ಮಲೆ ಮಹದೇಶ್ವರಸ್ವಾಮಿಗೆ ಅಮಾವಾಸ್ಯೆ ವಿಶೇಷ ಪೂಜೆ

ಚಾಮರಾಜನಗರ, ಡಿ. 12: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ಪ್ರತಿ ಅಮಾವಾಸ್ಯೆಯಂತೆ ಈ ಬಾರಿಯ ಅಮಾವಾಸ್ಯೆಯಲ್ಲಿ ಕೂಡ ಮಹದೇಶ್ವರನಿಗೆ ಸಾಂಪ್ರದಾಯಿಕವಾಗಿ ಎಣ್ಣೆ ಮಜ್ಜನ ಅಭಿಷೇಕ ನಡೆಯುತ್ತದೆ. ಆದರೆ ಕೊರೊನಾ ಕಾರಣದಿಂದ ಭಕ್ತರಿಲ್ಲದೇ ಸರಳವಾಗಿ ನಡೆಯುತ್ತಿದೆ.

ಕೊರೊನಾ ಭೀತಿಯಿಂದ ಭಕ್ತರಿಗೆ ಇದನ್ನು ನೋಡುವ ಸೌಭಾಗ್ಯವಿಲ್ಲ. ಈ ಕಾರಣದಿಂದ ಶನಿವಾರದಿಂದ ಮೂರು ದಿನಗಳ ಕಾಲ ಮಹದೇಶ್ವರ ಬೆಟ್ಟಕ್ಕೆ ಭಕ್ತರಿಗೆ ಅವಕಾಶವಿರುವುದಿಲ್ಲ.

ಮಹದೇಶ್ವರನ ಬೆಟ್ಟಕ್ಕೆ ಕರ್ತವ್ಯಕ್ಕೆ ಹೊರ ಊರಿನಿಂದ ಬರುವರು ಹೊರತುಪಡಿಸಿ ಯಾರಿಗೂ ಪ್ರವೇಶವಿಲ್ಲ. ಸಾರಿಗೆ ನೌಕರರ ಮುಷ್ಕರ ಇರುವ ಕಾರಣ ಬೆಟ್ಟಕ್ಕೆ ಬರುವರಿಗೆ ಕಡಿವಾಣ ಬಿದ್ದಿದೆ.

Exit mobile version