ಮತ್ತೆ ನಾಲಿಗೆ ಹರಿಬಿಟ್ಟ ಸಚಿವ ಮಾಧುಸ್ವಾಮಿ

ತುಮಕೂರು, ಜ. 07: “ರಾಸ್ಕಲ್‌ ಜಾಡಿಸಿ ಒದ್ದರೆ ಎಲ್ಲ್‌ ಹೋಗ್‌ ಬೀಳ್ತಿಯಾ ಗೊತ್ತಾ? ನೀನೇನ್‌ ಕತ್ತೆ ಕಾಯ್ತಿದ್ದಿಯಾ? ನಿಮ್ಮಿಂದ ಈ ಜಿಲ್ಲೆಗೆ ಗ್ರಹಣ ಹಿಡಿದಿದೆ… ಅಭಿವೃದ್ಧಿ ಹಾಳಾಗಿ ಹೋಯಿತು… ಎಂಜಿನಿಯರುಗಳು ಜಿಲ್ಲೆ ನಿರ್ಣಾಮ ಮಾಡಲು ಸೇರಿಕೊಂಡಿದ್ದಾರೆ’ ಹೀಗೆ ಕೆಟ್ಟ ಪದಗಳಲ್ಲಿ ಬೈದಿರೋದು ಮತ್ಯಾರು ಅಲ್ಲ, ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ. ಸಿ. ಮಾಧುಸ್ವಾಮಿ ತುಮಕೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡದ್ದು ಹೀಗೆ.

‘ಜಿಲ್ಲೆಯ ಆಡಳಿತ ಯಂತ್ರ ಹಳಿತಪ್ಪಿದೆ, ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ, ಅಭಿವೃದ್ಧಿ ಕುಂಠಿತಗೊಂಡಿರುವುದರಿಂದಾಗಿ ಕುಪಿತಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಜೆ. ಸಿ ಮಾಧ್ಉಸ್ವಾಮಿ ಈ ರೀತಿಯಾಗಿ ಬೈದಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ’ ಎಂಬ ಆರೋಪ, ಟೀಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದವು. ಇದರಿಂದ ಸಿಟ್ಟಿಗೆದ್ದ ಸಚಿವರು ಸಭೆಯಲ್ಲೇ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.

ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಹರೀಶ್ ಬಾಬು ಅವರಿಂದ ಪ್ರಗತಿಯ ಮಾಹಿತಿ ಕೇಳಿದರು. ‘ಆರ್ಥಿಕ ವರ್ಷದ ಅಂತ್ಯಕ್ಕೆ ಬಂದಿದ್ದರೂ ಇನ್ನೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಇದೇ ರೀತಿಯಾದರೆ ಬಂದಿರುವ ಹಣ ಸರ್ಕಾರಕ್ಕೆ ವಾಪಾಸಗಲಿದೆ’ ಎಂದು ಸಿಟ್ಟುಗೊಂಡರು. ‘ನಿಮ್ಮಂತಹವರಿಂದ ಏನು ಕೆಲಸ ಮಾಡಿಸುವುದು’ ಎಂದು ಚುಚ್ಚಿದರು.

ನಂತರ ತಾಲೂಕುಗಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರುಗಳಿಂದ ಮಾಹಿತಿ ಪಡೆದುಕೊಂಡರು. ಗುಬ್ಬಿ ಎಂಜಿನಿಯರ್ ವಿವರ ನೀಡುವ ಸಮಯದಲ್ಲಿ ಈವರೆಗೂ ಯಾವುದೇ ಕೆಲಸಕ್ಕೂ ಕಾರ್ಯಾದೇಶ ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆ ಸಮಯದಲ್ಲಿ ಒಟ್ಟಾರೆಯಾಗಿ ಜಿ. ಪಂ. ಎಂಜಿನಿಯರುಗಳನ್ನು ತರಾಟೆಗೆ ತೆಗೆದುಕೊಂಡರು.

Exit mobile version