Chamarajnagar: ಲೋಕಸಭಾ ಚುನಾವಣೆಯ (Lok Sabha Election – Kar) ಕಾವು ಜೋರಾಗಿದ್ದು ತನ್ನ ಭದ್ರಕೋಟೆಯಂತಿದ್ದ ಚಾಮರಾಜನಗರ ಲೋಕಸಭೆ ಕ್ಷೇತ್ರವನ್ನು ಮತ್ತೆ ತನ್ನ ಹಿಡಿತಕ್ಕೆ
ತೆಗೆದುಕೊಳ್ಳಲು ಕಾಂಗ್ರೆಸ್ (Congress) ತನ್ನದೇ ಆದ ರಾಜಕೀಯ ತಂತ್ರಗಳ ಹಣೆಯುತ್ತಿದ್ದರೆ ಬಿಜೆಪಿ (BJP) ಸತತ ಎರಡನೇ ಬಾರಿಗೆ ಕಮಲ ಅರಳಿಸಲು ಸದ್ದಿಲ್ಲದೆ ಪ್ರತಿತಂತ್ರ ಶುರುಮಾಡಿದೆ.
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಈ ಲೋಕಸಭೆ ಕ್ಷೇತ್ರವು ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ (Mysore) ಗ್ರಾಮಾಂತರದ ತಲಾ ನಾಲ್ಕು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ.
ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿರುವುದು ಕಳೆದ (Lok Sabha Election – Kar) ಒಂದು ಬಾರಿ ಮಾತ್ರ.
2019ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಭಾರಿ ಜಿದ್ದಾಜಿದ್ದಿಯೇ ನಡೆದಿತ್ತು. ಕಾಂಗ್ರೆಸ್ನ ಆರ್. ಧ್ರುವನಾರಾಯಣ (R. Druvanarayan) ಅವರ ಎದುರು ಕ್ಷೇತ್ರವನ್ನು
ಐದು ಬಾರಿ ಪ್ರತಿನಿಧಿಸಿದ್ದ ವಿ.ಶ್ರೀನಿವಾಸಪ್ರಸಾದ್ (V. Srinivas Prasad) ಕೇವಲ 1800 ಮತಗಳ ಅಂತರದಲ್ಲಿ ಜಯಗಳಿಸಿ, ಬಿಜೆಪಿಗೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಜಯ ತಂದುಕೊಟ್ಟಿದ್ದರು.
ಇದೀಗ ಚಾಮರಾಜನಗರ ಲೋಕಸಭೆ ಕ್ಷೇತ್ರವು ಸಿಎಂ ಸ್ವ ಕ್ಷೇತ್ರ ವರುಣಾವನ್ನು ಒಳಗೊಂಡಿರುವುದರಿಂದ ಸಿದ್ದರಾಮಯ್ಯ (Siddaramaiah) ಅವರಿಗೆ ಇದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ತಮ್ಮ
ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಅವರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ತಮ್ಮ ರಾಜಕೀಯ ಕಡುವೈರಿ ಎಂದೇ ಪರಿಗಣಿತವಾಗಿದ್ದ ವಿ. ಶ್ರೀನಿವಾಸಪ್ರಸಾದ್ ಅವರನ್ನು ಸಹ ಭೇಟಿ ಮಾಡಿ ಗೆಲ್ಲಿಸಲು ಮನವಿ
ಮಾಡಿದ್ದಾರೆ.ಇನ್ನು ಈ ಕ್ಷೇತ್ರದಲ್ಲಿ ವೀರಶೈವ, ಲಿಂಗಾಯತ ಹಾಗೂ ದಲಿತರ ಮತಗಳು ಕ್ಷೇತ್ರದಲ್ಲಿ ಸಮಬಲದಲ್ಲಿವೆ. ಬಿಜೆಪಿ ವೀರಶೈವರ (Virshaiva) ಮತದೊಂದಿಗೆ ನಾಯಕರು ಹಾಗೂ ಎಲ್ಲ ವರ್ಗದ ಯುವ
ಮತದಾರರ ಮತಗಳನ್ನು ನೆಚ್ಚಿಕೊಂಡಿದೆ. ಕಾಂಗ್ರೆಸ್ಗೆ ದಲಿತ, ಉಪ್ಪಾರ, ಕುರುಬ ಹಾಗೂ ಅಲ್ಪಸಂಖ್ಯಾತರ ಮತಗಳೊಂದಿಗೆ ಲಿಂಗಾಯತ ಸಾಂಪ್ರದಾಯಕ ಮತಗಳ ಮೇಲೆ ನಂಬಿಕೆ ಇರಿಸಿ ಕೊಂಡಿದೆ.
ಈ ನಡುವೆ ಬಿಎಸ್ಪಿ ಹೆಚ್ಚು ದಲಿತ, ಹಿಂದುಳಿದ ವರ್ಗದ ಮತಗಳನ್ನು ಪಡೆದಷ್ಟೂ ಕಾಂಗ್ರೆಸ್ಗೆ ನಷ್ಟ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೂ ಕೂಡಾ ನುಡಿದಂತೆಯೇ ನಡೆದಿದ್ದೇವೆ. ಗ್ಯಾರಂಟಿ ಯೋಜನೆಗಳು
(Guarantee scheme) ಬಡ ಜನತೆಯ ಕೈ ಹಿಡಿದಿವೆ. ಕೇಂದ್ರ ಸರಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಕೇಂದ್ರದಲ್ಲೂ ಅಧಿಕಾರಕ್ಕೆ ಬಂದರೆ ರಾಜ್ಯದ ಗ್ಯಾರಂಟಿಯೊಂದಿಗೆ ಕೇಂದ್ರದ ಗ್ಯಾರಂಟಿ ಜಾರಿ
ಎಂಬುದಾಗಿ ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ಹಾಗಾಗಿ ಸಿಎಂ ಸಿದ್ಧರಾಮಯ್ಯ ಈ ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಲಿದ್ದೇವೆ ಎಂದಿದ್ದಾರೆ.
ಇದನ್ನು ಓದಿ: ಚಾಪೆಯ ಮೇಲೆ ಮಲಗುತ್ತಿದ್ದ ಆರ್ ಎಸ್ ಎಸ್ ಕಾರ್ಯಕರ್ತರು ಆರ್ ಸಿ ಸಿ ಮನೆಯಲ್ಲಿ ಬದುಕುತ್ತಿದ್ದಾರೆ : ಮಾಲೀಕಯ್ಯ ಗುತ್ತೇದಾರ್