಪ್ಪಿದ್ದೇವೆ.
ಎರಡೂ ಕಡೆಯವರೂ ಜ್ಞಾನವಾಪಿ (Gyanvapi) ಆವರಣದಲ್ಲಿ ನಡೆದ ವೈಜ್ಞಾನಿಕ ಸರ್ವೆ ವರದಿಯ ಪ್ರತಿ ಪಡೆಯಲು ಪ್ರಮಾಣ ಪತ್ರ ಸಲ್ಲಿಸಲಿದ್ದೇವೆ. ಆ ನಂತರವಷ್ಟೇ ನಮಗೆ ಸರ್ವೆ ವರದಿಯ ಪ್ರತಿ
ಸಿಗಲಿದೆ ಎಂದು ಹೇಳಿದರು. ಸರ್ವೆ ವರದಿ ಅಧ್ಯಯನದ ಬಳಿಕ ಕಾನೂನಾತ್ಮಕವಾಗಿ ಯಾವೆಲ್ಲಾ ಮಾರ್ಗಗಳನ್ನು ಅನುಸರಿಸಬಹುದು, ಹೇಗೆಲ್ಲಾ ವಿಶ್ಲೇಷಿಸಬಹುದು ಎಂದು ನಾವು ಚರ್ಚಿಸುತ್ತೇವೆ.
ವಿಷ್ಣು ಶಂಕರ್ ಜೈನ್ ಅವರು, ಈ ವರದಿಯನ್ನು ಬಹಿರಂಗ ಮಾಡಬಾರದು ಎಂದು ನ್ಯಾಯಾಲಯ ಎಲ್ಲಿಯೂ ಹೇಳಿಲ್ಲವೆಂದು ಹೇಳಿದ್ದಾರೆ. ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ಮಂದಿರಕ್ಕೆ
ಹೊಂದಿಕೊಂಡಿದ್ದು, ಇದರ ಸಂಕೀರ್ಣ ಕುರಿತು ಭಾರತೀಯ ಪುರಾತತ್ವ ಇಲಾಖೆ ನಡೆಸಿದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಪ್ರಕರಣದ ಹಿಂದೂ ಹಾಗೂ ಮುಸ್ಲಿಂ (Muslim) ಅರ್ಜಿದಾರರಿಗೆ
ಒದಗಿಸಲು ವಾರಾಣಸಿ ಜಿಲ್ಲಾ ನ್ಯಾಯಾಲಯ ಬುಧವಾರ ಒಪ್ಪಿಗೆ ನೀಡಿತ್ತು.
ಅಲ್ಲದೇ ವರದಿಯನ್ನು ಸಾರ್ವಜನಿಕಗೊಳಿಸದಂತೆ ಕೋರ್ಟ್ಗೆ ಅಫಿಡವಿಟ್ (Affidavit) ಸಲ್ಲಿಸುವಂತೆ ಉಭಯ ಅರ್ಜಿದಾರರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ ಎಂಬ ಮಾಹಿತಿ ಇದೆ.
ಕಾಶಿ ವಿಶ್ವನಾಥ ದೇವಾಲಯ ಮೂಲ ತಳಪಾಯದ ಮೇಲೆ 17ನೇ ಶತಮಾನದಲ್ಲಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ಹಿಂದೂ ಪರ ಅರ್ಜಿದಾರರ ವಾದವನ್ನು ಪುರಸ್ಕರಿಸಿದ್ದ ವಾರಾಣಸಿ
ನ್ಯಾಯಾಲಯ, ಈ ಸ್ಥಳದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್ಐ) ಸೂಚಿಸಿತ್ತು.
ಎಎಸ್ಐ ವಾರಣಾಸಿ ಕೋರ್ಟ್ಗೆ (Varanasi Court) ಮುಚ್ಚಿದ ಲಕೋಟೆಯಲ್ಲಿ ಡಿಸೆಂಬರ್ 18ರಂದು ವರದಿ ಸಲ್ಲಿಸಿತ್ತು. ಈ ವೇಳೆ ವರದಿ ನೀಡುವಂತೆ ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು
ಶಂಕರ್ ಜೈನ್ ಆಗ್ರಹಿಸಿದ್ದರು. ಇದಕ್ಕೆ ಮುಸ್ಲಿಂ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಬಹಿರಂಗಪಡಿಸಲು ಸಾಧ್ಯವಾಗಿರಲಿಲ್ಲ. ಪ್ರತಿವಾದಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ
ಪರವಾಗಿ ವಕೀಲ ಮುಮ್ತಾಜ್ ಅಹ್ಮದ್ (Mumtaz Ahmed) ವಾದಿಸಿದ್ದರು.
ಇದನ್ನು ಓದಿ: ಮೆಟ್ರೋ ರೈಲು ಸೇವೆ ಸ್ಥಗಿತ: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಮೂರು ದಿನ ಮೆಟ್ರೋ ರೈಲು ಸಂಚಾರ ಸ್ಥಗಿತ
- ಭವ್ಯಶ್ರೀ ಆರ್ ಜೆ