ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ‘ಶಕುನಿ’ ಕರಣ್, ‘ದುರ್ಯೋಧನ’ ರಣಬೀರ್ ಕಾರಣ : ಕಂಗನಾ ರಣಾವತ್

Mumbai: ನಟಿ ಕಂಗನಾ ರಣಾವತ್ ಕೆಲವು ದಿನಗಳಿಂದ ಮೌನವಾಗಿದ್ದರು ಅವರು ಸಿನಿಮಾ ಮತ್ತು ಚಿತ್ರೀಕರಣದಲ್ಲಿ (kangana about sushant death) ಬ್ಯುಸಿಯಾಗಿದ್ರು.

ಆದ್ರೆ ಈಗ ಮತ್ತೆ ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟು ಬಾಲಿವುಡ್‌ (Bollywood) ಭಾರೀ ಸುದ್ದಿ ಮಾಡುತ್ತಿದ್ದಾರೆ. ತಮ್ಮ ರೋಷಾವೇಷದ ಮಾತುಗಳ ಮೂಲಕ ಕರಣ್ ಜೋಹರ್ ಮತ್ತು

ರಣಬೀರ್ ಕಪೂರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸುಶಾಂತ್ ಸಿಂಗ್ (Sushant Singh Rajapooth) ಸಾವಿನ ಬಗ್ಗೆ ಮಾತನಾಡಿದ ಕಂಗನಾ,

ಸುಶಾಂತ್ ಸಾವಿಗೆ ಕರಣ್ (Karan Johar) ಮತ್ತು ರಣಬೀರ್ ಕಪೂರ್ (Ranabeer Kapoor) ಕಾರಣ ಎಂದು ನೇರವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಕರಣ್ ಮತ್ತು

ರಣಬೀರ್ ಅವರನ್ನು ಶಕುನಿ ಮತ್ತು ದುರ್ಯೋಧನನಿಗೆ (kangana about sushant death) ಹೋಲಿಸಿದ್ದಾರೆ.

ರಾಮಾಯಣ (Ramayana) ಸಿನಿಮಾದ ಕಾಸ್ಟಿಂಗ್ ಬಗ್ಗೆ ಗರಂ ಆದ ಕಂಗನಾ ನಿತೇಶ್ ತಿವಾರಿ (Nitesh Tiwari) ನಿರ್ದೇಶನದ ‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದಾರೆ.

ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ, ಕಂಗನಾ ರಣಬೀರ್ ಕಪೂರ್ ಮೇಲಿನ ಕೋಪವನ್ನು ಹೊರಹಾಕಿದರು. ಮಾದಕ ವ್ಯಸನಿ, ಹೆಣ್ಣುಬಾಕ, ರಣಬೀರ್ ಕಪೂರ್‌ಗೆ ರಾಮನ ಪಾತ್ರನಾ,

ಇದೆಂಥ ಕಲಿಯುಗ ಎಂದು ಪ್ರಶ್ನೆ ಮಾಡಿದ್ರು ಕಂಗನಾ.

ಇದನ್ನು ಓದಿ: ರಾಜ್ಯಾದ್ಯಂತ ಕರೆಂಟ್‌ ಬಿಲ್‌ ಏರಿಕೆ ಶಾಕ್‌ ! ತಾಂತ್ರಿಕ ದೋಷದಿಂದ ದುಪ್ಪಟ್ಟು ಕಂರೆಟ್ ಬಿಲ್ : ಎಸ್ಕಾಂ ಸ್ಪಷ್ಟನೆ

ಅಷ್ಟಕ್ಕೇ ಸುಮ್ಮನಾಗದೆ, ಚಿತ್ರರಂಗದಲ್ಲಿ ಎಲ್ಲ ರೀತಿಯ ಬೆದರಿಕೆಗಳಿವೆ.ಅವರು ನನ್ನ ವಿರುದ್ಧ ಎಲ್ಲಾ ರೀತಿಯ ಅಸಹ್ಯ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ

“ನನ್ನ ಜೀವನ ಮತ್ತು ವೃತ್ತಿಜೀವನದಲ್ಲಿ ಅವರ ಹಸ್ತಕ್ಷೇಪವು ಕಿರುಕುಳವನ್ನು ಮೀರಿದೆ” ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

ಆ ದುರ್ಯೋಧನ (Duryodhana) (ಬಿಳಿ ಇಲಿ) ಮತ್ತು ಶಕುನಿ (Shakuni) (ಪಾಪಾ ಜೋ) ಒಳ್ಳೆಯ ಜೋಡಿ. ಹೆಚ್ಚು ಗಾಸಿಪ್ ಮಾಡುವುದರಲ್ಲಿ ಅಸೂಯೆ ಪಡುವುದರಲ್ಲಿ ಇಬ್ಬರೂ ನಂಬರ್ ಒನ್

ಎಂಬುದು ಇಡೀ ಚಿತ್ರರಂಗಕ್ಕೆ ಗೊತ್ತಿರುವ ವಿಷಯ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಾಗ ಸಾಕ್ಷಿಗಳನ್ನು ಬಚ್ಚಿಟ್ಟು ಎಲ್ಲಾ ನಕಲಿ ಕುರುಡು ವಸ್ತುಗಳ ಹಿಂದೆ ಇವರಿಬ್ಬರೇ ಪ್ರಮುಖ ಶಂಕಿತರು.

ಇದನ್ನು ಓದಿ: ಭಾರತವೊಂದರಲ್ಲೇ 6,200ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಆದಿಪುರುಷ್ ಬಿಡುಗಡೆ: ಕರ್ನಾಟಕದಲ್ಲಿ ಯಾರು ವಿತರಣೆ?

ನನ್ನ ಮೇಲೆ ಈ ರೀತಿಯ ಬೇಹುಗಾರಿಕೆ, ನನ್ನ ಮತ್ತು ನನ್ನ ಚಲನಚಿತ್ರಗಳ ವಿರುದ್ಧ ಅಸಹ್ಯವಾದ PR ಮಾಡುವುದನ್ನು ಗಮನಕ್ಕೆ ತಂದ ಬಳಿಕ, ಅಂತಹ ಚಟುವಟಿಕೆಗಳು ಈಗ ಗಣನೀಯವಾಗಿ ಕಡಿಮೆಯಾಗಿದೆ.

ನಾನು ಇಂದು ದುರ್ಬಲ ಸ್ಥಳದಲ್ಲಿರಬಹುದು. ಆದರೆ ಡಾರ್ಕ್ ವೆಬ್, ಹ್ಯಾಕಿಂಗ್, ಬೇಹುಗಾರಿಕೆ ಮತ್ತು ಅಕ್ರಮ ಮಾನನಷ್ಟದಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ನಾನು ಬಹಿರಂಗಪಡಿಸುತ್ತೇನೆ.

ಇತ್ತೀಚೆಗೆ, ಅವನ ವೃತ್ತಿಜೀವನವು ಅವನ ಜೀವನದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಮಾಡಿದೆ. ಇಲ್ಲದಿದ್ದರೆ ಈ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವುದು ಅಸಾಧ್ಯ” ಎಂದು ಕಂಗನಾ ಹೇಳಿದರು.

ರಶ್ಮಿತಾ ಅನೀಶ್

Exit mobile version