ಅಷ್ಟಮಿಯ ಮಹಾಗೌರಿಯನ್ನು ಪೂಜಿಸಿದ್ರೆ ಏನು ಲಾಭ?

ನವರಾತ್ರಿಯೆಂದರೆ ಹಿಂದೂಗಳಿಗೆ ಅದ್ಧೂರಿ ಹಬ್ಬಗಳಲ್ಲಿ ಒಂದು. ಆಶ್ವಯುಜ ಮಾಸದ ಶುಕ್ಲ ಪಕ್ಷದ ಅಷ್ಟಮಿಯ ಈ ದಿನದಂದು ಮಹಾಗೌರಿಯನ್ನು ಆರಾಧಿಸಲಾಗುತ್ತದೆ. ಮದುವೆಯ ವಯಸ್ಸಿನ ಹುಡುಗಿಯರು ಈ ದಿನ ವಿಶೇಷವಾಗಿ ಮಹಾಗೌರಿಯನ್ನು ಪೂಜಿಸುತ್ತಾರೆ. ಈ ದಿನ ಗೌರಿಯನ್ನು ಪೂಜಿಸಿದರೆ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಮಕ್ಕಳಗಾದವರಿಗೆ ಸಂತಾನಲಕ್ಷ್ಮಿ ಒಲಿಯುತ್ತಾಳೆ ಎಂಬುದು ನಂಬಿಕೆ.

ಮಹಾಗೌರಿಯ ಸ್ವರೂಪ:

ಗೌರಿ ಎಂದರೆ ಆಕೆಯು ಗಿರಿ ಅಥವಾ ಪರ್ವತದ ಮಗಳೆಂದು ಹೇಳಲಾಗುತ್ತದೆ. ಅಂದರೆ ಅವಳನ್ನು ಗಿರಿ ಕನ್ಯೆಯೆಂದು ಹೇಳಲಾಗುತ್ತದೆ. ಗೂಳಿ ಮೇಲೆ ಪ್ರಯಾಣಿಸುವ ಗೌರಿ ತನ್ನ ಕೈಯಲ್ಲಿ ತ್ರಿಶೂಲದೊಂದಿಗೆ ಢಮರುಗವನ್ನು ಹಿಡಿಕೊಂಡಿರುವಳು. ಆಕೆಯು ಬಿಳಿ ಬಟ್ಟೆ ಧರಿಸಿರುತ್ತಾಳೆ ಮತ್ತು ಆಕೆಯ ಮುಖವು ತಂಪಾಗಿರುವ ಚಂದ್ರನಂತೆ ಹೊಳೆಯುತ್ತಲಿರುವುದು ಮತ್ತು ಇದು ಭಕ್ತರಿಗೆ ವರವನ್ನು ನೀಡುವಂತಿದೆ.

ಮಹಾಗೌರಿಯ ಕಥೆ:

ತಾಯಿ ಮಹಾಗೌರಿಯ ಕಥೆ ಒಂದು ಸಲ ತಾಯಿ ದುರ್ಗೆಯು ಭೂಮಿ ಮೇಲೆ ಜನ್ಮವನ್ನು ಪಡೆಯುವಳು ಮತ್ತು ಮರಳಿ ದೇವಲೋಕಕ್ಕೆ ಹೋಗಲು ಅವರು ಶಿವನನ್ನು ಮದುವೆಯಾಗಲು ಬಯಸುವರು. ನಾರದ ಮುನಿಗಳ ಸಲಹೆಯಂತೆ ದೇವಿಯು ಶಿವನನ್ನು ಒಲಿಸಿಕೊಳ್ಳಲು ಕಠಿಣ ತಪಸ್ಸನ್ನು ಕೈಗೊಳ್ಳುವರು. ಆಕೆ ತಪಸ್ಸಿನಲ್ಲಿ ಸಂಪೂರ್ಣವಾಗಿ ಮಗ್ನರಾಗಿರುವ ವೇಳೆ ದೇಹದಲ್ಲಿ ಧೂಳು ಹಾಗೂ ಕೊಳೆಯು ತುಂಬಿರುವುದು. ಆಕೆ ಅನ್ನ, ನೀರನ್ನು ಬಿಟ್ಟು ಸಂಪೂರ್ಣವಾಗಿ ತಪಸ್ಸಿನಲ್ಲಿ ತೊಡಗಿಕೊಳ್ಳುವರು. ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗಿರುವುದು ಮತ್ತು ಆಕೆಯು ಸಾವಿರಾರು ವರ್ಷಗಳ ಹೀಗೆ ಇರುವರು. ಶಿವ ದೇವರು ಆಕೆಯ ತಪಸ್ಸಿನಿಂದ ಪ್ರಭಾವಿತರಾಗಿ, ಆಕೆಯ ದೇವರನ್ನು ಹೊಳೆಯುವಂತೆ ಮಾಡಲು ಗಂಗಾ ದೇವಿಯನ್ನು ಬಿಡುವಳು. ಇದರಿಂದಾಗಿ ಮಹಾಗೌರಿಯ ಅವತಾರವು ತುಂಬಾ ಕಾಂತಿಯುತ, ಬಿಳಿ ಹಾಗೂ ಧಾನ್ಯಸಕ್ತದಲ್ಲಿರುವುದು.

ಮಹಾಗೌರಿ ತಾಯಿಯ ಪೂಜೆಯ ಮಹತ್ವ:

ಮಹಾಗೌರಿ ದೇವಿಯು ರಾಹುವಿನ ಅಧಿಪತಿ. ಜನ್ಮ ಕುಂಡಲಿಯಲ್ಲಿ ರಾಹುವಿನಿಂದ ಆಗಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ, ತನ್ನ ಭಕ್ತರಿಗೆ ಸಮೃದ್ಧಿ ಹಾಗೂ ಆಧ್ಯಾತ್ಮಿಕ ಧಾನ್ಯ ನೀಡುವರು. ಮನಸ್ಸಿನಲ್ಲಿರುವಂತಹ ಗೊಂದಲ ನಿವಾರಣೆ ಮಾಡಿ, ಯಶಸ್ವಿ ಜೀವನ ಸಾಗಿಸಲು ನೆರವಾಗುವರು.

ನವರಾತ್ರಿ ಎಂಟನೇ ದಿನ ಮಹಾಗೌರಿ ಪೂಜೆ ಮಹಾಗೌರಿ ದೇವಿಯ ಪೂಜೆ ಮಾಡಲು ರಾತ್ರಿ ಅರಳುವಂತಹ ಮಲ್ಲಿಗೆ ಹೂವನ್ನು ಬಳಸಬೇಕು. ಭಕ್ತಿ ಹಾಗೂ ಶ್ರದ್ಧೆಯಿಂದ ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ಪೂಜೆ ಮಾಡಬೇಕು. ಗಣೇಶ ಪ್ರಾರ್ಥನೆ ಮೂಲಕ ಪೂಜೆ ಆರಂಭಿಸಿ, ಷೋಡಶೋಪಚಾರ ಮಾಡಿದ ಬಳಿಕ ಆರತಿಯೊಂದಿಗೆ ಪೂಜೆ ಕೊನೆಗೊಳಿಸಬೇಕು.

ಎಂಟನೇ ದಿನದ ಪೂಜೆಯ ವಿಶೇಷತೆ:

ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಮಹಾಗೌರಿ ಪೂಜೆಯನ್ನು ಮಾಡುವುದರಿಂದ ಭಕ್ತರಿಗೆ ಶಕ್ತಿ ಮತ್ತು ಯೋಗ್ಯತೆ ಸಿಗುವುದು. ಎಲ್ಲಾ ಸಂಕಷ್ಟಗಳನ್ನು ಆಕೆ ನಿವಾರಣೆ ಮಾಡುವಳು. ಭಕ್ತರ ಚಿಂತೆ ದೂರ ಮಾಡಿ, ಸದ್ಗುಣ ನೀಡುವರು. ಸುಖ ಜೀವನ ಸಾಗಿಸಲು ಭಕ್ತರಿಗೆ ಜೀವನದಲ್ಲಿ ಆಕೆ ಕರುಣಿಸವಳು ಎಂಬುದು ಭಕ್ತರ ನಂಬಿಕೆ.  ಮಹಾಗೌರಿ ತಾಯಿಯನ್ನು ಪರಿಪೂರ್ಣತೆಯ ಅಧಿಕಾರಿಣಿ. ಭಕ್ತರ ಎಲ್ಲಾ ಆಕಾಂಕ್ಷೆಗಳನ್ನು ಈಡೇರಿಸುವ ಆಕೆ ಎಲ್ಲಾ ರೀತಿಯ ಸುಖ ಹಾಗೂ ಸಂತೋಷವನ್ನು ಕರುಣಿಸುವಳು. ನವರಾತ್ರಿಯ ಎಂಟನೇ ದಿನದ ಪೂಜೆಯು ಸರಸ್ವತಿ ಪೂಜೆಯ ಎರಡನೇ ದಿನವಾಗಿದೆ. ಇದನ್ನು ಮಹಾ ಅಷ್ಟಮಿ ಎಂದು ಕರೆಯಲಾಗುತ್ತದೆ. ಆ ತಾಯಿ ಮಹಾಗೌರಿಯು ನಮ್ಮೆಲ್ಲರ ಕಷ್ಟಗಳನ್ನು ದೂರ ಮಾಡಲಿ, ಕೊರೊನಾದಿಂದ ನಮ್ಮನ್ನು ಮುಕ್ತಗೊಳಿಸಲಿ ಹಾಗೂ ಕೊರೊನಾ ತಂದಿರುವ ನೋವು, ಸಂಕಷ್ಟ ದೂರಗೊಳಿಸಲಿ ಎಂಬುದು ಎಲ್ಲರ ಆಶಯ.

Exit mobile version