ಜನೌಷಧ ಕೇಂದ್ರವೂ ಬ್ರಾಂಡೆಡ್ ಔಷಧಗಳಷ್ಟೇ ಗುಣಮಟ್ಟದ್ದು:ಸದಾನಂದ ಗೌಡ

ಬೆಂಗಳೂರು,ಫೆ.19: ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಅದರಲ್ಲೂ ಬಡವರಿಗೆ ಜನೌಷಧಿಯನ್ನೇ ವೈದ್ಯರು ಬರೆದುಕೊಡಬೇಕು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ವೈದ್ಯರಲ್ಲಿ ಮನವಿ ಮಾಡಿದ್ದಾರೆ. ನಾಗರಬಾವಿಯಲ್ಲಿ ಜನೌಷಧಿ ಮಳಿಗೆ ಉದ್ಘಾಟಿಸಿ ಮಾತನಾಡಿದ ಸಚಿವ ಸದಾನಂದ ಗೌಡ,  ಜನ ಸಾಮಾನ್ಯರ ಅನುಕೂಲಕ್ಕಾಗಿ ದೇಶದ ಪ್ರತಿಯೊಂದು ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧ ಕೇಂದ್ರ ತೆರೆಯಲಾಗುವುದು ಎಂದು  ಹೇಳಿದರು.

‘ಜನೌಷಧಿಯೂ ಬ್ರಾಂಡೆಡ್ ಔಷಧಗಳಷ್ಟೇ ಗುಣಮಟ್ಟದ್ದು. ಆದರೆ, ದರ ಕಡಿಮೆ. ಉದಾಹರಣೆಗೆ ಮಧುಮೇಹ, ರಕ್ತದೊತ್ತಡ ಮುಂತಾದ ಖಾಯಿಲೆಗಳಿಗೆ ಸಾಮಾನ್ಯ ಔಷಧ ಅಂಗಡಿಗಳಲ್ಲಿ ಔಷಧ ಖರೀದಿಸಬೇಕೆಂದರೆ ತಿಂಗಳಿಗೆ ₹2,500 ರಿಂದ ₹3 ಸಾವಿರ ವೆಚ್ಚವಾಗುತ್ತದೆ. ಇದೇ ಔಷಧ ಜನೌಷಧ ಕೇಂದ್ರಗಳಲ್ಲಿ ₹250ರಿಂದ ₹300ರೊಳಗೆ ಸಿಗಲಿದೆ’ ಎಂಬ ಮಾಹಿತಿಯನ್ನು ನೀಡಿದರು. 

Exit mobile version