ಬಾಗಲಕೋಟೆ, ನ. 23: ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಬಳಿ ಮನಕಲುಕುವ ಘಟನೆಯೊಂದು ನಡೆದಿದೆ. ಯೋಧನ ಪತ್ನಿಯೊಬ್ಬರು ಬೈಕ್ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಪುಷ್ಪಲತಾ (35) ಮೃತ ದುರ್ದೈವಿ.
ಇಂದು ಬೆಳಗ್ಗೆ ಕರ್ತವ್ಯಕ್ಕಾಗಿ ಜಮ್ಮು ಕಾಶ್ಮೀರಕ್ಕೆ ಹೊರಡಬೇಕಾಗಿದ್ದರಿಂದ ಯೋಧ ಶೇಖರಯ್ಯ ವಿಭೂತಿ ನಿನ್ನೆ ಸಂಜೆ ಪತ್ನಿಯನ್ನು ತವರು ಮನೆಗೆ ಬಿಡಲು ಹಿರೆಮಳಗಾವಿ ಗ್ರಾಮಕ್ಕೆ ಹೋಗುತ್ತಿದ್ದರು. ದಂಪತಿ ಬೈಕ್ನಲ್ಲಿ ಹೋಗುವ ವೇಳೆ ಮಗನಿಂದ ವಿಡಿಯೋ ಕಾಲ್ ಬಂದಿತ್ತು. ಈ ವೇಳೆ ಶೇಖರಯ್ಯ ವಿಡಿಯೋ ಕಾಲ್ನಲ್ಲಿ ಮಾತಾಡುತ್ತಾ ಹಂಪ್ಸ್ ಗಮನಿಸದೇ ಚಲಿಸಿದ್ದರಿಂದ ಬೈಕ್ ಮೇಲಕ್ಕೆ ಹಾರಿದೆ. ಆಗ ಶೇಖರಯ್ಯ ಅವರ ಪತ್ನಿ ಪುಷ್ಪಲತಾ ಕೆಳಗೆ ಬಿದ್ದು ಪೆಟ್ಟಾಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.