ಕುಮಾರಸ್ವಾಮಿಯವರನ್ನು ಟೀಕಿಸುವುದು ಸರಿಯಲ್ಲ; ಸಂಸದ

ಮೈಸೂರು, ಡಿ. 12: ಇತ್ತೀಚಿಗೆ ರಾಜಕೀಯಬೆಳೆವಣಿಗೆಗಳುಬೇರೆ ರೀತಿಯ ರೂಪವನ್ನು ಪಡೆದುಕೊಳ್ಳುತ್ತಿದೆ. ಭೂ ಸುಧಾರಣೆ ಕಾಯ್ದೆಗೆ ಯಾವಾಗ ಬಿಜೆಪಿ ಪಕ್ಷ ಹಾಗೂ ಜೆಡಿಎಸ್ ಪಕ್ಷ ಸೇರಿ ಸದನದಲ್ಲಿ ಕಾಯ್ದೆಗೆ ಒಮ್ಮತ ಸೂಚಿಸಿ ಅಂಗೀಕಾರವಾಯಿತೋ, ಆಗಿನಿಂದ ವಿರೋಧ ಪಕ್ಷ ಕಾಂಗ್ರೆಸ್‌ ಟೀಕಿಸಿತ್ತು. ಎಚ್‌ಡಿಕೆಯವರ ವಿರುದ್ಧ ಕಾಂಗ್ರೆಸ್ ಬಲವಾಗಿ ವಿರೋಧಿಸುತ್ತಿದೆ. ಈ ವಿಚಾರವಾಗಿ ಬಿಜೆಪಿ ಪಕ್ಷದ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿಯ ಒಳ್ಳೆಯ ಕೆಲಸವನ್ನು ಜೆಡಿಎಸ್ ನಾಯಕರಾದ ಎಚ್‌. ಡಿ. ಕುಮಾರಸ್ವಾಮಿ ಬೆಂಬಲಿಸಿದ್ದಾರೆ.  ಆದರೆ ಅದನ್ನೇ ಅಜೆಂಡವಾಗಿಸಿಕೊಂಡು ರಾಜಕೀಯ ಕಾರಣಕ್ಕಾಗಿ ಅವರನ್ನು ಟೀಕಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಎಚ್‌ಡಿಕೆ ತಮ್ಮ ಆಡಳಿತ ಅವಧಿಯಲ್ಲಿ ರೈತರ ಸಾಲ ಮನ್ನಾದಂತಹ ಕಾರ್ಯಕ್ರಮವನ್ನು ಮಾಡಿದ್ದಾರೆ. ಹೀಗಾಗಿ ಅವರನ್ನು ಟೀಕಿಸುವುದು ಸರಿಯಲ್ಲ ಎಂದು ಪ್ರತಾಪ ಸಿಂಹ ಹೇಳಿದರು.

Exit mobile version