ಕೋಲಾರ ಅಪ್ರಾಪ್ತ ಬಾಲಕನ ಹತ್ಯೆ ಕೇಸ್: ಮೂವರು ಪೊಲೀಸ್ ಸಿಬ್ಬಂದಿ ಅಮಾನತು

Kolar : ಕೋಲಾರ ಜಿಲ್ಲೆಯ ಅಪ್ರಾಪ್ತ ಬಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ (Kolar minor boy murder case) ಕೋಲಾರ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿ ಅಮಾನತು

ಮಾಡಲಾಗಿದ್ದು, ಈ ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ ಮೂರು ಕೊಲೆಗಳಾಗಿದ್ದು, ಅಕ್ಟೋಬರ್​​ 23 ಕಾಂಗ್ರೆಸ್​ (Congress) ಮುಖಂಡ, ಮಾಜಿ ಸಭಾಪತಿ ರಮೇಶ್​ ಕುಮಾರ್​ ಅವರ ಆಪ್ತ

ಎಂ. ಶ್ರೀನಿವಾಸ್​, ಅಕ್ಟೋಬರ್​ 21 ಗ್ರಾಮ ಪಂಚಾಯತಿ ಸದಸ್ಯ ಅನಿಲ್​ ಕುಮಾರ್​ ಮತ್ತು ನವೆಂಬರ್​ 03 ರಂದು ಬಾಲಕ ಕಾರ್ತಿಕ್​ ಸಿಂಗ್​​ (Karthik Singh) ಎಂಬುವರನ್ನು ಕೊಲೆ ಮಾಡಲಾಗಿತ್ತು.

ಕರ್ತವ್ಯ ಲೋಪ ಹಾಗೂ ಮಾಹಿತಿ ಕಲೆಹಾಕುವಲ್ಲಿ ವಿಫಲ ಹಿನ್ನೆಲೆಯಲ್ಲಿ ಎಎಸ್​ಐ ಮುನಿರಾಜು (ASI Muniraju) , ಕಾನ್ಸ್​ಟೇಬಲ್​​ಗಳಾದ (Constable) ವಿಷ್ಣು, ಶಿವ ಅವರನ್ನು ಅಮಾನತು

ಮಾಡಿ ಕೋಲಾರ ಎಸ್​ಪಿ ನಾರಾಯಣ್ ಆದೇಶ ಹೊರಡಿಸಿದ್ದಾರೆ.

ಬಾಲಕನ ಕೊಲೆ ಕೇಸ್:
ಕೋಲಾರದ ವೀರಾಂಜನೇಯ ನಗರದ ನಿವಾಸಿ ಅರುಣ್​ ಸಿಂಗ್​ ಅವರ ಪುತ್ರ ಕಾರ್ತಿಕ್​ ಸಿಂಗ್ (17) ಯನ್ನು ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ನಗರದ ಟೇಕಲ್​ (Tackle) ರಸ್ತೆಯ ಬಾಪೂಜಿ

ಶಾಲಾ ಆವರಣದಲ್ಲಿ ದುಷ್ಕರ್ಮಿಗಳು ಬರ್ಬರವಾಗಿ (Kolar minor boy murder case) ಕೊಚ್ಚಿ ಕೊಲೆ ಮಾಡಿದ್ದರು.

ಹತ್ಯೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ಅಲಿಯಾಸ್ ಶೈನ್ (Shine) ಸೇರಿದಂತೆ 8 ಜನರನ್ನು ಪೊಲೀಸರು ಬಂಧಿಸಿದ್ದರು. ಡಾನ್ ಆಗಬೇಕೆಂದು ಆರೋಪಿ ಹತ್ಯೆ

ಮಾಡಿದ್ದನು ಎಂದು ಪೊಲೀಸರು ಹೇಳಿದ್ದರು. ಹತ್ಯೆಗೂ ಮುನ್ನ ಬಾಲಕನಿಗೆ ಚಿತ್ರಹಿಂಸೆ ಕೊಟ್ಟಿದ್ದಾರೆ. ಬಟ್ಟೆ ಬಿಚ್ಚಿಸಿ ಮೈಕೈಗೆ ಗಾಜು, ಚಾಕು, ಬ್ಲೇಡ್​ನಿಂದ ಕುಯ್ದಿದ್ದಾರೆ.

ಇನ್ನು ಕಾರ್ತಿಕ್​ನ ಮುಖದ ಮೇಲೆ S ಎಂದು ಬರೆದು ಆರೋಪಿಗಳು ವಿಕೃತಿ ಮೆರೆದಿದ್ದು, S ಎಂದರೆ ಶೈನ್ ಆಲಿಯಾಸ್ ದಿಲೀಪ್ (Dileep) ಎಂದರ್ಥ. ಶೈನ್ ಇಡೀ ಪ್ರಕರಣದ ಮಾಸ್ಟರ್ ಮೈಂಡ್

ಆಗಿದ್ದು, ಪ್ರಕರಣದ ಆರೋಪಿಗಳೆಲ್ಲರೂ ಅಪ್ರಾಪ್ತರಾಗಿದ್ದಾರೆ. ಪ್ರಮುಖ ಆರೋಪಿ ಡಾನ್ ಆಗಬೇಕು ಎಂದು ಈ ರೀತಿ ಕೃತ್ಯಗಳನ್ನು ಎಸಗುತ್ತಿದ್ದನು. ಆರೋಪಿಗಳು ರೌಡಿಗಳಂತೆ ಚಾಕು ಹಿಡಿದು

ಗ್ಯಾಂಗ್ ಕಟ್ಟಿಕೊಂಡು ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್​ನಲ್ಲಿ (Instagram) ಪೋಸ್ಟ್​ ಹಾಕಿದ್ದಾರೆ.

ಅಪ್ರಾಪ್ತ ಬಾಲಕನ ಕೊಲೆ ಖಂಡಿಸಿ ಅಭಿಯಾನ
ಜೆಡಿಎಸ್ (JDS) ಶಾಸಕ ಸಮೃದ್ಧಿ ಮಂಜುನಾಥ್ (Manjunath) ಅವರು ಅಪ್ರಾಪ್ತ ಬಾಲಕನ ಕೊಲೆ ಖಂಡಿಸಿ ​ ಅಭಿಯಾನ ಮಾಡುತ್ತಿದ್ದಾರೆ. ಅಪ್ರಾಪ್ತ ಬಾಲಕ ಕಾರ್ತಿಕ್​​​ ಸಾವಿಗೆ ನ್ಯಾಯಕೊಡಿಸಿ

ಮತ್ತು ಕೋಲಾರ ರಕ್ಷಿಸಿ, ಯುವಕರನ್ನು ರಕ್ಷಿಸುವಂತೆ ಆಗ್ರಹಿಸಿ ಅಭಿಯಾನ ಮಾಡುತ್ತಿದ್ದಾರೆ.

ಇದನ್ನು ಓದಿ : ಸತೀಶ್ ಜಾರಕಿಹೊಳಿ ಜತೆ ಸೀಕ್ರೆಟ್ ಮೀಟಿಂಗ್: ​ಮಾತುಕತೆ ಬಳಿಕ ದೆಹಲಿಗೆ ಡಿಕೆಶಿ

Exit mobile version