ಕೋಲ್ಕತ್ತಾ, ಮೇ. 02: ಪಶ್ಚಿಮ ಬಂಗಾಳಕ್ಕೆ ಕಳೆದ ಒಂದು ತಿಂಗಳ ಅವಧಿಯಲ್ಲಿ 8 ಹಂತದಲ್ಲಿ ಚುನಾವಣೆ ನಡೆಸಲಾಗಿತ್ತು. ಇಂದು ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಟಿಎಂ ಜಯಭೇರಿ ಸಾಧಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 217 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವು ಮೂಲಕ ತನ್ನ ಅಧಿಕಾರವನ್ನು ಉಳಿಸಿಕೊಂಡಿದೆ. ಮತ್ತೊಂದೆಡೆ ಬಿಜೆಪಿ ಮೂರಂಕಿ ಗಡಿ ದಾಟದೆ ತೀವ್ರ ಮುಖಭಂಗ ಅನುಭವಿಸಿದೆ. ಈ ಫಲಿತಾಂಶ ಬಿಜೆಪಿ ಪಾಳಯದಲ್ಲಿ ದೊಡ್ಡ ನಿರಾಸೆಯೊಂದನ್ನು ಮೂಡಿಸಿರುವುದು ಸುಳ್ಳಲ್ಲ. ಆದರೆ, ಈ ನಡುವೆ ನಂದಿಗ್ರಾಮ ಕ್ಷೇತ್ರದಲ್ಲಿ ಆರಂಭದಲ್ಲಿ ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ, ಇದೀಗ ದಿಢೀರ್ ಬೆಳವಣಿಗೆಯಲ್ಲಿ ಮಮತಾ ಬ್ಯಾನರ್ಜಿ ಸೋಲನುಭವಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿರುವುದು ಟಿಎಂಸಿ ಪಾಳಯದಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಈ ಸೋಲನ್ನು ಒಪ್ಪದ ಮಮತಾ ಬ್ಯಾನರ್ಜಿ ಕೋರ್ಟ್ ಮೊರೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕೋರ್ಟ್ ಮೊರೆ ಹೋಗಲಿದ್ದಾರಾ ಮಮತಾ ಬ್ಯಾನರ್ಜಿಿ?
-
By Sharadhi
- Categories: ಪ್ರಮುಖ ಸುದ್ದಿ, ರಾಜಕೀಯ
Related Content
ಭಾರೀ ಮಳೆ ಮತ್ತು ಪ್ರವಾಹದಿಂದ ತತ್ತರಿಸಿದ ಬ್ರೆಜಿಲ್:75ಕ್ಕೆ ಏರಿಕೆಯಾದ ಮೃತರ ಸಂಖ್ಯೆ.
By
Shameena Mulla
May 6, 2024
ಭ್ರಷ್ಟಚಾರಗಳಿಂದ ಪಕ್ಷ ಶ್ರೀಮಂತವಾಗಿದೆ ಆದರೆ ಬಡವರ ಪಾಡು ಹೇಳತೀರದಾಗಿದೆ : ಪ್ರಿಯಾಂಕಾ ಗಾಂಧಿ ಆರೋಪ
By
Shameena Mulla
May 6, 2024
ಬೀದಿ ನಾಯಿಗಳಿಗೆ ಊಟ ಹಾಕಲು ಹೊಸ ನಿಯಮ ರೂಪಿಸಿದ ಬಿಬಿಎಂಪಿ
By
Shameena Mulla
May 6, 2024
ISRO ದಲ್ಲಿ ಪದವಿ, ಡಿಪ್ಲೊಮ ಪಾಸಾದವರಿಗೆ ಉದ್ಯೋಗಾವಕಾಶ : ಇಂದೇ ಅರ್ಜಿ ಸಲ್ಲಿಸಿ
By
Shameena Mulla
May 6, 2024