Bengaluru: ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಐಸಿಸ್ (ISIS) ಉಗ್ರರ ಜಾಲ ಕಟ್ಟುವ ಸಲುವಾಗಿ ಯುವಕರನ್ನು ನೇಮಿಸಿಕೊಳ್ಳಬೇಕೆಂದು ಐಸಿಸ್ ಉಗ್ರರ ಸಂಚು ರೂಪಿಸಿದ್ದಾರೆ ಎಂಬ ಸ್ಪೋಟಕ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ದಳ ಪತ್ತೆ ಹಚ್ಚಿದೆ.
![NIA](https://sp-ao.shortpixel.ai/client/to_webp,q_glossy,ret_img,w_739,h_415/https://vijayatimes.com/wp-content/uploads/2024/06/1905nia.jpeg)
ಕರ್ನಾಟಕದ (Karnataka) ಬಳ್ಳಾರಿ ಜಿಲ್ಲೆಯಲ್ಲಿ ಮೊಹಮ್ಮದ್ ಮುನಿರುದ್ದೀನ್, ಸೈಯದ್ ಅಮೀರ್, ಎಂ.ಡಿ.ಮುಜಮಿಲ್ (Mohammad Muniruddin, Syed Amir, M.D. Muzamil) ಹಾಗೂ ಮಹಾರಾಷ್ಟ್ರದ ನಾಲ್ವರು ಉಗ್ರರ ಸೇರಿದಂತೆ ಒಟ್ಟು ಏಳು ಶಂಕಿತ ಉಗ್ರರನ್ನು ಬಂಧಿಸಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಉಗ್ರರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಜಾರ್ಜ್ಶೀಟ್ನ (Chargesheet) ಲ್ಲಿರುವ ವಿವರಗಳು ಇಡೀ ದೇಶದ ಜನರನ್ನು ಬೆಚ್ಚಿಬೀಳುವಂತೆ ಮಾಡಿವೆ.
NIA ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಏನಿದೆ?
• ಉಗ್ರರ ಜಾಲವು ದೇಶದ ಪ್ರತಿ ಜಿಲ್ಲೆಯಲ್ಲೂ ಯುವಕರನ್ನು ಐಸಿಎಸ್ ಉಗ್ರ ಸಂಘಟನೆಗೆ ನೇಮಿಸುವ ಉದ್ದೇಶ ಹೊಂದಿತ್ತು.
• ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 50 ಯುವಕರನ್ನು ಸ್ಲೀಪರ್ಸೆಲ್ಗಳನ್ನಾಗಿ ನೇಮಕ ಮಾಡಿಕೊಂಡಿಕೊಳ್ಳುವ ಸಂಚು.
• 2025ರ ವೇಳೆ ದೇಶಾದ್ಯಂತ ಐಸಿಸ್ ಉಗ್ರ ಸಂಘಟನೆಯ ಜಾಲವನ್ನು ವಿಸ್ತರಣೆ ಮಾಡಬೇಕೆಂಬ ಉದೇಶ.
![](https://sp-ao.shortpixel.ai/client/to_webp,q_glossy,ret_img,w_822,h_537/https://vijayatimes.com/wp-content/uploads/2024/06/547378.webp)
• ಭಾರತದಾದ್ಯಂತ ಐಸಿಸ್ ಜಾಲವನ್ನು ವಿಸ್ತರಿಸುವುದಾಗಿ ಸುಲೇಮಾನ್ ಅಲಿಯಾಸ್ ಮಿನಾಜ್ (Suleman alias Minaj) ಎಂಬಾತನಿಂದ 7 ಉಗ್ರರು ಪ್ರತಿಜ್ಞೆ ಪಡೆದುಕೊಂಡಿದ್ದರು.
• ಸ್ಲೀಪರ್ ಸೆಲ್ಗಳನ್ನು (Sleeper Cell) ಬಳಸಿ ಗೆರಿಲ್ಲಾ ಮಾದರಿಯ ದಾಳಿಗೆ ಸಂಚು ರೂಪಿಸಿದ್ದರು.
• ಸುಧಾರಿತ ಸ್ಫೋಟಕ ಸಾಧನಗಳ ಮೂಲಕ ಭಾರತದಾದ್ಯಂತ ದಾಳಿ ನಡೆಸುವುದು,
• ಬಳ್ಳಾರಿ (Bellary) ಜಿಲ್ಲೆಯನ್ನು ಉಗ್ರ ಸಂಘಟನೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವುದು.
• ಬಳ್ಳಾರಿಯಲ್ಲಿಯೇ ಪ್ರಾಯೋಗಿಕವಾಗಿ ಸ್ಫೋಟಿಸುವುದು ಮತ್ತು ಅರಾಜಕತೆ ಸೃಷ್ಟಿಸುವುದು.
• ಸ್ಲೀಪರ್ಸೆಲ್ಗಳ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರುವುದು.
• ಧಾರ್ಮಿಕ ಮುಖಂಡರು, ಯೋಧರು, ಪೊಲೀಸರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದು.
• 2025ರ ವೇಳೆಗೆ ಭಾರತದಲ್ಲಿ ತನ್ನ ಶಕ್ತಿಯನ್ನು ವೃದ್ದಿಸಿಕೊಂಡು, ನಿರಂತರವಾಗಿ ದಾಳಿ ಮಾಡುವುದು.