New Delhi: ಸುಪ್ರೀಂ ಕೋರ್ಟ್ (Heartbeat Cant stop – SC) 26 ವಾರಗಳ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ್ದು, ವಿವಾಹಿತ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ
ಕೋರ್ಟ್ ಮಗುವಿನಲ್ಲಿ ಯಾವುದೇ ಅಸಹಜತೆ ಇಲ್ಲ. ಆರೋಗ್ಯವಾಗಿದೆ ಎಂದು ಅಖಿಲ ಭಾರತೀಯ ವಿಜ್ಞಾನಗಳ ಸಂಸ್ಥೆ ನೀಡಿರುವ ವರದಿಯನ್ನು ಅನುಮೋದಿಸಿದ್ದು, ಇಷ್ಟು ದಿನ ಮಹಿಳೆ ಏನು
ಮಾಡುತ್ತಿದ್ದಳು, ಈ ಸಮಯದಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಲು ಆಗಲ್ಲ ಎಂದು ಸಿಜೆಐ ಡಿವೈ ಚಂದ್ರಚೂಡ (D Y Chandrachooda) ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿಯಾದ ಡಿವೈ ಚಂದ್ರಚೂಡ ಅವರು, ಮಹಿಳೆಯು ಗರ್ಭಧರಿಸಿ 26 ವಾರ ಮತ್ತು 5 ದಿನ ಆಗಿದೆ. ಈ ಸಮಯದಲ್ಲಿ ಗರ್ಭಪಾತಕ್ಕೆ ಅನುಮತಿಸುವುದು ಗರ್ಭಾವಸ್ಥೆಯ
ವೈದ್ಯಕೀಯ ಮುಕ್ತಾಯ ಕಾಯಿದೆಯ ಸೆಕ್ಷನ್ (Section) 3 ಮತ್ತು 5 ರ ಉಲ್ಲಂಘನೆಯಾಗಿದ್ದು, ತಾಯಿಗೆ ಯಾವುದೇ ಅಪಾಯವಿಲ್ಲ ಮತ್ತು ಇದು ಮಗುವಿನ ಅಸಜಹತೆ ಪ್ರಕರಣವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆ ತನ್ನ ಗರ್ಭಪಾತಕ್ಕೆ ಆದೇಶ ನೀಡುವಂತೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಅತ್ಯಾಚಾರ ಸಂತ್ರಸ್ತರು ಮತ್ತು ವಿಕಲಚೇತನರು ಹಾಗೂ ಅಪ್ರಾಪ್ತ ವಯಸ್ಕರು ಸೇರಿ ವಿವಾಹಿತ ಮಹಿಳೆಯರಿಗೆ
ಗರ್ಭಪಾತದ ಗರಿಷ್ಠ ಮಿತಿ ಎಂಟಿಪಿ (MTP) ಕಾಯಿದೆಯಡಿಯಲ್ಲಿ 24 ವಾರಗಳಾಗಿವೆ. ಎರಡು ಮಕ್ಕಳ ತಾಯಿಯಾಗಿರುವ ಆಕೆ ತಾನು ಖಿನ್ನತೆಯಿಂದ ಬಳಲುತ್ತಿದ್ದು, ಮಾನಸಿಕವಾಗಿ ಅಥವಾ
ಆರ್ಥಿಕವಾಗಿ ಮೂರನೇ ಮಗುವನ್ನು ಬೆಳೆಸುವ ಸ್ಥಿತಿಯಲ್ಲಿ ನಾನು ಇಲ್ಲ ಎಂದು (Heartbeat Cant stop – SC) ಕೋರ್ಟ್ಗೆ ಹೇಳಿದ್ದರು.
ಇದೇ ವಿಚಾರವಾಗಿ ಅಕ್ಟೋಬರ್ (October) 9 ರಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ (Hima Kohli) ಮತ್ತು ನ್ಯಾಯಮೂರ್ತಿ ಬಿವಿ ನಾಗರತ್ನ ಅವರ ದ್ವಿಸದಸ್ಯ ಪೀಠವು ಈ ಹಿಂದೆ ವಿಭಿನ್ನ ತೀರ್ಪನ್ನು
ನೀಡಿತ್ತು. ಆದ್ದರಿಂದ ಈ ಪ್ರಕರಣ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಅವರ ನೇತೃತ್ವದ ಪೀಠದ ಮುಂದೆ ಬಂದಿತ್ತು. ಈ ಹಿಂದೆಯೇ ಮಹಿಳೆ ಗರ್ಭಪಾತಕ್ಕೆ ಏಕೆ ಅನುಮತಿಯನ್ನು ಪಡೆಯಲಿಲ್ಲ
ಎಂದು ಸುಪ್ರೀಂ ಕೋರ್ಟ್ ಪ್ರಶನೇ ಮಾಡಿತ್ತು.
ಮಹಿಳೆಗೆ ಪ್ರಶ್ನೆ ಮಾಡಿದ ನ್ಯಾಯಮೂರ್ತಿ:
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, 26 ವಾರಗಳ ಕಾಲ ಆಕೆ ಏನು ಮಾಡುತ್ತಿದ್ದಳು? ಅವಳಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ? ಈಗ ಏಕೆ ಬಂದಿದ್ದೀರಿ? ನಾವು ನ್ಯಾಯಾಂಗ
ತೀರ್ಪಿನ ಮೂಲಕ ಮಗುವಿನ ಸಾವಿಗೆ ಆದೇಶ ನೀಡುತ್ತೇವೆಯೇ? ಎಂದು ಪ್ರಶ್ನಿಸಿದ್ದರು. ಇನ್ನು, ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಅನುಮತಿ ನೀಡಿರುವ ಕೋರ್ಟ್ ಆದೇಶವನ್ನು ತಮ್ಮ ಅರ್ಜಿಯಲ್ಲಿ
ಉಲ್ಲೇಖಿಸಿದ್ದಾರೆ ಎಂದು ಕೇಂದ್ರದ ವಕೀಲರು ಕೋರ್ಟ್ಗೆ ತಿಳಿಸಿದ್ದರು. ಆಗ ಸುಪ್ರೀಂ ಕೋರ್ಟ್, ಅರ್ಜಿದಾರರು ಅತ್ಯಾಚಾರ ಸಂತ್ರಸ್ತೆ ಅಲ್ಲ, ಅಪ್ರಾಪ್ತ ವಯಸ್ಕಳಲ್ಲ. 26 ವಾರಗಳ ಕಾಲ ಆಕೆ
ಏನು ಮಾಡುತ್ತಿದ್ದಳು? ಎಂದು ಪ್ರಶ್ನಿಸಿದರು.
ಸರ್ಕಾರ ಮಗುವನ್ನು ನೋಡಿಕೊಳ್ಳಬಹುದು:
ಹುಟ್ಟುವ ಮಗುವಿನ ಹಕ್ಕುಗಳನ್ನು ಕೂಡ ಪರಿಶೀಲಿಸಬೇಕು ಎಂದು ತಿಳಿಸಿರುವ ಸಿಜೆಐ (CJI) , ಮಗು ಹುಟ್ಟಲು ಅವಕಾಶ ನೀಡುವುದು ಒಂದು ಆಯ್ಕೆಯಾಗಿದ್ದು, ಸರ್ಕಾರ ಅದನ್ನು ನೋಡಿಕೊಳ್ಳಬಹುದು
ಎಂದು ಹೇಳಿದೆ. ಈ ಹಂತದಲ್ಲಿ ಹೆರಿಗೆ ಮಾಡಿಸಿದರೆ ಮಗುವಿನಲ್ಲಿ ವಿರೂಪಗಳಿಗೆ ಕಾರಣವಾಗಬಹುದು ಎಂದು ಅಭಿಪ್ರಾಯಪತ್ತಿರುವ ನ್ಯಾಯಾಲಯವು ಮಗು ವಿಕಲಚೇತನವಾಗಿ ಜನಿಸಿದರೆ,
ಯಾರೂ ದತ್ತು ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಸಿಜೆಐ ಹೇಳಿದ್ದಾರೆ.
ಇದನ್ನು ಓದಿ: 10 ಗ್ರಾಂ ಚಿನ್ನ, ಉಚಿತ ಇಂಟರ್ನೆಟ್: ತೆಲಂಗಾಣದಲ್ಲಿ ಕಾಂಗ್ರೆಸ್ನಿಂದ ಉಚಿತ ಗ್ಯಾರಂಟಿಗಳ ಮಹಾಪೂರ..!
- ಭವ್ಯಶ್ರೀ ಆರ್.ಜೆ