ವಿದ್ಯುತ್ ದರ ಏರಿಕೆ ನಂತರ ಮತ್ತೊಂದು ಶಾಕ್ ! ನೀರಿನ ದರ ಶೇ.12-15 ಏರಿಸಲು ಜಲಮಂಡಳಿ ಚಿಂತನೆ

ಬೆಂಗಳೂರು: ಅಧಿಕಾರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ (jalamandali increasing water rate) ಸರ್ಕಾರ ಗ್ರಾಹಕರಿಗೆ ಶಾಕ್ ಕೊಟ್ಟಿತ್ತು. ವಿದ್ಯುತ್ ದರವು ದಿಢೀರನೆ ಏರಿಕೆಯಾಗಿತ್ತು (Electricity Bill Hike).

ಈ ಬಗ್ಗೆ ಜನ ಸಾಮಾನ್ಯರು 200 ಯೂನಿಟ್ ಉಚಿತ ವಿದ್ಯುತ್ ಘೋಷಿಸಿ ಈಗ ಏರಿಕೆ ಮಾಡಿದೆ ಎಂದು ಆಕ್ರೋಶ ಹೊರ ಹಾಕಿದ್ದರು. ಇದು ಹಿಂದಿನ ಸರ್ಕಾರ ಮಾಡಿದ ತಪ್ಪು ಎಂದು ಕಾಂಗ್ರೆಸ್ ಸರ್ಕಾರ ಸುಮ್ಮನಾಗಿತ್ತು.

ಆದ್ರೆ ಈಗ ಕೇವಲ ಜನ ಸಾಮಾನ್ಯರಿಗಷ್ಟೇ ಅಲ್ಲದೆ ಕೈಗಾರಿಕೆಗಳು ಮತ್ತು ಸರ್ಕಾರಿ ಸಂಸ್ಥೆಗಳ ಮೇಲೂ ವಿದ್ಯುತ್ ದರ ಏರಿಕೆ ಪರಿಣಾಮ ಬೀರಿದೆ. ಇದೀಗ ವಿದ್ಯುತ್ ಬಿಲ್ ಹೆಚ್ಚಳದ ನಂತರ ನೀರಿನ ದರವನ್ನು ಹೆಚ್ಚಿಸುವ

ಪ್ರಸ್ತಾವನೆಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸರ್ಕಾರದ ಮುಂದಿಡಲು ಮುಂದಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

BWSSB ನಗರಕ್ಕೆ ಹಾರೋಹಳ್ಳಿ, ತೊರೆಕಾಡನಹಳ್ಳಿ, ಮತ್ತು ಟಿಕೆ ಹಳ್ಳಿ ಮತ್ತು ತಾತುಗುಣಿಯಲ್ಲಿನ ಪಂಪಿಂಗ್ ಸ್ಟೇಷನ್‌ಗಳ ಮೂಲಕ ನೀರನ್ನು ಪೂರೈಸುತ್ತಿದೆ. ಮನೆಗಳಿಗೆ ನೀರು ಸರಬರಾಜು ಮಾಡಲು ಮತ್ತು

ನೀರನ್ನು ಪಂಪ್ ಮಾಡಲು BWSSB ವಿದ್ಯುತ್ ಅನ್ನು ಬಳಸುತ್ತದೆ.ಉಪ ವಿಭಾಗಗಳು, ಪಂಪಿಂಗ್‌ ಸ್ಟೇಷನ್‌ಗಳು, ಹಾಗೂ ಪ್ರಧಾನ ಕಚೇರಿ ಸೇರಿದಂತೆ ಇತರೆ ಕಚೇರಿಗಳಲ್ಲಿ ಬಳಸಿದ ಒಟ್ಟು

ವಿದ್ಯುತ್‌ಗೆ ಮಾಸಿಕ 80 ಕೋಟಿ ರೂ. ಶುಲ್ಕ ಪಾವತಿ (jalamandali increasing water rate) ಮಾಡಲಾಗುತ್ತಿತ್ತು.

ಆದರೆ ಇದೀಗ ಈಗ ವಿದ್ಯುತ್‌ ಶುಲ್ಕ ಏರಿಕೆಯಾಗಿರುವುದರಿಂದ ತಿಂಗಳಿಗೆ ಹೆಚ್ಚುವರಿಯಾಗಿ 10-12 ಕೋಟಿ ರೂ. ಹೆಚ್ಚುವರಿ ಬಿಲ್ ಜಲಮಂಡಳಿಯು ಕಟ್ಟುವಂತಾಗಿದೆ.

BWSSB ಹಣಕಾಸು ನಿರ್ವಾಹಣೆ ವಿದ್ಯುತ್ ದರಗಳ ಹೆಚ್ಚಳದಿಂದಾಗಿ ಕಷ್ಟವಾಗಿದೆ. ಹೀಗಾಗಿ ಸರ್ಕಾರಕ್ಕೆ ನೀರಿನ ದರವನ್ನು ಹೆಚ್ಚಿಸಲು ವಿನಂತಿಸಿ ಪ್ರಸ್ತಾವನೆಯನ್ನು ಕಳುಹಿಸಲು ಚಿಂತನೆ ನಡೆಸಿದೆ.

ಇದನ್ನೂ ಓದಿ : ಜುಲೈ 3 ರಿಂದ 10 ದಿನ ವಿಧಾನಸಭೆ ಅಧಿವೇಶನ : ಸಿಎಂ ಸಿದ್ದರಾಮಯ್ಯರಿಂದ ಬಜೆಟ್‌ ಮಂಡನೆ

ಹೆಚ್ಚಿದ ವಿದ್ಯುತ್ ದರದೊಂದಿಗೆ ಇಲಾಖೆಯು ತಿಂಗಳಿಗೆ 10-12 ಕೋಟಿ ಹೆಚ್ಚುವರಿ ಬಿಲ್‌ಗಳನ್ನು BWSSB ಅಧಿಕಾರಿಗಳ ಪ್ರಕಾರ, ಪಾವತಿಸಬೇಕಾಗುತ್ತದೆ. ಹೀಗಾಗಿ ಶೀಘ್ರದಲ್ಲೇ ಗ್ರಾಹಕರಿಗೂ ಈ ಹೊರೆಯನ್ನು

ವರ್ಗಾವಣೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.ಇನ್ನು BWSSB ಅಧಿಕಾರಿಗಳು ವಿದ್ಯುತ್ ದರ ಹೆಚ್ಚಳವನ್ನು ಸರಿದೂಗಿಸಲು ನೀರಿನ ಬಿಲ್ ಶೇಕಡಾ 12-15% ಕ್ಕೆ ಏರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ನೀರಿನ ದರ ಪರಿಷ್ಕರಣೆ ಪ್ರತಿ ಮೂರು ವರ್ಷಕ್ಕೊಮ್ಮೆ ಮಾಡಬೇಕೆಂಬ ನಿಯಮವಿದೆ. ಆದರೆ ನೀರಿನ ದರ ಕಳೆದ 2014ರಿಂದ ಇಲ್ಲಿಯವರೆಗೂ ಪರಿಷ್ಕರಣೆಯಾಗಿಲ್ಲ. ನೀರಿನ ದರ ಪರಿಷ್ಕರಣೆಗೆ ಈ ಹಿಂದಿನ ಸರಕಾರಕ್ಕೆ ಪ್ರಸ್ತಾವ

ಸಲ್ಲಿಸಿದಾಗ ಕೊರೊನಾ ಸೇರಿದಂತೆ ಇನ್ನಿತರೆ ಕಾರಣ ನೀಡಿ ಅನುಮತಿ ತಿರಸ್ಕರಿಸಿತ್ತು.

ಸದ್ಯ ಜಲಮಂಡಳಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಹಾಗೂ ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ್‌ ಅವರಿಗೆ ಈಗಾಗಲೇ ಮನವರಿಕೆ ಮಾಡಿಕೊಡಲಾಗಿದೆ.ಜಲಮಂಡಳಿ ಅಧ್ಯಕ್ಷ

ಎನ್‌. ಜಯರಾಂ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳು ವಿದ್ಯುತ್‌ ದರ ಏರಿಕೆಯಿಂದ ಎದುರಾಗಿರುವ ಸಮಸ್ಯೆ ಬಗ್ಗೆ ಸಭೆ ನಡೆಸಿದ್ದಾರೆ. ನೀರಿನ ದರ ಏರಿಕೆ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಗುತ್ತಿದೆ.

ನೀರಿದ ದರ ಆದಷ್ಟು ಬೇಗ ಹೀಗಾಗಿ ಏರಿಕೆಯಾಗುವ ಸಾಧ್ಯತೆ ಇದೆ.

ರಶ್ಮಿತಾ ಅನೀಶ್

Exit mobile version