ಬೀದಿಯಲ್ಲೇ ಹೊಡೆದಾಡಿಕೊಂಡ ಸಚಿವ ಸುಧಾಕರ್‌ ಗನ್‌ ಮ್ಯಾನ್‌, ಕಾರು ಚಾಲಕ

ಬೆಂಗಳೂರು, ಮಾ. 19: ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಅವರ ಗನ್‌ ಮ್ಯಾನ್‌ ಹಾಗೂ ಕಾರು ಚಾಲಕ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಸುಧಾಕರ್‌ ಮನೆಯ ಖಾಸಗಿ ಚಾಲಕ ಸೋಮಶೇಖರ್‌ ಮತ್ತು ಗನ್‌ ಮ್ಯಾನ್‌ ತಿಮ್ಮಯ್ಯ ಅವರು ಬೀದಿಯಲ್ಲಿ ಜಗಳವಾಡಿದ್ದಾರೆ. ಈ ಸಂಬಂಧದ ವಿಡಿಯೊ ವೈರಲ್‌ ಆಗಿದೆ. ಜಗಳವಾಡುತ್ತಿದ್ದ ಅವರನ್ನು ಬಿಡಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

ಗುರುವಾರ ಸಚಿವ ಸುಧಾಕರ್ ಅವರು ಮನೆ ಬಳಿ ಅಂಗವಿಕಲರೊಬ್ಬರು ಟೀ ಮಾರಾಟ ಮಾಡಲು ಬಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಗನ್​ಮ್ಯಾನ್ ತಿಮ್ಮಯ್ಯ, ಟೀ ಮಾರುವ ವಿಶೇಷಚೇತನ ವ್ಯಕ್ತಿಗೆ ಹೊಡೆದಿದ್ದಾರೆ. ಘಟನೆ ನೋಡಿದ್ದ ಖಾಸಗಿ ವಾಹನ ಚಾಲಕ ಸೋಮಶೇಖರ್ ಸಚಿವರಿಗೆ ದೂರು ಕೊಟ್ಟಿರಬಹುದಾ ಎಂಬ ಅನುಮಾನದಿಂದ ಸೋಮಶೇಖರ್ ಮೇಲೆ ತಿಮ್ಮಯ್ಯ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ಘಟನೆ ಸಚಿವ ಸುಧಾಕರ್ ಮನೆ ಮುಂದಿನ ರಸ್ತೆಯಲ್ಲೇ ನಡೆದಿದೆ

Exit mobile version