ಹಾಸನ ಕ್ಷೇತ್ರದಿಂದ ಭವಾನಿ ಶಾಸಕರಾಗುತ್ತಾರೆ : ಎಚ್.ಡಿ.ರೇವಣ್ಣ!

JDS

ಹಾಸನ(Hassan) ವಿಧಾನಸಭಾ ಕ್ಷೇತ್ರದಿಂದ ಭವಾನಿ(Bhavani Revanna) ಶಾಸಕರಾಗಿ(MLA)ಆಯ್ಕೆಯಾಗುತ್ತಾರೆ. ಒಂದಲ್ಲ ಒಂದು ದಿನ ಭವಾನಿ ಅವರು ಎಂಎಲ್‍ಎ ಆಗಿಯೇ ಆಗುತ್ತಾರೆ ಎಂದು ಎಚ್.ಡಿ.ರೇವಣ್ಣ(HD Revanna) ಅವರು ಮಾದ್ಯಮಗಳ ಮುಂದೆ ವಿಶ್ವಾಸ ವ್ಯಕ್ತಪಡಿಸಿದ್ದರು.

ಇದೀಗ ಭವಾನಿ ರೇವಣ್ಣ ಅವರು ಪತಿಯ ಹೇಳಿಕೆಯ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಎಚ್.ಡಿ.ರೇವಣ್ಣ ಅವರು ನೀಡಿರುವ ಹೇಳಿಕೆ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಹಾಸನ ವಿಧಾನಸಭಾ ಅಥವಾ ಬೇರೆ ಯಾವುದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಕುರಿತು ನಮ್ಮ ಮನೆಯಲ್ಲಿ ಚರ್ಚೆಯಾಗಿಲ್ಲ. ನನ್ನ ಅನುಪಸ್ಥಿತಿಯಲ್ಲಿ ರೇವಣ್ಣ ಅವರು ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಈ ಕುರಿತು ಅವರನ್ನೇ ಕೇಳಿ ಎಂದು ತಿಳಿಸಿದರು.

ಇನ್ನು ಚುನಾವಣೆಯ ಸಂಬಂಧ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದಳಾಗಿರುತ್ತೇನೆ. ಚುನಾವಣೆ ಮುಂದಿನ ವರ್ಷದಲ್ಲಿದೆ. ಹೀಗಾಗಿ ಟಿಕೆಟ್ ಸಂಬಂಧ ವಿಷಯಗಳನ್ನು ಈಗಲೇ ಚರ್ಚೆ ಮಾಡಲು ಸಾಧ್ಯವಿಲ್ಲ. ಇನ್ನು ನಾನು ಹೊಸದಾಗಿ ಜನರನ್ನು ಭೇಟಿ ಮಾಡುತ್ತಿಲ್ಲ. ಟಿಕೆಟ್ ಆಕಾಂಕ್ಷಿಯಾಗಿ ಕ್ಷೇತ್ರ ಪ್ರವಾಸ ಮಾಡುತ್ತಿಲ್ಲ. 2004ರಿಂದಲೂ ಎಚ್.ಡಿ.ರೇವಣ್ಣ ಅವರು ಮಂತ್ರಿಯಾಗಿದ್ದ ಕಾಲದಿಂದಲೂ ಜನರನ್ನು ಭೇಟಿ ಮಾಡುತ್ತಾ, ಅವರ ಕಷ್ಟಗಳಿಗೆ ನೆರವಾಗಿದ್ದೇನೆ. ಇದಕ್ಕೆ ಹೊಸ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ ಎಂದರು.

ವೃದ್ದಾಶ್ರಮದಲ್ಲಿ ದೇವೇಗೌಡರ ಹುಟ್ಟುಹಬ್ಬ : ಹಾಸನದ ಕಾಮಧೇನು ಚೈತನ್ಯ ವೃದ್ದಾಶ್ರಮದಲ್ಲಿ ಮಾಜಿ ಪ್ರಧಾನಿ(Former Primeminister) ದೇವೇಗೌಡರು(HD Devegowda) ತಮ್ಮ 90ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಭವಾನಿ ರೇವಣ್ಣ ಕೇಕ್ ಕತ್ತರಿಸಿ, ಹಣ್ಣುಗಳ ವಿತರಣೆ ಜೊತೆಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ದೇವೇಗೌಡರು ತಮ್ಮ ಪತ್ನಿ ಚೆನ್ನಮ್ಮ ಅವರ ಸಮೇತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Exit mobile version